ಅಜಿಲ ಮೊಗ್ರುವಿನಲ್ಲಿ ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ: 11.72 ಲಕ್ಷ ರೂ.ಮೌಲ್ಯದ ವಸ್ತುಗಳು ವಶಕ್ಕೆ
ಮಂಗಳೂರು, ಅಕ್ಟೋಬರ್ 17: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಅಡ್ಡೆಗಳ ಮೇಲೆ ಪೊಲೀಸರು ದಾಳಿ ಮುಂದುವರೆಸಿದ್ದಾರೆ. ಇಂದು ಬಂಟ್ವಾಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧಿಕ್ಷಕರಾದ ಸೋನವಣೆ ಋಷಿಕೇಶ್ ಭಗವಾನ್ ಅವರ ನೇತೃತ್ವದಲ್ಲಿ ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಲಾಗಿದೆ.
ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರ ತಂಡದೊಂದಿಗೆ ಮಣಿ ನಾಲ್ಕೂರು ಗ್ರಾಮದ ಅಜಿಲ ಮೊಗ್ರು ಎಂಬಲ್ಲಿನ ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಲಾಗಿದೆ.
ಮರಳು ಮಾಫಿಯಾ ನಿಯಂತ್ರಣಕ್ಕೆ ಮುಖ್ಯಮಂತ್ರಿ ನೀಡಿದ ಖಡಕ್ ಸೂಚನೆ
ದಾಳಿ ಸಂದರ್ಭದಲ್ಲಿ 2 ನಾಡದೋಣಿಗಳ ಸಹಾಯದಿಂದ ಮರಳುಗಾರಿಕೆ ನಡೆಸಿ ದಡದಲ್ಲಿ ನಿಲ್ಲಿಸಿದ್ದ ಟಿಪ್ಪರ್ ಲಾರಿಗೆ ಮರಳನ್ನು ಲೋಡು ಮಾಡುತ್ತಿದ್ದು ಕಂಡುಬಂದಿದೆ . ಪೊಲೀಸರ ಜೀಪನ್ನು ಕಂಡೊಡನೆ ಮರಳುಗಾರಿಕೆಯಲ್ಲಿ ತೊಡಗಿದ್ದವರು ಅಲ್ಲಿಂದ ಪರಾರಿಯಾಗಿದ್ದಾರೆ.
ಭೂ ಸಮಾಧಿಯಾದ ಚಾಮರಾಜನಗರದ ಇಬ್ಬರು ಕಾರ್ಮಿಕರು
ದಾಳಿ
ಸಂದರ್ಭದಲ್ಲಿ
1
ಟಿಪ್ಪರ್
ಲಾರಿ
ಹಾಗೂ
2
ಕಬ್ಬಿಣದ
ದೋಣಿಗಳು
ಸೇರಿದಂತೆ
ಅಪಾರ
ಪ್ರಮಾಣದಲ್ಲಿ
ಮರಳು
ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ
ಸ್ವತ್ತುಗಳ
ಒಟ್ಟು
ಮೌಲ್ಯ
11.72
ಲಕ್ಷ
ರೂಪಾಯಿ
ಎಂದು
ಅಂದಾಜಿಸಲಾಗಿದೆ.
ವಶಪಡಿಸಿಕೊಂಡ
ಸ್ವತ್ತುಗಳನ್ನು
ಹಾಗೂ
ಮರಳನ್ನು
ಗಣಿ
ಮತ್ತು
ಭೂ
ವಿಜ್ಞಾನ
ಇಲಾಖೆ
ಅಧಿಕಾರಿಗಳಿಗೆ
ಹಸ್ತಾಂತರಿಸಲಾಗಿದೆ.