ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು, ಕೇರಳ ಸಂತ್ರಸ್ತರಿಗಾಗಿ ಮಿಡಿದ ಕಡಲ ತಡಿಯ ಹೃದಯ

|
Google Oneindia Kannada News

Recommended Video

Kodagu floods: Bangalore drone start-up helps locate stranded people

ಮಂಗಳೂರು, ಆಗಸ್ಟ್ 21: ಕೊಡಗು ಹಾಗು ಕೇರಳದ ಜನರು ಜಲಪ್ರಳಯಕ್ಕೆ ತುತ್ತಾಗಿ ಮನೆ, ಆಸ್ತಿ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಇದೀಗ ಕಷ್ಟದಲ್ಲಿರುವ ಸಂತ್ರಸ್ತರ ನೆರವಿಗೆ ಕಡಲ ತಡಿಯ ಜನರು ಮುಂದಾಗಿದ್ದಾರೆ. ಉದಾರ ನೆರವು ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ .

ಕರಾವಳಿಯ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗು ರಾಜಕೀಯ ಸಂಘ ಸಂಸ್ಥೆಗಳು ಸಂತ್ರಸ್ತರ ನೆರವಿಗೆ ಮುಂದಾಗುತ್ತಿವೆ. ದಕ್ಷಿಣ ಕನ್ನಡ ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿದ ಮಂಗಳೂರು ಜನರು ಅಗತ್ಯ ವಸ್ತುಗಳು, ಆಹಾರ ಸಾಮಗ್ರಿಗಳು, ಹೊಸ ಬಟ್ಟೆ, ಪಾತ್ರೆ, ಔಷಧಿ ಸೇರಿದಂತೆ ಅಗತ್ಯ ವಸ್ತುಗಳ ಕೊಡುಗೆಯನ್ನು ನೀಡುತ್ತಿದ್ದಾರೆ.

ಬಿಸ್ಕೆಟ್ ಗಿಂತ ಬದುಕು ಕಟ್ಟಿಕೊಳ್ಳಬೇಕು, ಕೊಡಗು ಸಂತ್ರಸ್ತರ ಮನವಿಬಿಸ್ಕೆಟ್ ಗಿಂತ ಬದುಕು ಕಟ್ಟಿಕೊಳ್ಳಬೇಕು, ಕೊಡಗು ಸಂತ್ರಸ್ತರ ಮನವಿ

ಕುಡಿಯುವ ನೀರು ಸೇರಿದಂತೆ ಅನಗತ್ಯ ವಸ್ತುಗಳನ್ನು ಮಂಗಳೂರಿನಿಂದ ರವಾನಿಸಲಾಯಿತು. ನವ ಮಂಗಳೂರು ಬಂದರಿನಿಂದ ಅಗತ್ಯ ವಸ್ತುಗಳನ್ನು ಕೋಸ್ಟ್ ಗಾರ್ಡ್ ನ ಎರಡು ಹಡಗು ಮತ್ತು ಮೂರು ವಿಮಾನದ ಮೂಲಕ ಪಕ್ಕದ ಕೇರಳಕ್ಕೆ ಸಾಗಿಸಲಾಗಿದೆ.

Relief Materials for flood victims of Kerala and Kodagu sent from Mangaluru

ಮಂಗಳೂರು, ಬಂಟ್ವಾಳ, ಪುತ್ತೂರು ಮತ್ತು ಸುಳ್ಯದಿಂದ ವಿವಿಧ ಸಾಮಾಜಿಕ ಕಾರ್ಯಕರ್ತರು ಮತ್ತು ವೈಯಕ್ತಿಕವಾಗಿ ಕೆಲವು ದಾನಿಗಳು ನೆರವಿನ ಹಸ್ತ ಚಾಚಿದ್ದಾರೆ. ಕೆಲವರು ವೈಯಕ್ತಿಕವಾಗಿ ಅಲ್ಲಿಗೆ ಭೇಟಿ ನೀಡಿ ತಮ್ಮಿಂದಾಗುವ ಸಹಾಯ ಮಾಡುತ್ತಿದ್ದಾರೆ.

Relief Materials for flood victims of Kerala and Kodagu sent from Mangaluru

ಕೇರಳ ಹಾಗೂ ಕೊಡಗಿನ ನೆರೆಪೀಡಿತರ ನೆರವಿಗೆ ಶ್ರೀ ಕಾಶೀಮಠ ಸಂಸ್ಥಾನ ಹಾಗು ಜಿ.ಎಸ್.ಬಿ ದೇವಾಲಯಗಳ ಒಕ್ಕೂಟ ಮುಂದಾಗಿದೆ. ನಗರದ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನ ವತಿಯಿಂದ ಕಾಶೀ ಮಠಾಧೀಶರಾದ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಆದೇಶದ ಮೇರೆಗೆ ಕೇರಳ ಹಾಗೂ ಕೊಡಗಿನ ಪ್ರವಾಹಪೀಡಿತ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಕೊಟ್ಟಿರುವುದಲ್ಲದೆ, ಧನ ಸಹಾಯ ಮಾಡಲಾಗಿದೆ.

ಪ್ರವಾಹಕ್ಕೆ ನಲುಗಿದ ತಾಯ್ನಾಡಿಗೆ ಮಿಡಿದ ಬೆಂಗಳೂರು ಕೊಡವ ಸಮಾಜ!ಪ್ರವಾಹಕ್ಕೆ ನಲುಗಿದ ತಾಯ್ನಾಡಿಗೆ ಮಿಡಿದ ಬೆಂಗಳೂರು ಕೊಡವ ಸಮಾಜ!

ಇದೇ ರೀತಿ ಬೆಂಗಳೂರು ಕಾಶಿಮಠ, ಕೋಟ ಶ್ರೀ ಕಾಶಿ ಮಠದ ವತಿಯಿಂದಲೂ ಕಳುಹಿಸಲಾಗಿದೆ.

Relief Materials for flood victims of Kerala and Kodagu sent from Mangaluru

ಕೇರಳ ನೆರೆ ಸಂತ್ರಸ್ತರಿಗೆ ನೀವು ಹೇಗೆ ಸಹಾಯ ಮಾಡಬಹುದು ನೋಡಿ...ಕೇರಳ ನೆರೆ ಸಂತ್ರಸ್ತರಿಗೆ ನೀವು ಹೇಗೆ ಸಹಾಯ ಮಾಡಬಹುದು ನೋಡಿ...

5 ಸಾವಿರ ಕೆಜಿ ಅಕ್ಕಿ , 1 ಸಾವಿರ ಧಾನ್ಯ ಹಾಗು ಬೇಳೆ ಕಾಳುಗಳು, 4೦೦ ಕೆಜಿ ಚಹಾ, ಕಾಫಿ ಪುಡಿ, 750 ಕೆಜಿ ಸಕ್ಕರೆ, 20 ಸಾವಿರ ದಿನನಿತ್ಯ ಉಪಯೋಗಿಸುವ ಸಾಮಗ್ರಿ, 25,500 ಹೊಸ ಬಟ್ಟೆಗಳನ್ನು ನೆರೆ ಸಂತ್ರಸ್ತರಿಗಾಗಿ ಕೊಚ್ಚಿಯ ತಿರುಮಲ ವೆಂಕಟರಮಣ ದೇವಳಕ್ಕೆ ಕಳುಹಿಸಲಾಗಿದೆ.

English summary
Mangaloreans coming forward to donate households and food items for flood affected Kodagu and Kerala
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X