ಮಡೆಸ್ನಾನ ನಿಲ್ಲಿಸಿ, ಮಂಗಳೂರಲ್ಲಿ ಪ್ರತಿಭಟನೆ
ಮಂಗಳೂರು, ನ.25 : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಂಗಳವಾರದಿಂದ ಮೂರು ದಿನಗಳ ಕಾಲ ಮಡೆಸ್ನಾನ ನಡೆಯಲಿದೆ. ಹರಕೆ ತೀರಿಸಿಕೊಳ್ಳಲು ಭಕ್ತರ ದಂಡೇ ಕುಕ್ಕೆಯಲ್ಲಿ ನೆರೆದಿದೆ. ಇತ್ತ ಮಂಗಳೂರಿನಲ್ಲಿ ಮಡೆಸ್ನಾನದ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಹಾಗೂ ಧರಣಿ ನಡೆಯುತ್ತಿದೆ.
ಕರ್ನಾಟಕ
ರಾಜ್ಯ
ಹಿಂದುಳಿದ
ವರ್ಗಗಳ
ಜಾಗೃತ
ವೇದಿಕೆ
ಆಶ್ರಯದಲ್ಲಿ
ದಕ್ಷಿಣ
ಕನ್ನಡ
ಜಿಲ್ಲಾಧಿಕಾರಿಗಳ
ಕಚೇರಿ
ಮುಂಭಾಗದಲ್ಲಿ
ಒಂದು
ದಿನದ
ಧರಣಿ
ಮತ್ತು
ಜನಜಾಗೃತಿ
ಕಾರ್ಯಕ್ರಮ
ಹಮ್ಮಿಕೊಳ್ಳಲಾಗಿದ್ದು,
ಸಂಘಟನೆಯ
ನಾಯಕರು
ಮತ್ತು
ಕಾರ್ಯಕರ್ತರು
ಮಡೆಸ್ನಾನ
ವಿರೋಧಿಸಿ
ಘೋಷಣೆ
ಕೂಗುತ್ತಿದ್ದಾರೆ.
ಸುಬ್ರಮಣ್ಯದಲ್ಲಿ ನಡೆಯುವ ನಿರ್ದಿಷ್ಟ ಸಮುದಾಯದ ಜನ ಉಂಡುಬಿಟ್ಟ ಎಂಜಲೆಲೆಯ ಮೇಲೆ ಭಕ್ತಾದಿಗಳು ನಡೆಸುವ ಉರುಳು ಸೇವೆ (ಮಡೆ-ಮಡೆಸ್ನಾನ) ಪದ್ಧತಿಯನ್ನು ನಿಲ್ಲಿಸಬೇಕೆಂದು ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿತ್ತು. [ಕುಕ್ಕೆಯಲ್ಲಿ ಇಂದು ಮಡೆಸ್ನಾನ]
ಆದರೆ, ಹೈಕೋರ್ಟ್ ವಿಭಾಗೀಯ ಪೀಠ ಕಳೆದ ವಾರ ಮಡೆ-ಮಡೆಸ್ನಾನಕ್ಕೆ ಇರುವ ತಡೆಯನ್ನು ತೆರವುಗೊಳಿಸಿತ್ತು. ಆದ್ದರಿಂದ ನ.25ರಿಂದ ನ.27ರವರೆಗೆ ನಿರಾತಂಕವಾಗಿ ಮಡೆಸ್ನಾನ ನಡೆಯುತ್ತಿದೆ. ಹೈಕೋರ್ಟ್ ಆದೇಶವನ್ನು ಖಂಡಿಸಿ, ಧರಣಿ ನಿರತರು ಘೋಷಣೆಗಳನ್ನು ಕೂಗುತ್ತಿದ್ದಾರೆ. [ಚಿತ್ರಗಳು : ಐಸಾಕ್ ರಿಚರ್ಡ್, ಮಂಗಳೂರು]
ಪತ್ರಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಮು ಅವರು, ಮಡೆಸ್ನಾನ ಒಂದು ಅಮಾನವೀಯ ಮತ್ತು ವಿಚಾರಹೀನ ಪದ್ಧತಿಯಾಗಿದ್ದು, ಇದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ. ಮಡೆಸ್ನಾನವನ್ನು ಮುಂದುವರಿಸುವಂತೆ ಹೈಕೋರ್ಟ್ ಆದೇಶ ನೀಡಬೇಕು ಎಂದು ಆಗ್ರಹಿಸಿದ್ದಾರೆ. [ಮಡೆಸ್ನಾನದಲ್ಲಿ ಬ್ರಾಹ್ಮಣರು ಇದ್ರು]