ಮಂಗಳೂರಿನಲ್ಲೂ ಮೊಳಗಿದ ಜಲ್ಲಿಕಟ್ಟು ಕೂಗು
ಮಂಗಳೂರು, ಜನವರಿ. 23 : ಚೆನ್ನೈನ ಮರೀನಾ ಬೀಚ್ನಲ್ಲಿ ಜಲ್ಲಿಕಟ್ಟು ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದ್ದರೆ, ಇತ್ತ ಮಂಗಳೂರಿನಲ್ಲಿ ನೆಲೆಸಿರುವ ತಮಿಳು ಒಟ್ಟಾಗಿ ಸೇರಿಕೊಂಡು ಜಲ್ಲಿಕಟ್ಟು ಬೆಂಬಲಿಸಿ ಬೃಹತ್ ಪ್ರತಿಭಟನಾ ಜಾಥಾವನ್ನು ಭಾನುವಾರ ಸಂಜೆ ನಡೆಸಿದರು.
ಮಂಗಳೂರಿನ ತಮಿಳು ಸಂಘದ ಬೆಂಬಲದೊಂದಿಗೆ ನಡೆದ ಪ್ರತಿಭಟನೆಯಲ್ಲಿ ನೂರಾರು ತಮಿಳಿಯನ್ನರು ಭಾಗವಹಿಸಿದರು. ಮಂಗಳೂರಿನ ಪಿವಿಎಸ್ ಜಂಕ್ಷನ್ನಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಲಾಲ್ಬಾಗ್ನಲ್ಲಿರುವ ಮಹಾನಗರ ಪಾಲಿಕೆ ಕಚೇರಿ ಮುಂಭಾಗ ಕೊನೆಗೊಂಡಿತು.
ಜಲ್ಲಿಕಟ್ಟಿನ ನಿಷೇಧ ತೆರವಿಗೆ ಸುಗ್ರೀವಾಜ್ಞೆ ಹೊರಡಿಸಿದರೆ ಸಾಲದು ಅದು ಇನ್ನೆಂದೂ ನಿಷೇಧಕ್ಕೊಳಗಾಗದಂತೆ ಪರಿಹಾರ ಕಲ್ಪಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಕ್ಕಳು ಮಹಿಳೆಯರು ಕೂಡಾ ಭಾಗಿಯಾಗಿದ್ದು, ಜಲ್ಲಿಕಟ್ಟು ಸಂಬಂಧಿತ ಭಿತ್ತಿಪತ್ರಗಳನ್ನು ಪ್ರದರ್ಶಿಸುವ ಮೂಲಕ ಗಮನಸೆಳೆದರು.
Comments
English summary
Tamilians in Mangaluru unite together and protest on Banning Jallikattu here on the streets of the city on Sunday, January 22
Story first published: Monday, January 23, 2017, 11:23 [IST]