ಮಂಗಳೂರು : ನೆಹರೂ ಮೈದಾನದ ಅಂದ ಹೆಚ್ಚಿಸಲಿದೆ ನೆಹರೂ ಪ್ರತಿಮೆ
ಮಂಗಳೂರು, ಅಕ್ಟೋಬರ್ 28 : ಮಂಗಳೂರು ನಗರದ ನೆಹರೂ ಮೈದಾನದಲ್ಲಿ ನೆಹರೂ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದ್ದಾರೆ. ನೆಹರೂ ಅವರ 125 ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಪ್ರತಿಮೆ ಸ್ಥಾಪಿಸಲಾಗುತ್ತದೆ.
ಮಂಗಳವಾರ
ನಗರದ
ನೆಹರೂ
ಮೈದಾನಕ್ಕೆ
ಭೇಟಿ
ನೀಡಿ
ಪ್ರತಿಮೆ
ಸ್ಥಾಪನೆಗೆ
ಸ್ಥಳ
ಪರಿಶೀಲನೆ
ನಡೆಸಿದ
ಬಳಿಕ
ಮಾತನಾಡಿದ
ರಮಾನಾಥ
ರೈ
ಅವರು,
'ಜವಾಹರ
ಲಾಲ್
ನೆಹರೂ
ಅವರ
125
ನೇ
ಜನ್ಮ
ದಿನಾಚರಣೆ
ಸಂದರ್ಭದಲ್ಲಿ
ಪ್ರತಿಮೆ
ಸ್ಥಾಪಿಸಲಾಗುತ್ತದೆ.
ಮೈದಾನದ
ಸುತ್ತಲಿನ
ಆವರಣದ
ಬೇಲಿಯನ್ನು
ಪುನಃ
ನಿರ್ಮಾಣ
ಮಾಡಲಾಗುತ್ತದೆ'
ಎಂದರು.
[ಕಾಂಕ್ರಿಟ್
ರಸ್ತೆಗೆ
ಮಹಾನಗರ
ಪಾಲಿಕೆಯಿಂದ
ಕತ್ತರಿ]
'ಮೈದಾನ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಶುಚಿತ್ವ ಕಾಪಾಡುವುದು ಅತೀ ಅಗತ್ಯವಾಗಿದೆ ಎಂದು ಹೇಳಿದ ಸಚಿವರು, ಮೈದಾನದಲ್ಲಿ ತ್ಯಾಜ್ಯಗಳನ್ನು ಹಾಕಲಾಗುತ್ತಿದೆ. ಈ ಬಗ್ಗೆ ಕ್ರಮಕೈಗೊಂಡು ಮೈದಾನದ ಶುಚಿತ್ವ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. [ಖಾಲಿ ಸೈಟಿಗೆ ಹೊಸ ಸ್ಪರ್ಶ, ಇದು ನವೀನ್ ಚಂದ್ರ ಚಮತ್ಕಾರ]
'ಮೈದಾನದ ಒಂದು ಮೂಲೆಯಲ್ಲಿ ಪ್ರತಿಮೆ ಸ್ಥಾಪಿಸಲಾಗುತ್ತದೆ. ಇಲ್ಲಿ ನಡೆಯುವ ಕ್ರೀಡಾ ಚಟುವಟಿಕೆ ಹಾಗೂ ಇತರ ಕಾರ್ಯಕ್ರಮಗಳಿಗೆ ಯಾವುದೇ ಸಮಸ್ಯೆ ಆಗದಂತೆ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುತ್ತದೆ. ಮೈದಾನದಲ್ಲಿರುವ ಧ್ವಜಸ್ತಂಭವನ್ನೂ ನವೀಕರಿಸುವಂತೆ ಸೂಚಿಸಲಾಗಿದೆ' ಎಂದು ಸಚಿವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಮೇಯರ್ ಜೆಸಿಂತಾ ವಿಜಯ ಆಲ್ಫ್ರೆಡ್, ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಮುಂತಾದವರು ಸಚಿವರೊಂದಿಗೆ ಸ್ಥಳ ಪರಿಶೀಲನೆಯಲ್ಲಿ ಪಾಲ್ಗೊಂಡಿದ್ದರು.