ರಸ್ತೆ ಅಪಘಾತ : ದಕ್ಷಿಣ ಕನ್ನಡ ಡಿಸಿ ಎ.ಬಿ.ಇಬ್ರಾಹಿಂಗೆ ಗಾಯ
ಮಂಗಳೂರು, ಜುಲೈ 23 : ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಉಪ್ಪಿನಂಗಡಿ ಬಳಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.
ಶನಿವಾರ
ಮಧ್ಯಾಹ್ನ
ಎ.ಬಿ.ಇಬ್ರಾಹಿಂದ
ಅವರು
ಬೆಂಗಳೂರಿಗೆ
ಟೊಯೋಟಾ
ಫಾರ್ಚುನರ್
ಕಾರಿನಲ್ಲಿ
ತೆರಳುತ್ತಿದ್ದರು.
ಉದನೆ-ಗುಂಡ್ಯದ
ಸಮೀಪ
ಬೆಂಗಳೂರಿಂದ
ಬರುತ್ತಿದ್ದ
ಸ್ಕಾರ್ಪಿಯೋ
ಕಾರು
ಇಬ್ರಾಹಿಂ
ಅವರಿದ್ದ
ಕಾರಿಗೆ
ಡಿಕ್ಕಿ
ಹೊಡೆದು
ಈ
ಅಪಘಾತ
ಸಂಭವಿಸಿದೆ.[ದಕ್ಷಿಣ
ಕನ್ನಡ
ಜಿಲ್ಲಾಧಿಕಾರಿ
ಎ.ಬಿ.ಇಬ್ರಾಹಿಂ
ವರ್ಗಾವಣೆ]
ಅಪಘಾತದಲ್ಲಿ ಎ.ಬಿ.ಇಬ್ರಾಹಿಂ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಕಾರ್ಪಿಯೋದಲ್ಲಿದ್ದ ಐವರು ಗಾಯಗೊಂಡಿದ್ದಾರೆ. ಈ ಅಪಘಾತದಿಂದಾಗಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಸುಮಾರು ಅರ್ಧ ಗಗಂಟೆಗಳ ಬಳಿಕ ಸಂಚಾರ ವ್ಯವಸ್ಥೆಯನ್ನು ಸರಿಪಡಿಸಲಾಯಿತು.[ದಕ್ಷಿಣ ಕನ್ನಡದಲ್ಲಿ 6 ತಿಂಗಳಲ್ಲಿ 530 ಅಪಘಾತ]
ತುಮಕೂರಿಗೆ ತೆರಳುತ್ತಿದ್ದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಶಶಿ ಬೆಳ್ಳಾಯರು, ಗಿರೀಶ, ಸುನಿಲ್ ಕೃಷ್ಣಾಪುರ, ಮನೋಹರ್ ಮುಂತಾದವರು ಸಂಚಾರ ಸುಗಮಗೊಳಿಸಲು ಸಹಕಾರ ನೀಡಿದರು.
ವರ್ಗಾವಣೆಗೊಂಡಿದ್ದಾರೆ : ಮೊದಲು ಕೆಎಎಸ್ ಅಧಿಕಾರಿಯಾಗಿದ್ದ ಎ.ಬಿ.ಇಬ್ರಾಹಿಂ ಅವರು ನಂತರ ಐಎಎಸ್ ಅಧಿಕಾರಿಯಾಗಿ ಬಡ್ತಿ ಪಡೆದಿದ್ದರು. 2013ರ ಡಿಸೆಂಬರ್ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಅವರು ಅಧಿಕಾರ ವಹಿಸಿಕೊಂಡಿದ್ದರು. ಸದ್ಯ, ಎ.ಬಿ.ಇಬ್ರಾಹಿಂ ಅವರನ್ನು ಸಾರಿಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ.