ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡದಲ್ಲಿ ಮರಳು ಗಣಿಗಾರಿಕೆಗೆ ಅನುಮತಿ

|
Google Oneindia Kannada News

ಮಂಗಳೂರು, ಆಗಸ್ಟ್ 17 : ದಕ್ಷಿಣ ಕನ್ನಡ ಜಿಲ್ಲಾಡಳಿತ ಮರಗಳು ಗಣಿಗಾರಿಕೆಗೆ ಅನುಮತಿ ನೀಡಲು ಮುಂದಾಗಿದೆ. ಜಿಲ್ಲೆಯಲ್ಲಿ ಜೂನ್ 15ರಿಂದ ಗಣಿಗಾರಿಕೆ ನಿಷೇಧಿಸಿದ್ದು, ಹೊಸ ಪರವಾನಗಿಯನ್ನು ಇನ್ನೂ ಜಿಲ್ಲಾಡಳಿತ ನೀಡಿಲ್ಲ.

ಜಿಲ್ಲಾಧಿಕಾರಿ ಕೆ.ಜಿ.ಜಗದೀಶ್ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಸಭೆ ನಡೆಯಿತು. ಈ ಸಂದರ್ಭದಲ್ಲಿ ಮರಳು ಪರವಾನಗೀದಾರರಿಗೆ ನೋಟೀಸು ನೀಡುವ ನಿರ್ಧಾರಕ್ಕೆ ಬರಲಾಗಿದೆ. ನಿಷೇಧಗೊಂಡಿದ್ದ ಮರಳುಗಾರಿಕೆ ಆ. 16ರಂದು ಆರಂಭವಾಗಬೇಕಿತ್ತು. ಆದರೆ, ತಾಂತ್ರಿಕ ಕಾರಣದಿಂದಾಗಿ ಅನುಮತಿ ಸಿಕ್ಕಿಲ್ಲ.[ದಕ್ಷಿಣ ಕನ್ನಡದಲ್ಲಿ ಮರಳು ಗಣಿಗಾರಿಕೆಗೆ ಹೊಸ ನಿಯಮ]

Sand mining to begin in Dakshina Kannada soon

ಮರಳುಗಾರಿಕೆ ಪುನಃ ಆರಂಭಿಸಲು ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ನೀಡಿಲ್ಲ. ಇದೀಗ ಪರವಾನಗಿಯಲ್ಲಿರುವ ಷರತ್ತು ಪಾಲಿಸಿ, ಮರಳುಗಾರಿಕೆ ಆರಂಭಿಸಿ ಎಂದು ಜಿಲ್ಲಾಡಳಿತ ಎಲ್ಲ ಪರವಾನಗೀದಾರರಿಗೆ ನೋಟಿಸ್ ನೀಡಲಿದೆ.[ಮರಳು ಮಾಫಿಯಾ ಎಂದರೇನು? ಏನಿದರ ಮರ್ಮ?]

ಮರಳುಗಾರಿಕೆಗೆ ಅನುಮತಿ ಪಡೆಯಲು 30 ನಿಯಮಗಳನ್ನು ನೀಡಿದ್ದು, ಅವುಗಳೆಲ್ಲವನ್ನೂ ಚಾಚು ತಪ್ಪದೆ ಪಾಲಿಸಬೇಕು. ಸಾಂಪ್ರದಾಯಿಕ ಮರಳುಗಾರಿಕೆಗೆ ಒತ್ತು ನೀಡಬೇಕು, ಯಂತ್ರಗಳನ್ನು ಬಳಸುವಂತಿಲ್ಲ ಮುಂತಾದ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.[ಮಂಗಳೂರಲ್ಲಿ ಅಕ್ರಮ ಮರಳು ದಂಧೆಗೆ ಇಲ್ಲ ಕಡಿವಾಣ]

ಮರಳುಗಾರಿಕೆ ನಡೆಸುವವರು ಎಲ್ಲ ಷರತ್ತುಗಳನ್ನು ಒಪ್ಪಿ, ಮರಳುಗಾರಿಕೆಗೆ ಸಿದ್ದವಾಗಿದ್ದಾರೆ ಜಿಲ್ಲಾಡಳಿತ ನೋಟಿಸ್‌ಗೆ ಸ್ಪಷ್ಟ ಉತ್ತರ ನೀಡಿ ಬಳಿಕ ಮರಳುಗಾರಿಕೆ ಆರಂಭಿಸಬಹುದು. ಈ ನಿರ್ಧಾರ ಮರಳುಗಾರಿಕೆ ಉದ್ಯಮ ನಡೆಸುವವರಿಗೆ ನುಂಗಲಾರದ ಬಿಸಿತುಪ್ಪವಾಗಿದೆ.

English summary
Dakshina Kannada district administration will issue permits for sand mining soon. Mining banned in district from June 15, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X