ಮಂಗಳೂರಿನ ಯುನಿಟಿ ಆಸ್ಪತ್ರೆ ಉದ್ಯೋಗಿ ನೇಣಿಗೆ ಶರಣು
ಮಂಗಳೂರು, ಸೆಪ್ಟೆಂಬರ್ 12: ಇಲ್ಲಿನ ಯುನಿಟಿ ಆಸ್ಪತ್ರೆ ಉದ್ಯೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳವಾರ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರು ಹೊರವಲಯ ಸೊಮೇಶ್ವರದ ಉಚ್ಚಿಲ ನಿವಾಸಿ ಸ್ಪೂರ್ತಿ (21 )ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಮಂಗಳೂರಿನ ಯೂನಿಟಿ ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿದ್ದ ಸ್ಪೂರ್ತಿ ಆಸ್ಪತ್ರೆಯ ಇನ್ಷೂರೆನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.
ಕಳೆದ ಒಂದುವರೆ ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದ ಸ್ಪೂರ್ತಿ ಗೆ ಆಸ್ಪತ್ರೆಯಲ್ಲಿ ಕಿರುಕುಳ ನೀಡುತ್ತಿದ್ದರು. ಆಸ್ಪತ್ರೆಯ ಆಡಳಿತ ಮಂಡಳಿ ನಿರಂತರ ಕಿರುಕುಳ ನೀಡುತಿದ್ದರ ಬಗ್ಗೆ ಸ್ಪೂರ್ತಿ ಮನೆಯಲ್ಲಿ ಹೇಳಿಕೊಂಡಿದ್ದಳು ಎಂದು ಪೋಷಕರು ಆರೋಪಿಸಿದ್ದಾರೆ.
ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆನಡೆಸುತ್ತಿದ್ದಾರೆ.
Comments
English summary
Unity Hospital Staff found Hanging at her house Mangaluru on Sep 12. The deceased is identified as Spoorthi(21). It is said she was given lots of torture by the unity hospital members.
Story first published: Tuesday, September 12, 2017, 14:50 [IST]