ಕೈದಿ ಕೈಯಲ್ಲಿ ಪೆಟ್ಟು ತಿಂದ ಪೊಲೀಸ್
ಮಂಗಳವಾರ, ನವೆಂಬರ್ 08 : ಕೈದಿಯೇ ಪೊಲೀಸ್ ಮೇಲೆ ಹಲ್ಲೆ ನಡೆಸಿರುವ ಘಟನೆ ಮಂಗಳೂರಿನಲ್ಲಿ ನವೆಂಬರ್ 8 ಬುಧವಾರ ನಡೆದಿದೆ.
ಗಾಂಜಾ ಮಾರುತ್ತಿದ್ದವನ ಬಂಧಿಸಿದ ಬೆಂಗಳೂರು ಪೊಲೀಸರು
ವಿಚಾರಣಾದೀನ ಕೈದಿ ನೂಮಾನ್ ಎಂಬುವನನ್ನು ಮಂಗಳೂರಿನ ನ್ಯಾಯಾಲಯಕ್ಕೆ ಹಾಜರು ಪಡಿಸಿ ವಾಪಾಸ್ ಕರೆತರಬೇಕಾದರೆ ಕಾನ್ಸ್ಟೇಬಲ್ ಕುರಿಯಾಕೋಸ್ ಎಂಬುವರ ಮೇಲೆ ಎರಗಿ ಹೊಡೆದಿದ್ದಾನೆ.
ಜಿಲ್ಲಾ ಕಾರಾಗೃಹದಿಂದ ಕೈದಿ ನೂಮ್ ನನ್ನು ಕುರಿಯಾಕೋಸ್ ಅವರೇ ನ್ಯಾಯಾಲಯಕ್ಕೆ ಕರೆತಂದಿದ್ದರು. ಮತ್ತೆ ಅವರೇ ವಾಪಾಸು ಕರೆದುಕೊಂಡು ಹೋಗುತ್ತಿರುವ ಸಂದರ್ಭ ಪಿ.ವಿ.ಎಸ್ ವೃತ್ತದ ಬಳಿ ಕೈದಿ ನೂಮಾನ್ ಕೈಗೆ ಹಾಕಿದ್ದ ಕೋಳದ ಚೈನ್ ಮೂಲಕ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಆದರೆ ಅಲ್ಲಿಯೇ ಇದ್ದ ಸಂಚಾರಿ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಕುರಿಯಾಕೋಸ್ ಅವರನ್ನು ನೂಮನ್ ನಿಂದ ಬಿಡಿಸಿದ್ದಾರೆ. ಪೇದೆ ಕುರಿಯಾಕೋಸ್ ಗೆ ಯಾವುದೇ ಗಾಯಗಳಾಗಿಲ್ಲ.
Comments
English summary
Police constable kuriyakos beaten by a enquiries prisoner Nooman. kuriyakos taking Nooman back to jail after attending court in Mangalore on the way Numan suddenly starting Thrashing kuriyakos by using handcuffs.