ಮಂಗಳೂರಲ್ಲಿ 6 ದಿನಗಳ ಕಾಲ ಪುಸ್ತಕ ಮೇಳ
ಮಂಗಳೂರು, ಸೆಪ್ಟೆಂಬರ್, 14 : ರಾಷ್ಟ್ರೋತ್ಥಾನ ಸಾಹಿತ್ಯ ಸಮಿತಿಯು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಹಯೋಗದಲ್ಲಿ ಸಾಹಿತ್ಯ ಪ್ರದರ್ಶಿನಿ ಎಂಬ ಪುಸ್ತಕ ಮಳಿಗೆಯ ಉದ್ಘಾಟನೆಯನ್ನು ಸೆಪ್ಟೆಂಬರ್ 15 ರ ಮಂಗಳವಾರ ಸಂಜೆ 5.30 ಕ್ಕೆ ಹಮ್ಮಿಕೊಂಡಿದೆ.
ಸಾಹಿತ್ಯ ಪ್ರದರ್ಶಿನಿ ಪುಸ್ತಕ ಮಳಿಗೆಯ ಸಮಾರಂಭವು ನಗರದ ಸಂಘನಿಕೇತನ, ಪ್ರತಾಪ್ ನಗರ, ಮಣ್ಣಗುಡ್ಡೆ ಯಲ್ಲಿ ಜರುಗಲಿದ್ದು, ಪುಸ್ತಗಳ ಪ್ರದರ್ಶನವು ಸೆಪ್ಟೆಂಬರ್ 15 ರಿಂದ 21 ರವರೆಗೆ ಇರುತ್ತದೆ. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ನಗರದ v-4 ಮೀಡಿಯಾದ ನಿರ್ದೇಶಕರಾದ ಹರೀಶ್ ಕರ್ಕೇರಾ, ನಮ್ಮ ಟಿವಿ ನಿರ್ದೇಶಕರಾದ ಡಾ|| ಶಿವ ಶರಣ ಶೆಟ್ಟಿ, ಪ್ರೆಸ್ ಕ್ಲಬ್ ಅಧ್ಯಕ್ಷರು ರೊನಾಲ್ಡ್ ಅನಿಲ್ ಫರ್ನಾಂಡಿಸ್ ಆಗಮಿಸಲಿದ್ದಾರೆ.[ಮಂಗಳೂರಿನಲ್ಲಿ ಹಾಡು ಹಗಲೇ 27 ಸಾವಿರ ದರೋಡೆ]
ಗೌರವಾನ್ವಿತ ಅತಿಥಿಗಳಾಗಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಹಿರಿಯ ಪ್ರಚಾರಕರಾದ ಮೈ.ಚ. ಜಯದೇವ ಹಾಗೂ ಪ್ರಾಸ್ತವನಾಕಾರರಾಗಿ ರಾಷ್ಟ್ರೋತ್ಥಾನ ಸಾಹಿತ್ಯ ಸಮಿತಿಯ ಗೌರವಾನ್ವಿತ ಪ್ರಧಾನ ಸಂಪಾದಕರಾದ ಡಾ|| ಎಸ್. ಆರ್. ರಾಮಸ್ವಾಮಿ ವೇದಿಕೆ ಏರಲಿದ್ದಾರೆ.
ಈ ಪುಸ್ತಕ ಪ್ರದರ್ಶನ ಮಳಿಗೆಯು ಸೆಪ್ಟೆಂಬರ್ 16 ರ ಬುಧವಾರದಿಂದ 21 ರವರೆಗೆ ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ ತೆರೆದಿರುತ್ತದೆ. ಇಲ್ಲಿ ಎಲ್ಲಾ ರೀತಿಯ ಪುಸ್ತಕಗಳು 20 % ರಿಯಾಯಿತಿ ದರದಲ್ಲಿ ಸಿಗುತ್ತದೆ. ಶಾಲಾ ಕಾಲೇಜು ಗ್ರಂಥಾಲಯಗಳಿಗೆ, ಸಗಟು ಖರೀದಿಸುವವರಿಗೆ ಹೆಚ್ಚಿನ ರಿಯಾಯ್ತಿ ಸಿಗಲಿದೆ.