ಟಿಪ್ಪು ಪರ ಘೋಷಣೆ ಕೂಗಿದವರು ಈಗ ವಿರೋಧಿಗಳಾ?: ಪರಂ
ಟಿಪ್ಪು ಜಯಂತಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ.ಆಯಾ ಜಿಲ್ಲೆಗಳಲ್ಲಿ ಪರಿಸ್ಥಿತಿಯನ್ನು ಗಮನಿಸಿ ಸೂಕ್ತ ಬಂದೋಬಸ್ತು ನಡೆಸಲು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
ಮಂಗಳೂರು, ನವೆಂಬರ್ 8 : ಟಿಪ್ಪು ಕಿರೀಟ ಧರಿಸಿ, ಟಿಪ್ಪುವಿನ ಖಡ್ಗ ಹಿಡಿದು ಟಿಪ್ಪುವಿನ ಘೋಷಣೆ ಕೂಗಿದವರು ಈಗ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಟಿಪ್ಪು ಜಯಂತಿ ವಿರೊಧಿಸುತ್ತಿರುವವರನ್ನು ಗೃಹ ಸಚಿವ ಜಿ. ಪರಮೇಶ್ವರ ಪರೋಕ್ಷವಾಗಿ ಟೀಕಿಸಿದರು.
ಟಿಪ್ಪು ಜಯಂತಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಯಾರು ವಿರೋಧಿಸಿದರೂ ಸರ್ಕಾರಿ ಕಾರ್ಯಕ್ರಮವನ್ನು ನಡೆಸಲು ರಾಜ್ಯ ಸಿದ್ಧವಿದೆ. ಆಯಾ ಜಿಲ್ಲೆಗಳಲ್ಲಿ ಪರಿಸ್ಥಿತಿಯನ್ನು ಗಮನಿಸಿ ಸೂಕ್ತ ಬಂದೋಬಸ್ತು ನಡೆಸಲು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಗೃಹ ಸಚಿವ ತಿಳಿಸಿದರು.[ಪೊಲೀಸರಿಗೆ ಗೃಹ ಸಚಿವ ಪರಮೇಶ್ವರ ನೀಡಿದ ಸೂಚನೆಗಳೇನು?]
ಮಂಗಳೂರಿಗೆ
ಬರಲಿದೆಯೇ
ಗಸ್ತು
ವಾಹನ:
ಇನ್ನೂ
ಜಿಲ್ಲೆಗೆ
ಹೆಚ್ಚುವರಿ
25
ಪೊಲೀಸ್
ಗಸ್ತುವಾಹನವನ್ನು
ನೀಡಲಾಗುವುದು.
ಬೆಂಗಳೂರು
ನಗರದಲ್ಲಿ
5ನಿಮಿಷದೊಳಗೆ
ಪ್ರಕರಣ
ನಡೆದ
ಸ್ಥಳಕ್ಕೆ
ತಲುಪಲು
ಪೊಲೀಸ್
ಗಸ್ತು
ವಾಹನ
ನೀಡಲಾಗಿದೆ.
ಅದೇ
ರೀತಿ
ಮಂಗಳೂರು
ವ್ಯಾಪ್ತಿಯಲ್ಲಿಯೂ
ಈ
ಸೌಲಭ್ಯ
ಕಲ್ಪಿಸಲಾಗುವುದು
ಎಂದರು.
ರುದ್ರೇಶ್
ಪ್ರಕರಣ
ಜಿಜೆಪಿಗೆ
ಪರಂ
ಎಚ್ಚರಿಕೆ
ರುದ್ರೇಶ್
ಹತ್ಯೆಯಲ್ಲಿ
ಸಚಿವರ
ಕೈವಾಡವಿದೆ
ಎನ್ನುವ
ಬಿಜೆಪಿ
ಮುಖಂಡರಿಗೆ
ಪರಮೇಶ್ವರ್
ಎಚ್ಚರಿಸಿದ್ದಾರೆ.
ದಾಖಲೆ
ಇದ್ದರೆ
ಪೊಲೀಸರಿಗೆ
ನೀಡಿ
ತನಿಖೆಗೆ
ಸಹಕರಿಸಲಿ
ಇಲ್ಲವಾದರೆ
ಅವರ
ವಿರುದ್ಧವೂ
ಕ್ರಮ
ಕೈಗೊಳ್ಳಬೇಕಾಗುತ್ತದೆ
ಎಂದು
ರುದ್ರೇಶ್
ಹತ್ಯೆಯಲ್ಲಿ
ಸಚಿವರ
ಕೈವಾಡವಿದೆ
ಎನ್ನುವ
ಬಿಜೆಪಿ
ಮುಖಂಡರಿಗೆ
ಪರಮೇಶ್ವರ್
ಎಚ್ಚರಿಕೆ
ನೀಡಿದರು.
