ಗಾಂಜಾ ವಿರುದ್ದ ಧ್ವನಿ ಎತ್ತಿದವನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದರು
ಮಂಗಳೂರು, ಅಕ್ಟೋಬರ್. 29 : ಗಾಂಜಾ ಹಾವಳಿ ವಿರುದ್ದ ಧ್ವನಿ ಎತ್ತಿದ್ದ ವ್ಯಕ್ತಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿರುವ ಘಟನೆ ಶುಕ್ರವಾರ ರಾತ್ರಿ ಉಳ್ಳಾಲ ಠಾಣಾ ವ್ಯಾಪ್ತಿಯ ಬಸ್ತಿಪಡ್ಪಿನಲ್ಲಿ ನಡೆದಿದೆ.
ತಾರನಾಥ್ ಎಂಬವರು ಗಾಂಜಾ ವಿರುದ್ದ ಧ್ವನಿ ಎತ್ತಿದ್ದರು. ಈ ಹಿನ್ನಲೆಯಲ್ಲಿ ತಾರನಾಥ್ ರಾತ್ರಿ ಮನೆಯಲ್ಲಿ ಮಲಗಿರುವ ಸಮಯದಲ್ಲಿ ವೆಂಟಿಲೇಟರ್ ಮೂಲಕ ಪೆಟ್ರೋಲ್ ಸುರಿದು ಬೆಂಕಿಯಿಟ್ಟು ಹತ್ಯೆಗೆ ಯತ್ನಿಸಿದ್ದಾರೆ. ಅದೃಷ್ಟವಶಾತ್ ಪತ್ನಿ ಹಾಗೂ ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದು. ತಾರನಾಥ್ ಅವರ ಕೈಗಳಿಗೆ ಸುಟ್ಟ ಗಾಯಗಳಾಗಿದ್ದು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. [ಮಂಗಳೂರಲ್ಲಿ 10 ಲಕ್ಷ ಮೌಲ್ಯದ ಗಾಂಜಾ ವಶ]
ಬೆಡ್ ರೂಂಮಿನ ವೆಂಟಿಲೇಟರ್ ಮೂಲಕ ಪೆಟ್ರೋಲ್ ಹಾಕಿ ಬೆಂಕಿಯಿಟ್ಟು ದುಷ್ಕರ್ಮಿಗಳು ಹತ್ಯೆಗೆ ಯತ್ನಿಸಿದ್ದಾರೆ. ತಾರನಾಥ್ ಬೆಡ್ರೂಮ್ನಲ್ಲಿ ಪತ್ನಿ ವಿದ್ಯಾ ಹಾಗೂ 10 ವರ್ಷದ ಪುತ್ರ ಮಿಥುನ್ ಜೊತೆ ಇದ್ದರು.ಮನೆಯ ವೆಂಟಿಲೇಟರ್ ಮೂಲಕ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. [ಬಿಡದ ಗಾಂಜಾ ಮಾರಾಟ ಚಾಳಿ: ಜಾಮೀನು ರದ್ದು]
ತಾರನಾಥ್ ಬೆಂಕಿಯಿಂದ ಪತ್ನಿ, ಮಗನನ್ನು ರಕ್ಷಿಸಿದ್ದಾರೆ. ಆದರೆ, ರಕ್ಷಿಸುವ ಭರದಲ್ಲಿ ಅವರ ಎರಡೂ ಕೈಗಳಿಗೂ ಸುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ತನಿಖೆ ನಡೆಸಿದ್ದಾರೆ.