ಮಂಗಳೂರು: ವಿದ್ಯುತ್ ಅವಘಡ, ಮೂರು ಮಂದಿ ದಾರುಣ ಸಾವು
ವಿದ್ಯುತ್ ತಂತಿಗೆ ಅಲ್ಯುಮಿನಿಯಂ ಏಣಿ ತಾಗಿ ಮೂರು ಜನ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಬಿಜೈನಲ್ಲಿ ನಡೆದಿದೆ.
ಮಂಗಳೂರು, ಜನವರಿ 29: ವಿದ್ಯುತ್ ಅವಘಡದಿಂದಾಗಿ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ರವಿವಾರ ಮಧ್ಯಾಹ್ನ ನಗರದ ಬಿಜೈ ಸಮೀಪದ ಉಜ್ಜೋಡಿಯಲ್ಲಿ ನಡೆದಿದೆ.
ಉಜ್ಜೋಡಿಯ ವಲೇರಿಯನ್ ಲೋಬೊ(55) ಹಾಗೂ ಅವರ ಪತ್ನಿ ಹೆಸ್ಮಿ ಲೋಬೊ(51) ಮತ್ತು ಮೂಡುಬಿದಿರೆಯ ಸಂದೀಪ್(28) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.[ಅರಣ್ಯದಲ್ಲಿ ಅಕ್ರಮ ಕಸಾಯಿಖಾನೆ: ಇಬ್ಬರ ಬಂಧನ]
ವಲೇರಿಯನ್ ಲೋಬೊರ ಮನೆ ಅಂಗಳದ ತೆಂಗಿನ ಮರಕ್ಕೆ ಏಣಿ ಇಟ್ಟು ಕಾಳು ಮೆಣಸು ತೆಗೆಯಲು ಸಂದೀಪ್ ಹತ್ತಿದ್ದರು. ಈ ವೇಳೆ ಸಂದೀಪ್ , ಏಣಿ ಸಮೇತ ಆಯತಪ್ಪಿ ವಿದ್ಯುತ್ ತಂತಿಯ ಮೇಲೆ ಬಿದ್ದರು. ಆಗ ವಿದ್ಯುತ್ ಆಘಾತಕ್ಕೊಳಗಾದ ಅವರನ್ನು ರಕ್ಷಿಸಲು ಧಾವಿಸಿದ ಪತಿ ವಲೇರಿಯನ್ ಮತ್ತು ಪತ್ನಿ ಹೆಸ್ಮಿ ಕೂಡ ವಿದ್ಯುತ್ ಅವಘಡಕ್ಕೊಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಎಂದು ತಿಳಿದು ಬಂದಿದೆ.[ಮಂಗಳೂರು: ಗಂಡ-ಹೆಂಡತಿ ಆತ್ಮಹತ್ಯೆ ಯತ್ನ, ಪತಿ ಸಾವು, ಪತ್ನಿ ಸ್ಥಿತಿ ಗಂಭೀರ]
Comments
English summary
Three people died in an electrical accident in Ujjodi near Bijai, Mangaluru.