ಇಲ್ಲಿನ ರಾಜಕೀಯ ವಿದ್ಯಮಾನಗಳಿಗೆ ಬಿಜೆಪಿಯೇ ನೇರ ಹೊಣೆ– ಐವನ್ ಡಿಸೋಜಾ
ಮಂಗಳೂರು, ಜುಲೈ 13: ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುತ್ತಿರುವ ವಿದ್ಯಮಾನಗಳಿಗೆ ಬಿಜೆಪಿಯೇ ನೇರ ಹೊಣೆ ಎಂದು ವಿಧಾನ ಪರಿಷತ್ನ ಸದಸ್ಯ ಐವನ್ ಡಿಸೋಜ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಶಾಸಕರಿಗೆ ಹಣ ಹಾಗೂ ಅಧಿಕಾರದ ಆಮಿಷವೊಡ್ಡಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಪರೇಷನ್ ಕಮಲದ ಯತ್ನದಲ್ಲಿ 2009ರಲ್ಲಿ ಯಶಸ್ವಿಯಾಗಿದ್ದ ಬಿಜೆಪಿ, 2013ರಲ್ಲಿ ವಿಪಕ್ಷ ಸ್ಥಾನವನ್ನು ಅನುಭವಿಸಬೇಕಾಯಿತು. ಚುನಾಯಿತ ಪ್ರತಿನಿಧಿಗಳು ಒಂದು ಪಕ್ಷದಿಂದ ಮತ್ತೊಂದು ಪಕ್ಷವನ್ನು ಸೇರುವುದು ತಪ್ಪಲ್ಲ ಹಾಗೂ ಅದು ಅಸ್ವಾಭಾವಿಕ ಪ್ರಕ್ರಿಯೆಯೂ ಅಲ್ಲ. ಆದರೆ ಶಾಸಕರನ್ನು ರಾಜೀನಾಮೆ ಕೊಡಿಸಿ ಕಾನೂನನ್ನು ಗಾಳಿಗೆ ತೂರಿ ಸದನದ ಬಲ ಕಡಿಮೆ ಮಾಡುವ ಪ್ರಕ್ರಿಯೆ ರಾಜ್ಯದಲ್ಲಿ ಬಿಜೆಪಿ ನಾಯಕರಿಂದ ನಡೆದಿದೆ ಎಂದು ಕಿಡಿಕಾರಿದರು.
ಉಂಡೂ ಹೋದ ಕೊಂಡೂ ಹೋದ ಸರ್ಕಾರ; ಕೋಟ ಶ್ರೀನಿವಾಸ್ ವ್ಯಂಗ್ಯ
ಶಾಸಕರು
ವೈಯಕ್ತಿಕ
ನೆಲೆಯಲ್ಲಿ
ರಾಜೀನಾಮೆ
ನೀಡಬೇಕಾದರೂ
ಅದು
ನೈಜವಾಗಿರಬೇಕು.
ಪೊಲೀಸ್
ರಕ್ಷಣೆಯಲ್ಲಿ
ಬಂದು
ರಾಜೀನಾಮೆ
ನೀಡಲು
ಪ್ರೇರೇಪಿಸುವಂಥ
ಕ್ರಮ
ಜನಪ್ರತಿನಿಧಿಗಳು
ತಲೆತಗ್ಗಿಸುವಂಥದ್ದು
ಎಂದು
ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ
ನಡೆಯುತ್ತಿರುವ
ಎಲ್ಲಾ
ವಿದ್ಯಮಾನಗಳಿಗೆ
ಪ್ರಧಾನಿ
ನರೇಂದ್ರ
ಮೋದಿ
ಹಾಗೂ
ಕೇಂದ್ರ
ಸಚಿವ
ಅಮಿತ್
ಶಾ
ಅವರೇ
ನೇರ
ಹೊಣೆ.
ಇದರಿಂದ
ಬಿಜೆಪಿ
ಬಣ್ಣ
ಬಯಲಾಗಿದೆ.
ಬಿಜೆಪಿಗೆ
ಪ್ರಜಾಪ್ರಭುತ್ವದಲ್ಲಿ
ನಂಬಿಕೆ
ಇಲ್ಲ
ಎಂಬುದು
ಜನತೆಗೆ
ಮನದಟ್ಟಾಗಿದೆ
ಎಂದು
ಹೇಳಿದರು.
ಶಾಸಕರ ರಾಜೀನಾಮೆಗೆ ಸಂಬಂಧಿಸಿದಂತೆ ಇದುವರೆಗೂ ಸ್ಪೀಕರ್ ಸರಿಯಾದ ತೀರ್ಮಾನವನ್ನೇ ಕೈಗೊಂಡಿದ್ದಾರೆ. ಸ್ಪೀಕರ್ರವರು ದೇಶಕ್ಕೆ ಮಾದರಿಯಾಗುವ ಐತಿಹಾಸಿಕ ತೀರ್ಮಾನವನ್ನು ನೀಡುವ ನಿರೀಕ್ಷೆ ಇದೆ. ಅತೃಪ್ತ ಶಾಸಕರು ಬಿಜೆಪಿಯ ಬಂಧನದಿಂದ ಬಿಡಿಸಿಕೊಂಡು ಪಕ್ಷಕ್ಕೆ ಹಿಂದಿರುಗಿ ರಾಜೀನಾಮೆ ಹಿಂಪಡೆಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.