ಮಂಗಳೂರು : ಖಾಸಗಿ ಬಸ್ ನಿಲ್ದಾಣ ಕಾಮಗಾರಿಗೆ ವೇಗ
ಮಂಗಳೂರು, ಫೆ.9 : ಮಂಗಳೂರು ನಗರದ ಪಂಪ್ವೆಲ್ ಬಳಿ ನಿರ್ಮಿಸಲು ಉದ್ದೇಶಿಸಲಾಗಿರುವ ಖಾಸಗಿ ಬಸ್ ನಿಲ್ದಾಣ ಕಾಮಗಾರಿಯ ಪ್ರಕ್ರಿಯೆ ತ್ವರಿತಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬಸ್
ನಿಲ್ದಾಣ
ಕಾಮಗಾರಿ
ಪ್ರಕ್ರಿಯೆ
ದೀರ್ಘಕಾಲದಿಂದ
ವಿಳಂಬವಾಗುತ್ತಿದೆ.
ಸಾರ್ವಜನಿಕರಿಗೆ
ಉತ್ತಮ
ಸೇವೆ
ಒದಗಿಸುವ
ದೃಷ್ಟಿಯಿಂದ
ಈಗಾಗಲೇ
ಕೈಗೊಳ್ಳಲಾಗಿರುವ
ಪ್ರಕ್ರಿಯೆಯನ್ನು
ತ್ವರಿತಗೊಳಿಸಬೇಕು.
ಪ್ರಸ್ತಾವಿತ
ಭೂಮಿಯು
ರಾಷ್ಟ್ರೀಯ
ಹೆದ್ದಾರಿಗೆ
ಹೊಂದಿಕೊಂಡಿರುವುದರಿಂದ
ಹೆದ್ದಾರಿ
ಇಲಾಖೆ
ಅಧಿಕಾರಿಗಳೊಂದಿಗೆ
ಸಭೆ
ನಡೆಸಿ,
ಈ
ಬಗ್ಗೆ
ಚರ್ಚಿಸಬೇಕು
ಎಂದು
ಸಚಿವರು
ನಿರ್ದೇಶನ
ನೀಡಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯೂ ಯೋಜನೆ ಬಗ್ಗೆ ಶೀಘ್ರವೇ ಸರ್ಕಾರಕ್ಕೆ ಅಗತ್ಯ ಪ್ರಸ್ತಾವನೆಗಳನ್ನು ಸಲ್ಲಿಕೆ ಮಾಡಿದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಶೀಘ್ರವಾಗಿ ಅನುಮೋದನೆ ದೊರಕಿಸಿ ಕೊಡುವುದಾಗಿ ಸಚಿವರು ಶನಿವಾರ ನಡೆದ ಸಭೆಯಲ್ಲಿ ಭರವಸೆ ನೀಡಿದ್ದಾರೆ. [ಮಂಗಳೂರು : ಬಸ್ ನಿಲ್ದಾಣ ಯೋಜನೆಗೆ ಮರುಜೀವ]
ಸಭೆಯಲ್ಲಿ
ಪಾಲ್ಗೊಂಡಿದ್ದ
ಆರೋಗ್ಯ
ಸಚಿವ
ಯು.ಟಿ.ಖಾದರ್
ಕಾಮಗಾರಿ
ಆರಂಭವಾದ
ಬಳಿಕ
ಯಾವುದೇ
ಅಡ್ಡಿಗಳು
ಬಾರದಂತೆ,
ಪೂರ್ವಭಾವಿಯಾಗಿಯೇ
ಎಲ್ಲ
ಬಾಧಕಗಳನ್ನು
ನಿವಾರಿಸಿಕೊಳ್ಳಿ,
ಹೆದ್ದಾರಿ
ಇಲಾಖೆಯೊಂದಿಗೂ
ಶೀಘ್ರ
ಸಮಾಲೋಚನೆ
ನಡೆಸಿ
ಎಂದು
ಅಧಿಕಾರಿಗಳಿಗೆ
ಸೂಚನೆ
ನೀಡಿದರು.
ನಗರದ ಪಂಪ್ವೆಲ್ ಬಳಿ ಖಾಸಗಿ ಬಸ್ ನಿಲ್ದಾಣ ನಿರ್ಮಿಸುವ ಐದು ವರ್ಷಗಳ ಹಿಂದಿನ ಯೋಜನೆಗೆ ಈಗ ಮರುಜೀವ ಬಂದಿದೆ. ಒಟ್ಟು 4 ಅಂತಸ್ತುಗಳ ನಿಲ್ದಾಣವನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಯೋಜನೆಗಾಗಿ ಈಗಾಗಲೇ 7.5 ಎಕರೆ ಜಮೀನು ಸ್ವಾಧೀನ ಮಾಡಿಕೊಳ್ಳಲಾಗಿದೆ.