ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಏಕಾಏಕಿ ಪ್ರಕ್ಷುಬ್ಧಗೊಂಡ ಕಡಲು: ತಿತ್ಲಿ ಪ್ರಭಾವ?

|
Google Oneindia Kannada News

Recommended Video

ಮಂಗಳೂರಿಗೆ ತಿತ್ಲಿ ಚಂಡಮಾರುತದ ಹೊಡೆತ | ಏಕಾಏಕಿ ಜೋರಾದ ಕಡಲ ಅಬ್ಬರ | Oneindia Kannada

ಮಂಗಳೂರು, ಅಕ್ಟೋಬರ್. 10: ಏಕಾಏಕಿ ಕಡಲು ಪ್ರಕ್ಷುಬ್ದಗೊಂಡು ಸಮುದ್ರದ ಅಲೆಗಳು ಜನವಸತಿ ಪ್ರದೇಶಕ್ಕೆ ನುಗ್ಗಿದ ಘಟನೆ ಮಂಗಳೂರಿನಲ್ಲಿ ಇಂದು ಬುಧವಾರ(ಅ.10) ನಡೆದಿದೆ. ನಗರ ಹೊರವಲಯದ ಸೋಮೇಶ್ವರ, ಉಳ್ಳಾಲ, ಉಚ್ಚಿಲ ಪ್ರದೇಶಗಳಲ್ಲಿ ಈ ಘಟನೆ ಸಂಭವಿಸಿದೆ.

ಸಮುದ್ರದ ನೀರು ತೀರದ ಜನವಸತಿ ಪ್ರದೇಶಕ್ಕೆ ನುಗ್ಗಿದ ಪರಿಣಾಮ ಜನರು ಭಯ ಬೀತರಾದರು. ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಆಂಧ್ರ ಮತ್ತು ಒಡಿಶಾದಲ್ಲಿ ಕಾಣಿಸಿಕೊಂಡ ತಿತ್ಲಿ ಚಂಡಮಾರುತದ ಪ್ರಭಾವದಿಂದ ಹೀಗಾಗಿರಬಹುದು ಎಂದು ಹೇಳಲಾಗಿದೆ.

ವಾಯುಭಾರ ಕುಸಿತ: ಆಂಧ್ರ, ಒಡಿಸ್ಸಾಗೆ ಅಪ್ಪಳಿಸಲಿದೆ 'ತಿತ್ಲಿ' ಚಂಡಮಾರುತವಾಯುಭಾರ ಕುಸಿತ: ಆಂಧ್ರ, ಒಡಿಸ್ಸಾಗೆ ಅಪ್ಪಳಿಸಲಿದೆ 'ತಿತ್ಲಿ' ಚಂಡಮಾರುತ

ತಿತ್ಲಿ ಚಂಡಮಾರುತದ ಪರಿಣಾಮ ಪಶ್ಚಿಮ ಕರಾವಳಿಯ ಮೇಲೂ ಆಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿರಲಿಲ್ಲ. ಇಂದು ಮಂಜಾನೆನಿಂದಲೇ ಮಂಗಳೂರು ಹೊರವಲಯದ ಪಣಂಬೂರು, ಉಳ್ಳಾಲ, ಸೋಮೇಶ್ವರ-ಉಚ್ಚಿಲದ ಹಲವು ಕಡೆ ಸಮುದ್ರದ ರೌದ್ರವತಾರ ತಾಳಿದ್ದು ಕಂಡುಬಂತು. ಮುಂದೆ ಓದಿ..

ಭಾರೀ ಗಾತ್ರದ ಅಲೆಗಳು

ಭಾರೀ ಗಾತ್ರದ ಅಲೆಗಳು

ಈ ಹಿಂದೆ ಎಂದೂ ಕೂಡ ಇಂತಹ ವಾತಾವರಣ ಕಡಲ ತೀರದಲ್ಲಿ ಕಂಡು ಬಂದಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯ. ಕರಾವಳಿಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೂ ಕೂಡ ಮುಂಜಾನೆ ಇಂದ ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ತಡಿಗೆ ಅಪ್ಪಳಿಸಿವೆ.

ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚನೆ

ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚನೆ

ಈ ನಡುವೆ ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಂಭವವೂ ಇದೆ ಎನ್ನಲಾಗಿದೆ. ಅಕ್ಟೋಬರ್ 13ರವರೆಗೆ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ.

ಮಂಗಳೂರಿನಲ್ಲಿ ಚಂಡಮಾರುತದ ಭೀತಿ: ಲಂಗರು ಹಾಕಿದ ಸಾವಿರಾರು ಬೋಟ್‌ಗಳುಮಂಗಳೂರಿನಲ್ಲಿ ಚಂಡಮಾರುತದ ಭೀತಿ: ಲಂಗರು ಹಾಕಿದ ಸಾವಿರಾರು ಬೋಟ್‌ಗಳು

'ತಿತ್ಲಿ' ಎಂದು ಹೆಸರು

'ತಿತ್ಲಿ' ಎಂದು ಹೆಸರು

ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿದ್ದು, ಆಂಧ್ರ ಪ್ರದೇಶ ಹಾಗೂ ಒಡಿಸ್ಸಾ ರಾಜ್ಯಗಳಿಗೆ ಭಾರಿ ಚಂಡಮಾರುತ ಅಪ್ಪಳಿಸುವ ಭೀತಿ ಎದುರಾಗಿದೆ. ಬಂಗಾಳಕೊಲ್ಲಿಯಲ್ಲಿ ಉಗಮವಾಗಿರುವ ಈ ಚಂಡಮಾರುತಕ್ಕೆ 'ತಿತ್ಲಿ' ಎಂದು ಹೆಸರು ನೀಡಲಾಗಿದೆ.

ಚಂಡಮಾರುತಕ್ಕೆ ಮಹಿಳೆಯರ ಹೆಸರನ್ನಿಡುತ್ತಾರೆ ಏಕೆ?ಚಂಡಮಾರುತಕ್ಕೆ ಮಹಿಳೆಯರ ಹೆಸರನ್ನಿಡುತ್ತಾರೆ ಏಕೆ?

'ತಿತ್ಲಿ' ಎಂದು ಹೆಸರು

'ತಿತ್ಲಿ' ಎಂದು ಹೆಸರು

ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿದ್ದು, ಆಂಧ್ರ ಪ್ರದೇಶ ಹಾಗೂ ಒಡಿಸ್ಸಾ ರಾಜ್ಯಗಳಿಗೆ ಭಾರಿ ಚಂಡಮಾರುತ ಅಪ್ಪಳಿಸುವ ಭೀತಿ ಎದುರಾಗಿದೆ. ಬಂಗಾಳಕೊಲ್ಲಿಯಲ್ಲಿ ಉಗಮವಾಗಿರುವ ಈ ಚಂಡಮಾರುತಕ್ಕೆ 'ತಿತ್ಲಿ' ಎಂದು ಹೆಸರು ನೀಡಲಾಗಿದೆ.

English summary
Sea water rushed in to inhabited areas of Ullala, Someshwara, Uchilla of Managluru. It is said that this is because of Titli cyclone effect.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X