ರಮಾನಾಥ್ ರೈ ಎಲ್ಲಾ ವಿಚಾರ ಕರಗತ ಮಾಡಿಕೊಂಡಿರುವ ಸರ್ವಜ್ಞ: ನಳಿನ್ ವ್ಯಂಗ್ಯ
Recommended Video
ಮಂಗಳೂರು, ಜೂನ್ 02: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಹಾಗು ಕಾಂಗ್ರೆಸ್ ಪಾಳಯದಲ್ಲಿ ರಾಜಕೀಯ ಚಟುವಟಿಕೆ ಜೋರಾಗಿದೆ. ಬಿಜೆಪಿ ಹಾಗು ಕಾಂಗ್ರೆಸ್ ಮುಖಂಡರ ವಾಕ್ಸಮರ ಆರಂಭವಾಗಿದೆ. ನಾಯಕರ ಏಕಿಗೆ ತಿರುಗೇಟಿನ ಮಾತುಗಳು ಜಿಲ್ಲೆಯ ಜನರನ್ನು ರಂಜಿಸಲು ಆರಂಭಿಸಿವೆ.
ಇಂದು ಮುಂಜಾನೆ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಬಿ.ರಮಾನಾಥ್ ರೈ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ನಳಿನ್ ಕುಮಾರ್ ಕಟೀಲ್ ಒಬ್ಬ ಅತ್ಯಂತ ಸೊಂಬೇರಿ ಸಂಸದ, ಸದಾಕಾಲ ಮಂಗಳೂರಿನ ಸರ್ಕಿಟ್ ಹೌಸ್ ನಲ್ಲಿ ನಳಿನ್ ಮಲಗಿರುತ್ತಾರೆ ಎಂದು ಅವರು ವ್ಯಂಗ್ಯ ವಾಡಿದ್ದರು. ರಮಾನಾಥ್ ರೈ ಅವರ ಹೇಳಿಕೆಗೆ ಈಗ ಸಂಸದ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡಿದ ಸಂಸದ ಕಟೀಲ್ ಸೊಂಬೇರಿ ಎಂಬ ರಮಾನಾಥ ರೈ ಹೇಳಿಕೆಗೆ ತಿರುಗೇಟು ನೀಡಿದ್ದು ರಾಜ್ಯದ ಜನರಿಗೆ ಅದರಲ್ಲೂ ದಕ್ಷಿಣ ಕನ್ನಡ ದ ಜನರಿಗೆ ಯಾರು ಸೊಂಬೇರಿ ಎಂಬುದು ತಿಳಿದಿದೆ. ಅದಕ್ಕಾಗಿಯೇ ಕಳೆದ ಚುನಾವಣೆಯಲ್ಲಿ ರಮಾನಥ್ ರೈ ಅವರನ್ನು ಜನರು ನಿದ್ರಿಸಲು ಮನೆಗೆ ಕಳುಹಿಸಿದ್ದಾರೆ ಎಂದು ಕಿಡಿಕಾರಿದರು.
ಸಚಿವ ಸ್ಥಾನವನ್ನು ನಿಭಾಯಿಸಲಾಗದ ಅರಣ್ಯ ಸಚಿವರನ್ನು ಚುನಾವಣೆಯಲ್ಲಿ ಸೋಲಿಸಿ ಜನರು ಅವರನ್ನ ಕಾಡಿಗೆ ಕಳುಹಿಸಿದ್ದಾರೆ ಎಂದು ಅವರು ವ್ಯಂಗ್ಯ ವಾಡಿದರು. ರಮಾನಾಥ್ ರೈ ಗಳ ಆರೋಪಗಳಿಗೆ ನಾನು ಕಿವಿಗೊಡಲ್ಲ. ಕಳೆದ 30 ವರ್ಷಗಳಲ್ಲಿ ತಾನು ಸಚಿವನಾಗಿದ್ದೇ . ಎನ್ನುವುದು ಅವರ ಸಾಧನೆ. ಏನೂ ಕೆಲಸ ಇಲ್ಲದವರು ಈ ರೀತಿ ಹೇಳಿಕೆ ನೀಡುತ್ತಾರೆ . ಇನ್ನುಂದು ಅದ್ಬುತ ವಿಚಾರ ಅಂದರೆ ಪ್ರಪಂಚದ ಎಲ್ಲಾ ವಿಷಯದಲ್ಲಿ ರಮಾನಾಥ ರೈ ಸರ್ವಜ್ಞ ಎಂದು ಅವರು ವ್ಯಂಗ್ಯ ವಾಡಿದರು.