ಶಾಲಾ ಮಕ್ಕಳ ಹರಕೆಗೆ ಕೊಡ್ತಾನಂತೆ 100 ಪರ್ಸೆಂಟ್ ಫಲಿತಾಂಶ
ಮಂಗಳೂರು, ನವೆಂಬರ್ 29 : ಹಲವಾರು ವರ್ಷದಿಂದ ದೈವವೊಂದು ಸರ್ಕಾರಿ ಶಾಲೆಯನ್ನು ಕಾಯುತ್ತಿದೆ. ಶಾಲಾ ಮಕ್ಕಳ ಹರಕೆಗೆ ಕೊಡ್ತಾನಂತೆ 100 ಪರ್ಸೆಂಟ್ ಫಲಿತಾಂಶ .ಬೇಡಿದ ಇಷ್ಟಾರ್ಥವನ್ನ ಸಿದ್ಧಿಸಿ ತೋರುತ್ತಿದೆ ನೆಲ್ಲಿರಾಯ ದೈವದ ಪವಾಡ.
ಮಧ್ಯಪ್ರದೇಶ : ಹಾಜರಾತಿಗೆ ಎಸ್ ಸರ್, ಎಸ್ ಮೇಡಂ ಬದಲಿಗೆ "ಜೈ ಹಿಂದ್' ಎನ್ನಿ
ದೈವಗಳ ನೆಲೆವೀಡು ತುಳುನಾಡಿನಲ್ಲಿ ಪ್ರತಿ ಮನೆ,ಪ್ರತಿ ಗ್ರಾಮ , ಊರು, ಕೇರಿಗಳಲ್ಲಿ ದೈವಾರಾಧನೆ ನಡೆಯುತ್ತದೆ. ಆದರೆ ಶಾಲೆ ಯೊಂದರಲ್ಲಿ ಶಾಲಾ ಮಕ್ಕಳಿಂದಲೇ ದೈವಾರಾಧನೆ ವಿಶೇಷ ವಾದದ್ದು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಶಾಲೆಯ ಆವರಣದಲ್ಲೇ ದೈವಾರಾಧನೆ ನಡೆಯುತ್ತದೆ. ಶಾಲಾ ಮಕ್ಕಳೇ ಈ ದೈವಕ್ಕೆ ಪೂಜೆ ಪುರಸ್ಕಾರ ನೆರವೇರಿಸುತ್ತಾರೆ.
ಈ ದೈವದ ಬಗ್ಗೆ ಶಾಲಾ ಮಕ್ಕಳಿಗೆ ಮಾತ್ರವಲ್ಲ ಊರ ಜನರಿಗೂ ಭಾರಿ ನಂಬಿಕೆ. ಆ ದೈವದ ಇಚ್ಚೆಯಂತೆಯೇ ಅಲ್ಲಿ ಎಲ್ಲವೂ ನಡೆಯೋದು,ತಪ್ಪಿದರೆ ಶಿಕ್ಷಿಸುವ,ನಂಬಿ ಬಂದರೆ ವರ ಕೊಡುವ ದೈವ ಆ ಶಾಲೆಯ ರಕ್ಷಕ ಎಂದು ಹೇಳಲಾಗುತ್ತದೆ .
ಶಾಲಾ ಮಕ್ಕಳ ಭಾರದ ಬ್ಯಾಗ್ ಸಮಸ್ಯೆಗೆ ಪರಿಹಾರ ಸಿಕ್ಕೀತೆ?
ಈ ಶಾಲೆಯ ಶೇಕಡಾ 100% ರಷ್ಟು ಫಲಿತಾಂಶ ದಾಖಲಿಸಲು ಈ ದೈವ ಕಾರಣ ಎಂದು ಹೇಳಲಾಗುತ್ತದೆ. ಶಾಲೆಯ ವಿದ್ಯಾರ್ಥಿಗಳಿಂದಲೇ ಆರಾಧಿಸಲ್ಪಡುವ ಆ ದೈವಕ್ಕೆ ಶಾಲಾ ವಾರ್ಷಿಕೋತ್ಸವದಂದೇ ನೇಮೋತ್ಸವ ವನ್ನೂ ನಡೆಸಲಾಗುತ್ತದೆ.
