ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು: ಎನ್ನೆಸ್ಸೆಸ್ ಘಟಕದಿಂದ ರಕ್ತದಾನ ಶಿಬಿರ

|
Google Oneindia Kannada News

ಬೆಂಗಳೂರು, ಜ. 30 : ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಹಳೇ ವಿದ್ಯಾರ್ಥಿ ಸಂಘ ಮತ್ತು ವಿದ್ಯಾರ್ಥಿ ಸಂಘ ಹಾಗೂ ಕಸ್ತೂರ್ ಬಾ ಮೆಡಿಕಲ್ ಕಾಲೇಜು ವತಿಯಿಂದ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಅಂತರಾಷ್ಟ್ರೀಯ ಕ್ರೀಡಾಪಟು, ಕಾಲೇಜಿನ ಸಂಚಾಲಕ ನಗರ್ ನಾರಾಯಣ ಶೆಣೈ ಉದ್ಘಾಟಿಸಿ ರಕ್ತದಾನದ ಮಹತ್ವದ ಬಗ್ಗೆ ಮಾತನಾಡಿದರು.[ಅರಸ್ ಬೈಕ್ ಸಾಹಸಕ್ಕೆ ಸಾಕ್ಷಿಯಾದ ಮಂಗಳೂರಿಗರು]

mangaluru

ಮನ್ನೋರ್ವ ಅತಿಥಿ ಡಾ. ಯಶವಂತ್ ಮಾತನಾಡಿ ರಕ್ತದಾನ ಮಾಡಬೇಕಾದರೆ ಇರಬೇಕಾದ ದೈಹಿಕ ಅರ್ಹತೆಗಳ ಬಗ್ಗೆ, ರಕ್ತದಾನ ಮಾಡಿದ 24 ಗಂಟೆಗಳ ಒಳಗೆ ನಾವು ಕೊಟ್ಟ ರಕ್ತ ಪುನ: ಉತ್ಪತ್ತಿಯಾಗುವುದು. ರಕ್ತದಾನ ಮಾಡಿದ್ದರಿಂದ ನಾಶವಾಗುವ ಎಲ್ಲಾ ಜೀವಕೋಶಗಳು 3 ತಿಂಗಳೊಳಗೆ ಸಹಜ ಸ್ಥಿತಿಗೆ ಬರುತ್ತದೆ ಎಂದು ತಿಳಿಸಿದರು.

ಪ್ರಾಚಾರ್ಯೆ ಡಾ. ಕಾರ್ಮೆಲೀಟಾ ಗೋವಿಯಸ್ ಮಾತನಾಡಿ, ಜಿನ ಸಮಾಜಸೇವೆಯಿರುವುದು ರಕ್ತದಾನದಲ್ಲಿಯೇ.ರಕ್ತದಾನ ಮಾಡಿದರೆ ಮೂರು ಜೀವಗಳನ್ನು ಉಳಿಸಿದ ತೃಪ್ತಿ ಸಿಗುತ್ತದೆ ಎಂದು ಹೇಳಿದರು.[ಮಂಗಳೂರು: ಪತ್ರಕರ್ತರಿಗೆ ವರ್ಷ ಕಾಲ ಆರೋಗ್ಯ ತಪಾಸಣೆ]

ಎನ್ ಎಸ್ ಎಸ್ ಘಟಕದ ಅಧಿಕಾರಿ ಪ್ರೊ. ವಿಶ್ವನಾಥ್ ಆಚಾರ್ಯನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶರತ್ ಎನ್. ರಾವ್., ಸುಶಾಂತ್ ಜಾದವ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ , ವಾಣಿಜ್ಯ ಸಂಘದ ಕಾರ್ಯದರ್ಶಿ ಯೋಗೇಶ್ ಶರ್ಮ ಹಾಜರಿದ್ದರು.

English summary
Blood Donation Camp in association with students Union Council, N.S.S unit, Alumni Association and Kasturba Medical College was held at Besant Evening College Auditorium. This programme was inaugurated by Mr. Nagar Narayan Shenoy, eminent advocate and International level sportsman, Correspondent of the Besant Evening College.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X