ಕರ್ನಾಟಕದ ಕರಾವಳಿ ಮೇಲೆ ಐಸಿಜಿಎಸ್ ಶೂರ್ ಕಣ್ಗಾವಲು
ಮಂಗಳೂರು, ಏಪ್ರಿಲ್ 27 : ಕರಾವಳಿ ಮೇಲೆ ಹದ್ದಿನ ಕಣ್ಣಿಡುವ ಐಸಿಜಿಎಸ್ ಶೂರ್ ನೌಕೆ ಮಂಗಳೂರಿನ ನವಮಂಗಳೂರು ಬಂದರಿಗೆ ಬಂದಿದೆ. ಗೋವಾದ ಶಿಪ್ಯಾರ್ಡ್ನಲ್ಲಿ ಈ ನೌಕೆ ನಿರ್ಮಾಣವಾಗಿದೆ ಎಂಬುದು ವಿಶೇಷ.
26/11
ಉಗ್ರರ
ದಾಳಿಯ
ಬಳಿಕ
ಸಮುದ್ರ
ಮಾರ್ಗದ
ಮೇಲೆ
ಹದ್ದಿನ
ಕಣ್ಣಿಡಲು
ಕೇಂದ್ರ
ಸರ್ಕಾರ
ಕ್ರಮ
ಕೈಗೊಂಡಿದೆ.
ಕರಾವಳಿಯ
ಬಲ
ಹೆಚ್ಚಿಸಲು
ತುರ್ತು
ಕ್ರಮಗಳನ್ನು
ಕೈಗೊಂಡಿದೆ.
ಅದಕ್ಕಾಗಿ
ಐಸಿಜಿಎಸ್
ಶೂರ್
ನೌಕೆ
ನಿರ್ಮಾಣ
ಮಾಡಲಾಗಿದೆ.
[ವಿಕ್ರಮಾದಿತ್ಯ
ಕಾರವಾರ
ನೌಕಾನೆಲೆಗೆ]
ಏ. 11ರಂದು ಕೇಂದ್ರ ಬಂದರು ಖಾತೆ ಸಚಿವ ನಿತಿನ್ ಗಡ್ಕರಿ ಅವರು ಐಸಿಜಿಎಸ್ ಶೂರ್ ನೌಕೆಯನ್ನು ಗೋವಾದಲ್ಲಿ ಲೋಕಾರ್ಪಣೆ ಮಾಡಿದ್ದರು. 105 ಮೀ. ಉದ್ದವಿರುವ ಮಧ್ಯಮ ಗಾತ್ರದ ನೌಕೆ, ಒಂದು ಹೆಲಿಕಾಪ್ಟರ್ ಹೊತ್ತೂಯ್ಯಬಲ್ಲ ಸಾಮರ್ಥ್ಯ ಹೊಂದಿದೆ. [ಕರಾವಳಿ ತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ : ದೇಶಪಾಂಡೆ]
ಆತ್ಯಾಧುನಿಕ
ಸಂಪರ್ಕ
ಸೌಲಭ್ಯ,
ಕಣ್ಗಾವಲು
ವ್ಯವಸ್ಥೆಯ
ಪರಿಕರ,
ಸಮುದ್ರ
ಮಾಲಿನ್ಯ
ತಪಾಸಣೆ,
ಮೀನುಗಾರರ
ರಕ್ಷಣೆಗೆ
ಬೇಕಾದ
ಎಲ್ಲ
ಸೌಲಭ್ಯಗಳನ್ನು
ಇದು
ಹೊಂದಿದೆ.
ದಿನದ
24
ಗಂಟೆಯೂ
ಅಪರಿಚಿತ,
ಅನುಮಾನಾಸ್ಪದ
ಹಡಗುಗಳ
ಮೇಲೆ
ಕಣ್ಗಾವಲು
ಇಡವ
ವ್ಯವಸ್ಥೆಯನ್ನು
ನೌಕೆ
ಹೊಂದಿದೆ.
[ಕರಾವಳಿ
ಭಾಗದಲ್ಲಿ
ಒಂದು
ವರ್ಷದಲ್ಲಿ
217
ಕೊಲೆ]
ಐಸಿಜಿಎಸ್
ಶೂರ್
ನೌಕೆ
ಮಂಗಳವಾರ
ಮಂಗಳೂರಿಗೆ
ಆಗಮಿಸಿದೆ.
ಪಣಂಬೂರನ್ನು
ಜಿಲ್ಲಾ
ಪ್ರಧಾನ
ಕಚೇರಿಯನ್ನಾಗಿ
ಮಾಡಿಕೊಂಡು
ನೌಕೆ
ಕಾರ್ಯನಿರ್ವಹಣೆ
ಮಾಡಲಿದೆ.
14
ಅಧಿಕಾರಿಗಳು,
98
ಸಿಬ್ಬಂದಿ
ಹೊಂದಿರುವ
ನೌಕೆ
2,350
ಟನ್
ತೂಕ
ಹಾಗೂ
105
ಮೀಟರ್
ಉದ್ದವಿದೆ.