ಈ ಶಾಲೆ ಇರುವುದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಯಿಲಾ ಎಂಬಲ್ಲಿ. ಈ ಕೊಯಿಲದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲೇ ರಕ್ತೇಶ್ವರಿಯ ಇನ್ನೊಂದು ಸ್ವರೂಪವಾದ ನೆಲ್ಲಿರಾಯ ದೈವದ ಸ್ಥಾನವಿದ್ದು ಅಲ್ಲಿ ಈ ದೈವದ ಆರಾಧನೆ ನಡೆಯುತ್ತಿದೆ.
ಸರ್ಕಾರಿ ಶಾಲೆಯಲ್ಲೇ ಕಡ್ಡಾಯ ಕಲಿಕೆ : ಮಸೂದೆ ಮುಂದಕ್ಕೆ
25 ವರ್ಷದ ಹಿಂದೆ ದಾನವಾಗಿ ಸಿಕ್ಕಿದ್ದ ಈ ಜಾಗದಲ್ಲಿ ಶಾಲೆ ನಿರ್ಮಾಣ ಮಾಡಲು ಊರಿನವರು ತಯಾರಿ ನಡಸಿದ್ದರು.ಅಂದು ಜಾಗ ಸಮತಟ್ಟು ಮಾಡುವಾಗ ಸಂದರ್ಭದಲ್ಲಿ ಅಲ್ಲಿಲ್ಲ ನಾಗರಹಾವುಗಳು ಕಾಣಿಸಿ ಕೊಂಡಿದ್ದವು, ಮಾತ್ರವಲ್ಲ ಹತ್ತು ಹಲವು ಅಡೆತಡೆಗಳು ಆಗಿದ್ದವು.
ಈ ವಿಚಾರದಲ್ಲಿ ಊರ ಹಿರಿಯರು ಜೋತಿಷಿಗಳಲ್ಲಿ ಕೇಳಿದಾಗ ಆ ಜಾಗದಲ್ಲಿ ನೆಲ್ಲಿರಾಯ ದೈವಕ್ಕೆ ಸೇರಿದ್ದಾಗಿದೆ ಎಂದು ತಿಳಿದುಬಂತು. ಈ ಹಿನ್ನೆಲೆಯಲ್ಲಿ ಅದನ್ನು ಆರಾಧನೆ ಮಾಡಬೇಕೆಂಬ ಸೂಚನೆ ಸಿಕ್ಕಿತ್ತು. ಹೀಗಾಗಿ ಅಂದಿನ ಆಡಳಿತ ಮಂಡಳಿ ನೆಲ್ಲಿರಾಯ ದೈವವನ್ನು ಇದೇ ಜಾಗದಲ್ಲಿ ಪ್ರತಿಷ್ಟಾಪಿಸಿದರು. ಅಂದಿನಿಂದ ಇಂದಿನವರೆಗೂ ನೆಲ್ಲಿರಾಯ ದೈವದ ಆರಾಧನೆ ಈ ಶಾಲೆಯನ್ನು ನಡೆಯುತ್ತಿದೆ.
ಶಾಲೆಯ ಆವರಣದಲ್ಲೇ ಇರುವ ಈ ದೈವದ ಆರಾಧನೆ ಮಾಡುವುದಾದರೂ ಯಾರು ಎಂಬ ಪ್ರಶ್ನೆ ಎದುರಾದಾಗ ಆ ಶಾಲೆಯ ಮಕ್ಕಳೆ ನೆಲ್ಲಿರಾಯ ದೈವದ ಸೇವೆ,ಪೂಜೆ ಪುನಸ್ಕಾರಗಳನ್ನು ಮಾಡಬೇಕೆಂದು ನಿರ್ಣಯಿಸಲಾಯಿತು. ಈ ಹಿನ್ನೆಲೆಯಲ್ಲಿ ಕಳೆದ 25 ವರ್ಷಗಳಿಂದ ಶಾಲೆಯ ವಿದ್ಯಾರ್ಥಿಗಳು ಪ್ರತಿ ದಿನ ದೈವಕ್ಕೆ ದೀಪ ಇಟ್ಟು ಪ್ರಾರ್ಥನೆ ಸಲ್ಲಿಸುತ್ತಾರೆ.
