ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೋಕಿ ಜೀವನಕ್ಕಾಗಿ ದರೋಡೆ ಕೃತ್ಯಕ್ಕೆ ಇಳಿದಿದ್ದ ಐವರ ಬಂಧನ

|
Google Oneindia Kannada News

ಮಂಗಳೂರು, ಫೆಬ್ರವರಿ 28: ಶೋಕಿ ಜೀವನ ನಡೆಸಲು ದರೋಡೆ ಕೃತ್ಯಕ್ಕೆ ಇಳಿದಿದ್ದ ಐವರನ್ನು ಬಂಧಿಸಲಾಗಿದೆ. ಈ ಅಂತಾರಾಜ್ಯ ದರೋಡೆಕೋರರನ್ನು ಉಳ್ಳಾಲ ಠಾಣಾ ಪೊಲೀಸರು ಹಾಗೂ ರೌಡಿ ನಿಗ್ರಹ ದಳದ ಸಿಬ್ಬಂದಿ ಬಂಧಿಸಿದ್ದಾರೆ.

ಬಂಧಿತರನ್ನು ಕೇರಳದ ತ್ರಿಶ್ಶೂರ್ ನ ಮೊಹಮ್ಮದ್ ಫಾಝಿಲ್ (24), ಮೊಹಮ್ಮದ್ ಶರೀಫ್ (25), ಅನಾಸ್ (21), ಸಲೀಂ (30) ಹಾಗೂ ಜಿ. ಸುಜಿತ್ (24) ಎಂದು ಗುರುತಿಸಲಾಗಿದೆ. ಬಂಧಿತರು ಮಂಗಳೂರು ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿಯಲ್ಲಿ ದರೋಡೆ ನಡೆಸಲು ಸಂಚು ರೂಪಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

5 inter state thieves arrested in Mangaluru

ರೈಲಿನಲ್ಲಿ ಪ್ರಯಾಣಿಕರಂತೆ ಬಂದು ಏನೇನು ಕಳ್ಳತನ ಮಾಡ್ತಾರೆ ಗೊತ್ತಾ?ರೈಲಿನಲ್ಲಿ ಪ್ರಯಾಣಿಕರಂತೆ ಬಂದು ಏನೇನು ಕಳ್ಳತನ ಮಾಡ್ತಾರೆ ಗೊತ್ತಾ?

ಬಂಧಿತರು ವ್ಯಾಗನಾರ್ ಕಾರಿನ ನಂಬರ್ ಪ್ಲೇಟ್ ಬದಲಾಯಿಸಿದ್ದು, ಮಾರಕಾಸ್ತ್ರಗಳನ್ನು ಇರಿಸಿಕೊಂಡು ದರೋಡೆ ನಡೆಸಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳಿಂದ 4 ಲಕ್ಷ ರೂಪಾಯಿ ಮೌಲ್ಯದ ಸ್ವತ್ತು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

English summary
Ulalla Police station anti rowdy squad arrested 5 inter state thieves in Talapady.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X