ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಲ್ಲಿ 6 ದಿನಗಳ ಕಾಲ ಪುಸ್ತಕ ಮೇಳ

By Vanitha
|
Google Oneindia Kannada News

ಮಂಗಳೂರು, ಸೆಪ್ಟೆಂಬರ್, 14 : ರಾಷ್ಟ್ರೋತ್ಥಾನ ಸಾಹಿತ್ಯ ಸಮಿತಿಯು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಹಯೋಗದಲ್ಲಿ ಸಾಹಿತ್ಯ ಪ್ರದರ್ಶಿನಿ ಎಂಬ ಪುಸ್ತಕ ಮಳಿಗೆಯ ಉದ್ಘಾಟನೆಯನ್ನು ಸೆಪ್ಟೆಂಬರ್ 15 ರ ಮಂಗಳವಾರ ಸಂಜೆ 5.30 ಕ್ಕೆ ಹಮ್ಮಿಕೊಂಡಿದೆ.

ಸಾಹಿತ್ಯ ಪ್ರದರ್ಶಿನಿ ಪುಸ್ತಕ ಮಳಿಗೆಯ ಸಮಾರಂಭವು ನಗರದ ಸಂಘನಿಕೇತನ, ಪ್ರತಾಪ್ ನಗರ, ಮಣ್ಣಗುಡ್ಡೆ ಯಲ್ಲಿ ಜರುಗಲಿದ್ದು, ಪುಸ್ತಗಳ ಪ್ರದರ್ಶನವು ಸೆಪ್ಟೆಂಬರ್ 15 ರಿಂದ 21 ರವರೆಗೆ ಇರುತ್ತದೆ. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ನಗರದ v-4 ಮೀಡಿಯಾದ ನಿರ್ದೇಶಕರಾದ ಹರೀಶ್ ಕರ್ಕೇರಾ, ನಮ್ಮ ಟಿವಿ ನಿರ್ದೇಶಕರಾದ ಡಾ|| ಶಿವ ಶರಣ ಶೆಟ್ಟಿ, ಪ್ರೆಸ್ ಕ್ಲಬ್ ಅಧ್ಯಕ್ಷರು ರೊನಾಲ್ಡ್ ಅನಿಲ್ ಫರ್ನಾಂಡಿಸ್ ಆಗಮಿಸಲಿದ್ದಾರೆ.[ಮಂಗಳೂರಿನಲ್ಲಿ ಹಾಡು ಹಗಲೇ 27 ಸಾವಿರ ದರೋಡೆ]

Sahitya pradrshini book show inauguration function in Mangaluru

ಗೌರವಾನ್ವಿತ ಅತಿಥಿಗಳಾಗಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಹಿರಿಯ ಪ್ರಚಾರಕರಾದ ಮೈ.ಚ. ಜಯದೇವ ಹಾಗೂ ಪ್ರಾಸ್ತವನಾಕಾರರಾಗಿ ರಾಷ್ಟ್ರೋತ್ಥಾನ ಸಾಹಿತ್ಯ ಸಮಿತಿಯ ಗೌರವಾನ್ವಿತ ಪ್ರಧಾನ ಸಂಪಾದಕರಾದ ಡಾ|| ಎಸ್. ಆರ್. ರಾಮಸ್ವಾಮಿ ವೇದಿಕೆ ಏರಲಿದ್ದಾರೆ.

ಈ ಪುಸ್ತಕ ಪ್ರದರ್ಶನ ಮಳಿಗೆಯು ಸೆಪ್ಟೆಂಬರ್ 16 ರ ಬುಧವಾರದಿಂದ 21 ರವರೆಗೆ ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ ತೆರೆದಿರುತ್ತದೆ. ಇಲ್ಲಿ ಎಲ್ಲಾ ರೀತಿಯ ಪುಸ್ತಕಗಳು 20 % ರಿಯಾಯಿತಿ ದರದಲ್ಲಿ ಸಿಗುತ್ತದೆ. ಶಾಲಾ ಕಾಲೇಜು ಗ್ರಂಥಾಲಯಗಳಿಗೆ, ಸಗಟು ಖರೀದಿಸುವವರಿಗೆ ಹೆಚ್ಚಿನ ರಿಯಾಯ್ತಿ ಸಿಗಲಿದೆ.

English summary
Rashtrottana bengaluru organize book show in mangaluru on September from 16th to 21. This offer only 6 days and have a discount 20% on every books.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X