ಮಂಗಳೂರು : ಎಚ್1ಎನ್ 1 ಬಗ್ಗೆ ಆತಂಕ ಬೇಡ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಚ್ 1 ಏನ್ 1 ಸಮಸ್ಯೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಶಮನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲೆಯಲ್ಲಿರುವ ಸರಕಾರಿ ಮತ್ತು ಖಾಸಗಿ ವಲಯದ ಎಲ್ಲ ಆಸ್ಪತ್ರೆ
ಮಂಗಳೂರು, ಆ.2 : 'ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಚ್1 ಎನ್1 ಸಮಸ್ಯೆ ಶಮನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರಿ ಮತ್ತು ಖಾಸಗಿ ವಲಯದ ಎಲ್ಲಾ ಆಸ್ಪತ್ರೆ, ಕ್ಲಿನಿಕ್ ಗಳಿಗೆ ಸುತ್ತೋಲೆ ಕಳುಹಿಸಲಾಗಿದೆ' ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣರಾವ್ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಭದ್ರತೆಗೆ ಬಂದ ಪೊಲೀಸರ ಗೋಳು ಕೇಳೋರು ಯಾರು..
ಎಚ್1 ಎನ್ 1 ವೈರಸ್ ನಿಂದ ಹರಡುವ ಸೋಂಕಾಗಿದ್ದು, ಜಿಲ್ಲೆಯಲ್ಲಿ 2017ರಲ್ಲಿ ಇದುವರೆಗೆ 752 ಶಂಕಿತ ಪ್ರಕರಣಗಳಲ್ಲಿ 200 ಪಾಸಿಟಿವ್ ಪ್ರಕರಣಗಳನ್ನು ಪತ್ತೆ ಹೆಚ್ಚಲಾಗಿದೆ . ಇದುವರೆಗೆ ಈ ಸೋಂಕಿನಿಂದ ಇಬ್ಬರು ಸಾವಿಗೀಡಾಗಿದ್ದಾರೆ.
ಜ್ವರ ಅಸಡ್ಡೆ ಬೇಡ : ಈ ಸೋಂಕು ತಗುಲಿದವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದರೆ ಸಮಸ್ಯೆ ಅಷ್ಟಾಗಿ ಕಾಡುವುದಿಲ್ಲ. ಆದರೆ, ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಲ್ಲಿ ಗಂಭೀರ ಸಮಸ್ಯೆಗಳು ಕಂಡುಬರುತ್ತವೆ. ಆದ್ದರಿಂದ ಶೀತ, ಜ್ವರ, ಕೆಮ್ಮು ಸಮಸ್ಯೆಗಳಿಂದ ಬಳಲುತ್ತಿರುವವರು 2-3 ದಿನ ಔಷಧಿ ತೆಗೆದುಕೊಂಡರು ಸೋಂಕು ಗುಣವಾಗದಿದ್ದರೆ ಕೂಡಲೇ ಸಮೀಪದ ಸಮೀದಪ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರಕ್ತದ ಮಾದರಿ ನೀಡಬೇಕು.
'ರಕ್ತದ ಮಾದರಿಯನ್ನು ಪರೀಕ್ಷೆ ಮಾಡಿದ ಬಳಿಕ ಸೋಂಕು ಇರುವ ಬಗ್ಗೆ ದೃಢಪಡಿಸಲಾಗುತ್ತದೆ. ಸೋಂಕು ದೃಢ ಪಟ್ಟರೆ ರೋಗಿಗೆ ಔಷಧಿ ನೀಡಲಾಗುತ್ತದೆ. ಇತ್ತೀಚೆಗೆ ಈ ಸೋಂಕಿನಿಂದ ವೇಣೂರಿನ ಗ್ರಾಮ ಪಂಚಾಯತಿ ಸಿಬ್ಬಂದಿ ಪುಷ್ಪಾವತಿ ಎಂಬ ಗರ್ಭಿಣಿ ಮಹಿಳೆ ಮೃತಪಟ್ಟಿದ್ದಾರೆ. ಒಂದು ವಾರದ ಹಿಂದೆಯೇ ಸೋಂಕಿನ ಲಕ್ಷಣ ಕಂಡುಬಂದಿದ್ದರೂ ನಿರ್ಲಕ್ಷ್ಯ ಮಾಡಿರುವುದರಿಂದ ಸಾವು ಸಂಭವಿಸಿದೆ' ಎಂದು ಡಾ. ರಾಮಕೃಷ್ಣ ರಾವ್ ಹೇಳಿದರು.
ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ .ರಾಜೇಶ್ ಮಾತನಾಡಿ, 'ಎಚ್1 ಎನ್1 ಜಿಲ್ಲೆಯಲ್ಲಿ ಪ್ರಥಮ ಬಾರಿಗೆ 2009 ರಲ್ಲಿ ಪತ್ತೆಯಾಗಿದ್ದು, 2015 ರಲ್ಲಿ 500 ಶಂಕಿತ ಪ್ರಕರಣಗಳು 150 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು . 2016 ರಲ್ಲಿ 50 ಶಂಕಿತ ಪ್ರಕರಣಗಳ್ಲಲಿ 7 ಮಂದಿಗೆ ಎಚ್1 ಎನ್1 ಧೃಡಪಟ್ಟಿತು' ಎಂದು ಮಾಹಿತಿ ನೀಡಿದರು .
59 ಡೆಂಗ್ಯೂ ಪ್ರಕರಣ : ದಕ್ಷಿಣ ಕನ್ನಡ ಜಿಲ್ಲೆಯ 59 ಮಂದಿಯಲ್ಲಿ ಡೆಂಗ್ಯೂ ಸೋಂಕು ದೃಢಪಟ್ಟಿದೆ. ಮಲೇರಿಯಾ ಪ್ರಕರಣ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 30 ರಿಂದ 40 ರಷ್ಟು ಕಡಿಮೆಯಾಗಿದೆ. ಕಳೆದ ವರ್ಷ ಜುಲೈ ತಿಂಗಳವರೆಗೆ 2,477 ಮಂದಿ ಮಲೇರಿಯಾ ಸೋಂಕಿನಿಂದ ಬಳಲಿದ್ದರು. ಈ ವರ್ಷ 1416 ಪ್ರಕರಣಗಳು ಪತ್ತೆಯಾಗಿವೆ.