ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೃದ್ಧರ ಶೋಷಣೆ: ಮಂಗಳೂರು ನಂ.1: ಸಮೀಕ್ಷೆ ವರದಿ

By Nayana
|
Google Oneindia Kannada News

ಬೆಂಗಳೂರು, ಜೂನ್ 15: ಮಕ್ಕಳು ಬಯಸುವ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ತಂದೆ ತಾಯಿಯರಿಗೆ ಮಕ್ಕಳ ಮೇಲಿರುವ ಪ್ರೀತಿ ಅದೇ ಮಕ್ಕಳಿಂದ ತಂದೆ ತಾಯಿಯರ ಮೇಲೆ ಯಾಕೆ ಮಾಯವಾಗುತ್ತದೆ.

ತಮಗೆ ಹಕ್ಕೇ ಇಲ್ಲವೇನೋ ಎಂದು ಹೆತ್ತವರನ್ನು ವೃದ್ಧಾಶ್ರಮಕ್ಕೆ ತಳ್ಳುತ್ತಾರೆ ಅಥವಾ ಮನೆಯಲ್ಲಿಯೇ ಅವರನ್ನು ಕೂಡಿ ಹಾಕಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುವ ಮೂರ್ಖಶಿಖಾಮಣಿಗಳ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ.

ಹಿರಿಯರು ರಸ ಹೀರಿ ಬಿಸಾಡಿದ ಕಬ್ಬಿನ ಜಲ್ಲೆಯಲ್ಲ! ಹಿರಿಯರು ರಸ ಹೀರಿ ಬಿಸಾಡಿದ ಕಬ್ಬಿನ ಜಲ್ಲೆಯಲ್ಲ!

ಹೆಲ್ಪ್ ಏಜ್‌ ಇಂಡಿಯಾ ಎನ್ನುವ ಸಂಸ್ಥೆ ಈ ಕುರಿತು ವರದಿ ಮಾಡಿದ್ದು ಹಿರಿಯ ನಾಗರಿಕರನ್ನು ಪೀಡಿಸುವ, ಹಿಂಸಿಸುವ ನಗರಗಳ ಪಟ್ಟಿಯಲ್ಲಿ ದೇಶದಲ್ಲೇ ಮಂಗಳೂರು ಮುಂದಿದೆ ಎಂದು ತಿಳಿದುಬಂದಿದೆ. ಹೆಲ್ಪ್ ಏಜ್ ದೇಶಾದ್ಯಂತ 23 ನಗರಗಳ 5,014 ಹಿರಿಯ ನಾಗರಿಕರನ್ನು ಸಂದರ್ಶಿಸಿಸದೆ. ಮಂಗಳೂರಿನಲ್ಲಿ ಶೇ.47 ಮಂದಿ ಹಿರಿಯರು ತಮ್ಮ ಶೋಷಣೆ ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Sorry elders, Mangaluru stands no.1 for bad reason

ಅಹಮದಾಬಾದ್ ಶೇ.46, ಭೋಪಾಲ್ ಶೇ.39, ಅಮೃತಸರ ಶೇ.35, ನವದೆಹಲಿ ಶೇ.33 ನಂತರದ ಶ್ರೇಣಿಯಲ್ಲಿವೆ ಎಂದು ಸಮೀಕ್ಷೆ ತಿಳಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ, ಜಮ್ಮು, ಮುಂಬೈ, ಕೊಚ್ಚಿ ಮತ್ತು ಗುವಾಹಟಿ ನಗರಗಳಲ್ಲಿ ವಯಸ್ಸಾದವರ ನಿಂದನೆ ಮತ್ತು ದೌರ್ಜನ್ಉ ಪ್ರಕರಣಗಳ ಸಂಖ್ಯೆ ಕಡಿಮೆಯಿದೆ. ನಾಲ್ಕರಲ್ಲಿ ಒಬ್ಬರು ಹಿರಿಯರು ವಯಕ್ತಿಕವಾಗಿ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಪುತ್ರರು ಅಥವಾ ಸೊಸೆಯಂದಿರಿಂದ ಹೆಚ್ಚು ಕಿರುಕುಳ ಅನುಭವಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

English summary
Help Age India survey has revealed that discrimination and neglect about senior citizens in India is growing and Mangaluru stands number one in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X