ಈ ಶಾಲೆಯಲ್ಲಿರುವ ಎಲ್ಲಾ ಜಾತಿ ಧರ್ಮದ,ಅದರಲ್ಲೂ ಹಿಂದೂ ಮುಸ್ಲಿಂ ಕ್ರೈಸ್ತ ವಿದ್ಯಾರ್ಥಿಗಳೂ ನೆಲ್ಲಿರಾಯ ದೈವಕ್ಕೆ ದೀಪ ಇಡೋಡು ಪೂಜೆ ಸಲ್ಲಿಸೋದು ಇಲ್ಲಿಯ ವಿಶೇಷ. ಮಾತ್ರವಲ್ಲ ಈ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಪ್ರತಿ ದಿನ ಶಾಲೆಗೆ ಆಗಮಿಸಿ ಮೊದಲು ನೆಲ್ಲಿರಾಯ ದೈವಕ್ಕೆ ಪ್ರಾರ್ಥನೆ ಸಲ್ಲಿಸಿಯೇ ಶಾಲೆಯೊಳಗೆ ಪ್ರವೇಶಿಸುತ್ತಾರೆ.
ಪರೀಕ್ಷಾ ಸಂದರ್ಭದಲ್ಲಂತೂ ವಿದ್ಯಾರ್ಥಿಗಳು ನೆಲ್ಲಿರಾಯ ದೈವರ ಮೊರೆ ಹೋಗುತ್ತಾ ಹೆಚ್ಚಿನ ಅಂಕಗಳನ್ನು ನೀಡೆಂದು ಬೇಡುತ್ತಾರೆ.ಅದರಂತೆ ಕಳೆದ ಹತ್ತಾರು ವರ್ಷಗಳಿಂದಲೂ ಈ ಸರ್ಕಾರಿ ಶಾಲೆ ಶೇಕಡಾ 100 ಫಲಿತಾಂಶಗಳನ್ನು ಪಡೆಯುತ್ತಿದೆ.ಇದಕ್ಕೆಲ್ಲಾ ತಮ್ಮ ಆರಾಧ್ಯ ದೈವ ನೆಲ್ಲಿರಾಯನೇ ಕಾರಣ ಎಂದು ನಂಬಲಾಗಿದೆ.
ಈ ಶಾಲೆಯ ವಾರ್ಷಿಕೋತ್ಸವದಂದು ಈ ನೆಲ್ಲಿರಾಯ ದೈವಕ್ಕೂ ವಾರ್ಷಿಕ ಸೇವೆ ನಡೆಯುತ್ತದೆ. ವಿದ್ಯಾರ್ಥಿಗಳ ನೇತೃತ್ವದಲ್ಲೇ ನಡೆಯುವ ಈ ವಾರ್ಷಿಕ ಸೇವೆಗೆ ಅರ್ಚಕರನ್ನೂ ಕರೆಸಿ ಕ್ರಮಬದ್ದವಾಗಿ ಸೇವೆ ಸಲ್ಲಿಸಲಾಗುತ್ತದೆ.ಜೊತೆಗೆ ವಿದ್ಯಾರ್ಥಿಗಳೆಲ್ಲಾ ವಾರ್ಷಿಕ ಸೇವೆಗೆ ಬೇಕಾದ ಹೂ,ಹಣ್ಣು,ಎಳನೀರು ಸೇರಿದಂತೆ ಎಲ್ಲಾ ವಸ್ತುಗಳನ್ನು ಸೇವಾರೂಪದಲ್ಲಿ ತರುತ್ತಾರೆ.ಹೀಗೆ ವಿದ್ಯಾರ್ಥಿಗಳು, ಶಿಕ್ಷಕರು ಊರಿನವರು ಸೇವೆ ವಾರ್ಷಿಕ ಸೇವೆಯನ್ನು ಸಲ್ಲಿಸಿ ನೆಲ್ಲಿರಾಯ ದೈವದ ಕೃಪೆಗೆ ಪಾತ್ರರಾಗುತ್ತಾರೆ.