ಬಂಟ್ವಾಳ ಬಳಿ ವನ್ಯ ಪ್ರಾಣಿ ಬೇಟೆಗೆ ಯತ್ನ: ನಾಲ್ವರ ಬಂಧನ
ಮಂಗಳೂರು, ಡಿಸೆಂಬರ್ 14: ಕಾಡಿಗೆ ಅಕ್ರಮ ಪ್ರವೇಶ ಮಾಡಿ ವನ್ಯಪ್ರಾಣಿ ಬೇಟೆಗೆ ಯತ್ನಿಸುತ್ತಿದ್ದ ಭೇಟೆಗಾರರನ್ನು ಬಂಟ್ವಾಳ ಪ್ರಾದೇಶಿಕ ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂಧಿಸಿದ್ದಾರೆ.
7 ಸರಗಳ್ಳತನ ಪ್ರಕರಣ ಭೇದಿಸಿದ ಮಂಗಳೂರು ಪೊಲೀಸರು
ಬಂಟ್ವಾಳ ತಾಲೂಕಿನ ದೇವಸ್ಯ ಪಡೂರು ಗ್ರಾಮದ ಕೊಡ್ಯಮಲೆ ಮೀಸಲು ಅರಣ್ಯದ ಮಯ್ಯಿದೊಟ್ಟು ಎಂಬಲ್ಲಿ ಕಾಡಿಗೆ ಅಕ್ರಮ ಪ್ರವೇಶ ಮಾಡಿ ವನ್ಯ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಅರಣ್ಯ ಇಲಾಖೆಯ ಸಿಬ್ಬಂದಿಗೆ ದೊರೆತಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು 4 ಮಂದಿ ಬೇಟೆಗಾರರನ್ನು ಬಂಧಿಸಿದ್ದಾರೆ.
ಹದಿನೈದು ವರ್ಷದ ವಿದ್ಯಾರ್ಥಿಗೆ ನಗ್ನ ಚಿತ್ರ ಕಳಿಸಿದ 'ಮಾಜಿ ಸುಂದರಿ' ಬಂಧನ
ಬಂಧಿತ ಆರೋಪಿಗಳನ್ನು ಸರಪಾಡಿ ಗ್ರಾಮದ ಸುಲೈಮಾನ್, ಅಹಮ್ಮದ್ ಶರೀಫ್, ಝೈನುದ್ದೀನ್ ಹಾಗೂ ದೇವಸ್ಯ ಪಡೂರು ಗ್ರಾಮದ ಅಬ್ದುಲ್ ಕುಂಞ ಎಂದು ಗುರುತಿಸಲಾಗಿದೆ. ಬಂಧಿತರಿಂದ 1 ಕೋವಿ ಹಾಗೂ ಅದರ ಪರಿಕರಗಳು, 1 ಚಾಕು ಹಾಗೂ 2 ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಬಂಟ್ವಾಳ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಬಂಧಿತ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.