ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂಲ್ಕಿ ಶಾಂಭವಿ ನದಿಯಲ್ಲಿ 3 ಯುವಕರು ನೀರುಪಾಲು

By Sachhidananda Acharya
|
Google Oneindia Kannada News

ಮೂಲ್ಕಿ, ಜುಲೈ 9: ನದಿಗೆ ಈಜಲು ತೆರಳಿದ್ದ ಮೂವರು ನೀರುಪಾಲಾದ ದುರ್ಘ‌ಟನೆ ಇಲ್ಲಿನ ಇಲ್ಲಿನ ಅಧಿಕಾರಿಬೆಟ್ಟು ಬಳಿಯ ಶಾಂಭವಿ ನದಿಯಲ್ಲಿ ನಡೆದಿದೆ.

ಭಾನುವಾರ ಮಧ್ಯಾಹ್ನ ಈ ದುರಂತ ನಡೆದಿದ್ದು ಅಕ್ಷತ್‌, ಕಿಶೋರ್‌ ಮತ್ತು ಮಹೇಶ್‌ ಎನ್ನುವ ಯುವಕರು ನೀರುಪಾಲಾಗಿದ್ದಾರೆ.

3 youths drowned in Shambhavi river at Mulki

ಮಂಗಳೂರಿನಿಂದ 11 ಮಂದಿ ಸ್ನೇಹಿತರು ನದಿ ಸುತ್ತಾ ಮುತ್ತ ತಿರುಗಾಡಲು ಬಂದಿದ್ದರು. ಈ ವೇಳೆ ಮಹೇಶ್‌ ಜತೆಯಲ್ಲಿ ಇಬ್ಬರು ಈಜಲು ತೆರಳಿದ್ದಾರೆ. ಈ ವೇಳೆ ಹೆಜಮಾಡಿಯ ಕಡವು ಬಳಿಯಲ್ಲಿ ನದಿಯಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ತಕ್ಷಣ ಸುದ್ದಿ ತಿಳಿದು ಸ್ಥಳೀಯರು ಮತ್ತು ಅಗ್ನಿ ಶಾಮಕದಳದ ಸಿಬಂದಿಗಳು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮೂವರ ಮೃತದೇಹಗಳು ಪತ್ತೆಯಾಗಿವೆ. ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

English summary
Three youth of Mangaluru drowned in Shambhavi river here in Mulki on July 9.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X