ರುದ್ರೇಶ್
ಸಾವಿನ
ಪ್ರಕರಣ
ತನಿಖೆಯಲ್ಲಿದೆ.
ಇದರಲ್ಲಿ
ಯಾರೇ
ಅಪರಾಧಿಗಳಾಗಿದ್ದರೂ
ಅವರ
ವಿರುದ್ಧ
ಕ್ರಮ
ಕೈಗೊಳ್ಳಲಾಗುವುದು
ಎಂದರು.[ರಾತ್ರೋರಾತ್ರಿ
ಟಿಪ್ಪು
ಚೌಕ್
ನಿರ್ಮಾಣ:
ಗುಂಪು
ಘರ್ಷಣೆ]
ಮಾಸ್ತಿಗುಡಿ:
ಷರತ್ತು
ಉಲ್ಲಂಘಿಸಿದ್ದರೆ
ಕ್ರಮ
ಮಾಸ್ತಿಗುಡಿ
ಸಿನಿಮಾ
ತಂಡವು
ಷರತ್ತನ್ನು
ಉಲ್ಲಂಘಿಸಿ
ಶೂಟಿಂಗ್
ಮಾಡಿದಲ್ಲಿ
ಕಾನೂನು
ನಿಟ್ಟಿನ
ಕ್ರಮ
ಕೈಗೊಳಲಾಗುವುದು
ಎಂದು
ಸಚಿವ
ಪರಮೇಶ್ವರ
ತಿಳಿಸಿದ್ದಾರೆ.
ಇಂದಿರಾ
ಗಾಂಧಿ
100ನೇ
ಜನ್ಮದಿನ:
ರಾಜ್ಯ
ಪ್ರದೇಶ
ಕಾಂಗ್ರೆಸ್
ಸಮಿತಿಯ
ವತಿಯಿಂದ
ನ.19ರಂದು
ಇಂದಿರಾ
ಗಾಂಧಿಯವರ
100ನೇ
ಜನ್ಮದಿನವನ್ನು
ನಗರದ
ನೆಹರೂ
ಮೈದಾನದಲ್ಲಿ
ಆಚರಿಸಲಾಗುವುದು
ಎಂದು
ಗೃಹ
ಸಚಿವ
ಡಾ.ಜಿ.ಪರಮೇಶ್ವರ್
ತಿಳಿಸಿದರು.
ಇಂದಿರಾ ಗಾಂಧಿಯವರ 100ನೆ ಜನ್ಮ ದಿನಾಚರಣೆಯನ್ನು ದೇಶದಾದ್ಯಂತ ಒಂದು ವರ್ಷಗಳ ಕಾಲ ಆಚರಿಸಲಾಗುವುದು. ಅವರು ದೇಶಕ್ಕೆ ನೀಡಿದ ಕೊಡುಗೆಯ ಬಗ್ಗೆ ಯುವ ಪೀಳಿಗೆಗೆ ಜಾಗೃತಿ ಮೂಡಿಸಲು ಶಾಲಾ- ಕಾಲೇಜುಗಳಲ್ಲಿ ವಿಚಾರ ಸಂಕಿರಣ, ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. [ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ? ಪರಮೇಶ್ವರ್ ನೋಟ ಎತ್ತ!]
ಈ ಕಾರ್ಯಕ್ರಮದಲ್ಲಿ ದ.ಕ, ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಸುಮಾರು ಒಂದು ಲಕ್ಷ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸಚಿವ ಸಂಪುಟದ ಸದಸ್ಯರು, ರಾಜ್ಯದ ಕಾಂಗ್ರೆಸ್ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್, ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಆಸ್ಕರ್ ಫೆರ್ನಾಂಡಿಸ್, ವೀರಪ್ಪ ಮೊಯ್ಲಿ, ಜನಾರ್ದನ ಪೂಜಾರಿ, ಹರಿಪ್ರಸಾದ್, ಹರಿಪ್ರಸಾದ್, ಧರ್ಮಸಿಂಗ್, ಶಾಂತಾರಾಮ ನಾಯಕ್, ಎಐಸಿಸಿ ಮುಖಂಡರು ಹಾಗೂ ಕೆಪಿಸಿಸಿ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಜಿ.ಪರಮೇಶ್ವರ್ ತಿಳಿಸಿದರು.