ಮಂಗಳೂರು: ಇನ್ನೂ ಮೂರು ಬಾಂಬ್ ಇಟ್ಟಿರುವುದಾಗಿ ಬೆದರಿಕೆ
ಮಂಗಳೂರು, ಜನವರಿ 20: ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ ಆಗಿದ್ದು, ತೀವ್ರ ಆತಂಕ ಸೃಷ್ಟಿಸಿದೆ. ಬಾಂಬ್ ಅನ್ನು ನಿಷ್ಕ್ರಿಯ ಮಾಡುವ ಮೊದಲೇ ಮಂಗಳೂರಿನಲ್ಲೇ ಇನ್ನೂ ಮೂರು ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಬಂದಿದೆ.
ಮಧ್ಯಾಹ್ನ 2:50 ರ ಸುಮಾರಿಗೆ ಕರೆ ಮಾಡಿದ ಅಗಂತುಕ ಮೂರು ಕಡೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಒಡ್ಡಿದ್ದು, ಇಂಡಿಗೋ ಕ್ಯಾಬಿನ್ ಬಳಿ ಒಂದು ಬಾಂಬ್ ಇಟ್ಟಿದ್ದೇವೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾರೆ.
Live : ಮಂಗಳೂರಲ್ಲಿ ಬಾಂಬ್ ಪತ್ತೆ; ಕೆಂಜಾರು ಮೈದಾನದಲ್ಲಿ ನಿಷ್ಕ್ರಿಯ
ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಪೊಲೀಸರು, ವಿಮಾನ ನಿಲ್ದಾಣ ಪೊಲೀಸರು ಹಾರಲು ತಯಾರಾಗಿದ್ದ ಇಂಡಿಗೋ ವಿಮಾನವನ್ನು ತಡೆದು ಪ್ರಯಾಣಿಕರ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಇಂಡಿಗೋ ವಿಮಾನ ನಿಲ್ದಾಣದ ಕ್ಯಾಬಿನ್ ಸೇರಿದಂತೆ ಇಡೀಯ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಮಂಗಳೂರಿನಿಂದ ಹೈದಬಾರಾದ್ ಗೆ ಹೊರಟಿದ್ದ ವಿಮಾನವನ್ನು ತಡೆಯಲಾಗಿದ್ದು, ಅದರಲ್ಲಿಯೂ ಒಂದು ಶಂಕಿತ ಬ್ಯಾಗ್ ದೊರೆತಿದೆ ಎನ್ನಲಾಗಿದೆ. ಬ್ಯಾಗ್ ಬಗ್ಗೆ ತನಿಖೆ ನಡೆಯುತ್ತಿದೆ.
ಇಂದು ಬೆಳಿಗ್ಗೆ ಸಿಕ್ಕ ಸಜೀವ ಬಾಂಬ್ ಅನ್ನು ಮಂಗಳೂರು ವಿಮಾನ ನಿಲ್ದಾಣ ಸಮೀಪದ ಕೆಂಜೇರು ಮೈದಾನಕ್ಕೆ ತೆಗೆದುಕೊಂಡು ಬರಲಾಗಿದ್ದು, ಬಾಂಬ್ ಅನ್ನು ಸ್ಪೋಟಿಸುವ ಕಾರ್ಯ ಜಾರಿಯಲ್ಲಿದೆ.