ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಳ್ವಾಸ್ ವರ್ಣ ವಿರಾಸತ್ 2019 ಪ್ರಶಸ್ತಿಗೆ ಚಿತ್ರಕಲಾವಿದ ಸೂರ್ಯ ಪ್ರಕಾಶ್‍ ಆಯ್ಕೆ

|
Google Oneindia Kannada News

ಮಂಗಳೂರು, ಜನವರಿ 02: ಖ್ಯಾತ ಚಿತ್ರಕಲಾವಿದ ಸೂರ್ಯ ಪ್ರಕಾಶ್ ಅವರನ್ನು ಈ ಬಾರಿಯ ಆಳ್ವಾಸ್ ವರ್ಣ ವಿರಾಸತ್ 2019 ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಆಳ್ವಾಸ್ ವಿರಾಸತ್ ನ ಕೊನೆಯ ದಿನ ಜನವರಿ 6ರಂದು ಸಂಜೆ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ತಿಳಿಸಿದ್ದಾರೆ.

ಜನವರಿ 4 ರಂದು ವೈಭವದ ಆಳ್ವಾಸ್ ವಿರಾಸತ್ ಗೆ ಚಾಲನೆಜನವರಿ 4 ರಂದು ವೈಭವದ ಆಳ್ವಾಸ್ ವಿರಾಸತ್ ಗೆ ಚಾಲನೆ

ಸೂರ್ಯ ಪ್ರಕಾಶ್ ಅವರು ತಮ್ಮ ಮೊದಲನೇ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು 1963ರಲ್ಲಿ, ಹೈದರಬಾದಿನಲ್ಲಿ ನೀಡಿದ್ದು, ಈಗಾಗಲೇ ಸುಮಾರು 50ಕ್ಕಿಂತಲೂ ಅಧಿಕ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಭಾರತ ಮತ್ತು ಇತರ ದೇಶಗಳಲ್ಲಿ ನೀಡಿದ್ದಾರೆ.

Artist Surya Prakash selected for 2019 Alvas Varna Virasth Award

ಇವರ ಕಲಾಕೃತಿಗಳು ನವ್ಯತತ್ತ್ವವನ್ನು ಹೊಂದಿದ್ದವು. ಆದರೆ ಅವರು ರಚಿಸುತ್ತಿದ್ದ ಚಿತ್ರಕಲೆಗಳ ಬಾಂಧವ್ಯ ಹೆಚ್ಚುತ್ತಿದ್ದಂತೆ, ಜಗತ್ತಿನ ಕೆಲವು ಸುಂದರವಾದ ಅಂಶಗಳನ್ನು ಮತ್ತು ಅವರದ್ದೇ ಆದ ವಿಧಾನವನ್ನು ಒಂದು ಗೂಡಿಸಿ ಹೊಸ ವಿಧಾನವನ್ನು ರೂಪಿಸಿಕೊಂಡರು.

English summary
Famous artist Surya Prakash selected for 2019 Alvas Varna Virasth Award.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X