ಸಹಜ ಸ್ಥಿತಿಗೆ ಮರಳಿದ ಮಂಗಳೂರಿನ ಶಂಕಿತ ನಿಪಾಹ್ ವೈರಸ್ ಸೋಂಕಿತರು
ಮಂಗಳೂರು ಮೇ 24: ಕೇರಳದಲ್ಲಿ ವ್ಯಾಪಕವಾಗಿ ಹರಡುತ್ತಿರುವ ನಿಪಾಹ್ ವೈರಸ್ ರಾಜ್ಯಕ್ಕೂ ಹರಡುವ ಆತಂಕ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಆರೋಗ್ಯ ಇಲಾಖೆ ಭಾರೀ ಕಟ್ಟೆಚ್ಚರ ವಹಿಸಿದೆ.
ನಿಪಾಹ್ ವೈರಸ್ ಭಾದಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ಗಳನ್ನು ತೆರೆಯಲಾಗಿದೆ.
ಚಿತ್ರದಲ್ಲಿ ನೋಡಿ ನಿಪಾಹ್ ವೈರಸ್ ಮುನ್ನೆಚ್ಚರಿಕೆ ಕ್ರಮ
ಈ ನಡುವೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಶಂಕಿತ ನಿಪಾಹ್ ವೈರಸ್ ಭಾದಿತರಿಬ್ಬರ ಆರೋಗ್ಯ ಸ್ಥಿತಿ ಸಹಜವಾಗಿದೆ. ಅವರಿಗೆ ಇತರ ರೋಗಿಗಳಂತೆಯೇ ಚಿಕಿತ್ಸೆ ನೀಡಲಾಗುತ್ತಿದೆ.
ಆದರೆ ನಿಪಾಹ್ ವೈರಸ್ ಸೊಂಕು ತಗುಲಿರುವ ಶಂಕೆಯ ಮೇರೆಗೆ ಈ ರೋಗಿಗಳಿಬ್ಬರ ಗಂಟಲಿನ ದ್ರವದ ಮಾದರಿಯನ್ನು ಮಣಿಪಾಲದ ಮಣಿಪಾಲ ಸೆಂಟರ್ ಫಾರ್ ವೈರಸ್ ರಿಸರ್ಚ್ ಸೆಂಟರ್ ಗೆ ಕಳುಹಿಸಲಾಗಿದ್ದು, ಅದರ ವರದಿ ಈವರೆಗೆ ಬಂದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸರ್ವೇಕ್ಷಣಾಧಿಕಾರಿ ಡಾ. ರಾಜೇಶ್ ತಿಳಿಸಿದ್ದಾರೆ.
ಈ ಇಬ್ಬರು ಶಂಕಿತ ರೋಗಿಗಳಿಗೆ ನಿಪಾಹ್ ವೈರಸ್ ತಗುಲಿರುವ ಸಾಧ್ಯತೆ ತುಂಬಾ ಕಡಿಮೆ ಇದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಿಪಾಹ್ ವೈರಸ್ ಆತಂಕ: ದ.ಕ. ಜಿಲ್ಲೆ ಶ್ರೀ ಕ್ಷೇತ್ರಗಳಲ್ಲಿ ಕಟ್ಟೆಚ್ಚರ
ಮಣಿಪಾಲ ದಿಂದ ವರದಿ ಬಂದ ಬಳಿಕ ವಷ್ಟೇ ಈ ಇಬ್ಬರು ರೋಗಿಗಳಿಗೆ ತಗುಲಿರುವ ಸೊಂಕು ನಿಪಾಹ್ ವೋ ಅಥವಾ ಇತರ ಕಾಯಿಲೆಯೊ ಎಂಬುದು ಧೃಡಪಡಬೇಕಷ್ಟೆ. ಈ ವರದಿ ಇಂದು ಸಂಜೆ ದೊರಕುವ ಸಾಧ್ಯತೆಯಿದೆ.