ಮಂಗಳೂರು : ಬಂಟ್ಸ್ ಹಾಸ್ಟೆಲ್ ವೃತ್ತ ಲೋಕಾರ್ಪಣೆ
ಮಂಗಳೂರು, ಮೇ 12 : ಬಂಟರ ಯಾನೆ ನಾಡವರ ಮಾತೃ ಸಂಘದ ಶತಮಾನೋತ್ಸವ ಆರಂಭದ ಅಂಗವಾಗಿ ಪುನರ್ ನಿರ್ಮಾಣಗೊಂಡಿರುವ ಬಂಟ್ಸ್ ಹಾಸ್ಟೆಲ್ ನೂತನ ವೃತವನ್ನು ಮಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿದೆ. ರಸ್ತೆಯ ಕಾಂಕ್ರೀಟ್ ಕಾಮಗಾರಿ ಸಂದರ್ಭದಲ್ಲಿ ವೃತ್ತವನ್ನು ತೆಗೆಯಲಾಗಿತ್ತು. ಸದ್ಯ ಅದನ್ನು ಪುನರ್ ಪ್ರತಿಷ್ಠಾಪಿಸಿ ಪಾಲಿಕೆಗೆ ನೀಡಲಾಗಿದೆ.
ನಗರಾಭಿವೃದ್ಧಿ
ಸಚಿವ
ವಿನಯ
ಕುಮಾರ್
ಸೊರಕೆಯವರು
ನೂತನ
ವೃತ್ತದಲ್ಲಿ
ರಾಷ್ಟ್ರಧ್ವಜಕ್ಕೆ
ಪುಷ್ಪಾರ್ಚನೆ
ಮಾಡುವ
ಮೂಲಕ
ವೃತ್ತವನ್ನು
ಉದ್ಘಾಟಿಸಿದರು.
ಬಂಟರ
ಯಾನೆ
ನಾಡವರ
ಸಂಘದ
ಅಧ್ಯಕ್ಷ
ಅಜಿತ್
ಕುಮಾರ್
ಮಾಲಾಡಿ
ಅವರು
ಎಲೆ
ಅಡಕೆಯನ್ನು
ಮೇಯರ್
ಮಹಾಬಲ
ಮಾರ್ಲ
ಅವರಿಗೆ
ನೀಡುವ
ಮೂಲಕ
ವೃತ್ತವನ್ನು
ಮಂಗಳೂರು
ಪಾಲಿಕೆಗೆ
ಹಸ್ತಾಂತರಿಸಿದರು.
ನೂರು ವರ್ಷದ ಹಿಂದೆ ನಿರ್ಮಾಣ ಮಾಡಿದ ಬಂಟ್ಸ್ ಹಾಸ್ಟೆಲ್ ವೃತ್ತವು ಜೀರ್ಣಾವಸ್ಥೆಯಲ್ಲಿದ್ದ ಕಾರಣ ಇಪ್ಪತ್ತು ವರ್ಷಗಳ ಹಿಂದೆ ಬಂಟರ ಮಾತೃಸಂಘವು ಈ ವೃತ್ತವನ್ನು ಪುನರ್ ನಿರ್ಮಾಣ ಮಾಡಿತ್ತು. ಆದರೆ, ರಸ್ತೆಯ ಕಾಂಕ್ರಿಟೀಕರಣ ಸಂದರ್ಭ ಈ ವೃತ್ತವನ್ನು ತೆಗೆಯಲಾಗಿತ್ತು. ಸದ್ಯ ವೃತ್ತವನ್ನು ಪುನರ್ ನಿರ್ಮಾಣ ಮಾಡಲಾಗಿದೆ.
ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲ್ , ಶಾಸಕರಾದ ಜೆ. ಆರ್. ಲೋಬೋ, ಶಕುಂತಳಾ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಜಿಲ್ಲಾಧಿಕಾರಿ ಎ. ಬಿ. ಇಬ್ರಾಹಿಂ ಮುಂತಾದವರು ಪಾಲ್ಗೊಂಡಿದ್ದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಪರವಾಗಿ ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮೇಘನಾಥ ಶೆಟ್ಟಿ, ಕೋಶಾಧಿಕಾರಿ ಸಿಎ. ಕೆ. ಮನಮೋಹನ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಕಷ್ಣಪ್ರಸಾದ್ ರೈ, ಜಗನ್ನಾಥ ಶೆಟ್ಟಿ ಬಾಳ, ಜಯರಾಮ ಸಾಂತ, ಉಮೇಶ್ ರೈ ಮುಂತಾದವರು ಉಪಸ್ಥಿತರಿದ್ದರು.