ಉಳ್ಳಾಲದಲ್ಲಿ ಭಾರೀ ಕಡಲ್ಕೊರೆತ, ಜನರಿಗೆ ಆತಂಕ
ಮಂಗಳೂರು, ಜುಲೈ 01 : ಭಾರೀ ಮಳೆಯಿಂದಾಗಿ ಉಳ್ಳಾಲ ಹಾಗೂ ಉಚ್ಚಿಲದಲ್ಲಿ ಸಮುದ್ರ ಬಿರುಸುಗೊಂಡಿದ್ದು, ಕಡಲ್ಕೊರೆತದಿಂದಾಗಿ ಹಲವಾರು ಮನೆಗಳು ಅಪಾಯಕ್ಕೆ ಸಿಲುಕಿವೆ. 5 ವರ್ಷಗಳಿಂದ ಉಚ್ಚಿಲ ಸಮುದ್ರ ತೀರದಲ್ಲಿರುವ ಕಡಲ್ಕೊರೆತ ಈಗ ರೌದ್ರಾವತಾರ ತಾಳಿದ್ದು, ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ನ್ಯೂ
ಉಚ್ಚಿಲದಿಂದ-ಉಚ್ಚಿಲ
ಕೋಟೆವರೆಗಿನ
ಸಮುದ್ರ
ತೀರದ
ಜನರು
ಭಯಭೀತರಾಗಿದ್ದಾರೆ.
ಉಳ್ಳಾಲದಲ್ಲಿ
ಒಂದು
ಮನೆ,
ಉಚ್ಚಿಲದಲ್ಲಿ
ಎರಡು
ಮನೆಗಳು
ತೀರಾ
ಅಪಾಯದಲ್ಲಿವೆ.
ಉಳಿದಂತೆ
ಪರಿಸರದ
ಸುಮಾರು
50
ಮನೆಗಳು
ಕುಸಿತದ
ಭೀತಿಯಲ್ಲಿವೆ.
[ಕಡಲಕಿನಾರೆಯ
ಕಥಾ
ಪ್ರಸಂಗಗಳು]
ಉಳ್ಳಾಲದ ಕೋಟೆಪುರ ಬಳಿಯ ಅಬೂಬಕ್ಕರ್ ಅವರ ಮನೆ ಕುಸಿಯುವ ಭೀತಿಯಲ್ಲಿದ್ದು, ಮನೆಮಂದಿ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಉಚ್ಚಿಲದಲ್ಲಿ ಮನೆಯ ಅಂಗಳಕ್ಕೆ ಬಂದ ಸಮುದ್ರದ ಅಲೆಯಿಂದ ಮಹಿಳೆಯೊಬ್ಬರು ಬಿದ್ದು ಗಾಯಗೊಂಡಿದ್ದಾರೆ. [ಕರಾವಳಿಯಲ್ಲಿ ಮಳೆ ಆರ್ಭಟ : ಸಮುದ್ರ ಕೊರೆತದ ಭೀತಿ]
ಐದು ವರ್ಷಗಳಿಂದ ಕಡಲ್ಕೊರೆತ ಇದ್ದರೂ ಈವರೆಗೆ ಜನಪ್ರತಿನಿಧಿಗಳು ಪರಿಶೀಲಿಸಿ ಭರವಸೆ ನೀಡಿದ್ದಾರೆಯೇ ಹೊರತು ಸಮಸ್ಯೆ ಪರಿಹಾರವಾಗಿಲ್ಲ. ಪ್ರತಿ ವರ್ಷವೂ ಇಲ್ಲಿನ ಜನರು ಕಡಲ್ಕೊರೆತದಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಸಚಿವ
ಯು.ಟಿ.ಖಾದರ್
ಭೇಟಿ
:
ಸಚಿವ
ಯು.ಟಿ.ಖಾದರ್
ಅವರು
ಗುರುವಾರ
ಅಧಿಕಾರಿಗಳೊಂದಿಗೆ
ಸ್ಥಳಕ್ಕೆ
ಭೇಟಿ
ನೀಡಿದರು.
ಕಡಲ್ಕೊರೆತಕ್ಕೆ
ತುತ್ತಾದ
ಪ್ರದೇಶಗಳಾದ
ಕೋಟೆಪುರ,
ಮೊಗವೀರ
ಪಟ್ನಾ,
ಸೋಮೇಶ್ವರ
ಉಚ್ಚೀಲಾ,
ಕಿಲಿರಿಯಾ
ನಗರ
,
ಮುಕ್ಕಚ್ಚೇರಿ
ಮೊದಲಾದ
ಪ್ರದೇಶಗಳಲ್ಲಿ
ಪರಿಶೀಲನೆ
ನಡೆಸಿದರು.
'ಉಚ್ಚೀಲದಲ್ಲೂ ಶಾಶ್ವತ ಕಾಮಗಾರಿ ನಡೆಸುವ ಸಲುವಾಗಿ ರಾಜ್ಯದಿಂದ ಕೇಂದ್ರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ. ಈ ಭಾಗದ ಸಂತ್ರಸ್ತರು ನಿವೇಶನಕ್ಕಾಗಿ ಸರಕಾರಕ್ಕೆ ಮನವಿ ಮಾಡಿದ್ದು, ಸಂತ್ರಸ್ತರ ಪಟ್ಟಿಯನ್ನು ಜಿಲ್ಲಾಧಿಕಾರಿಗೆ ನೀಡಿದರೆ ಕಂದಾಯ ಇಲಾಖೆ ಮೂಲಕ ಪರಿಶೀಲಿಸಿ ನಿವೇಶನ ಕಲ್ಪಿಸಲಾಗುವುದು' ಎಂದರು.
ಸಂತ್ರಸ್ತರ ಅಸಮಾಧಾನ : ಸಮುದ್ರ ಕಿನಾರೆಯಲ್ಲಿ ವಾಸವಿರುವ ಸಂತ್ರಸ್ತರು ಕಡಲ್ಕೊರೆತಕ್ಕೆ ಸಂಬಂಧಿಸಿ ನಡೆಯುತ್ತಿರುವ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮಳೆಗಾಲದಲ್ಲಿ ಎಲ್ಲರೂ ಭರವಸೆ ನೀಡಿ ಹೋಗುತ್ತಾರೆ. ನಂತರ ಆ ಭಾಗಕ್ಕೆ ಯಾರೂ ಬರುವುದಿಲ್ಲ.
ಉಳ್ಳಾಲ, ಕೋಟೆಪುರ, ಮೊಗವೀರ ಪಟ್ನಾ ದಲ್ಲಿ ಎಡಿಬಿ ಯೋಜನೆಯಡಿ ನಡೆಯುತ್ತಿರುವ ಶಾಶ್ವತ ಕಡಲ್ಕೊರೆತ ತಡೆ ಕಾಮಗಾರಿ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಸಮುದ್ರಕ್ಕೆ ಹಾಕಲಾದ ಕೋಟಿಗಟ್ಟಲೆ ಮೌಲ್ಯದ ಮರಳು ಚೀಲಗಳು ಸಮುದ್ರ ಪಾಲಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.