ವರ್ಷಕ್ಕೆರಡು ಬಾರಿ ಯುವಜನೋತ್ಸವ: ಅಭಯಚಂದ್ರ ಜೈನ್
ಉಜಿರೆ, ಏಪ್ರಿಲ್ 11: ಯುವ ಜನತೆ ದೇಶದ ದೊಡ್ಡ ಶಕ್ತಿ. ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಎಲ್ಲಾ ರೀತಿಯ ಚಿಂತನೆಗೆ ಅವಕಾಶವಿದೆ. ವಿದ್ಯಾರ್ಥಿಗಳ ಮನದಲ್ಲಿ ಸಾಂಸ್ಕøತಿಕ ಆಸಕ್ತಿಯನ್ನು ಮೂಡಿಸುವುದು ಎನ್.ಎಸ್.ಎಸ್ ನ ಮುಖ್ಯ ಉದ್ದೇಶ. ಪ್ರಸ್ತುತ ನಡೆಯುತ್ತಿರುವ ಒಂದು ಯೋಜನೋತ್ಸವದ ಬದಲಾಗಿ ಮುಂದಿನ ವರ್ಷದಿಂದ ಎರಡು ರಾಷ್ಟ್ರೀಯ ಯೋಜನೋತ್ಸವವನ್ನು ಆಯೋಜಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.[ಮಂಗಳೂರಿನ ಬಾಬು ಪಿಲಾರ್ ಕೆಲಸಕ್ಕೆ ನಮ್ಮ ಸಲಾಂ]
ಇದಕ್ಕಾಗಿ 4 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ನೀಡಿದೆ ಎಂದು ಯುವ ಸಬಲೀಕರಣ ಹಾಗೂ ಕ್ರೀಡೆ ಮತ್ತು ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.
ಉಜಿರೆಯ
ಎಸ್.ಡಿ.ಎಂ
ಕಾಲೇಜಿನಲ್ಲಿ
ಕರ್ನಾಟಕ
ಸರ್ಕಾರ
ಯುವ
ಸಬಲೀಕರಣ
ಮತ್ತು
ಕ್ರೀಡಾ
ಇಲಾಖೆ,
ರಾಜ್ಯ
ರಾಷ್ಟ್ರೀಯ
ಸೇವಾ
ಯೋಜನಾ
ಕೋಶ,
ಮಂಗಳೂರು
ವಿಶ್ವವಿದ್ಯಾನಿಲಯದ
ಸಂಯುಕ್ತಾಶ್ರಯದಲ್ಲಿ
ಆಯೋಜಿಸಲಾಗಿದ್ದ
ರಾಜ್ಯಮಟ್ಟದ
ಐದು
ದಿನಗಳ
ರಾಷ್ಟ್ರೀಯ
ಸೇವಾ
ಯೋಜನೋತ್ಸವವನ್ನು
ಉದ್ಘಾಟಿಸಿ
ಅವರು
ಮಾತನಾಡುತ್ತಿದ್ದರು.
[ಪ.ಗೋ.ಪ್ರಶಸ್ತಿಗೆ
ಚಂದ್ರಹಾಸ
ಚಾರ್ಮಾಡಿ
ಆಯ್ಕೆ]
ಭಾಷೆ, ರಾಷ್ಟ್ರೀಯ ಭಾವೈಕ್ಯತೆ ಹಾಗೂ ಆತ್ಮ ವಿಶ್ವಾಸವನ್ನು ತುಂಬುವ ಕಾರ್ಯ ಎನ್.ಎಸ್.ಎಸ್ ನಿರ್ವಹಿಸುತ್ತಿದೆ. ಯುವಜನತೆ ದೇಶದ ಶಕ್ತಿ. ಇವರಿಂದ ಹೊಸ ಚಿಂತನೆಗಳಿಗೆ ಅವಕಾಶ ಸಿಗುವಂತಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ರಾಜ್ಯ ಸರ್ಕಾರ ಎನ್.ಎಸ್.ಎಸ್ ನ ಸಬಲೀಕರಣಕ್ಕೆ ಚಿಂತನೆ ನಡೆಸಿದೆ ಎಂದು ಅವರು ತಿಳಿಸಿದರು.[ಆಳ್ವಾಸ್ 'ಮೀಡಿಯಾ ಬಝ್' ಎಸ್.ಡಿ.ಎಂಗೆ ಸಮಗ್ರ ಪ್ರಶಸ್ತಿ]
ಕಾರ್ಯಕ್ರಮದ
ಅಧ್ಯಕ್ಷತೆ
ವಹಿಸಿ
ಮಾತನಾಡಿದ
ಉಜಿರೆಯ
ಎಸ್.ಡಿ.ಎಂ
ಶಿಕ್ಷಣ
ಸಂಸ್ಥೆಗಳ
ಉಪಾಧ್ಯಕ್ಷ
ಪ್ರೊ.
ಎಸ್.ಪ್ರಭಾಕರ್
ಮಾತನಾಡಿ
ವಿದ್ಯಾರ್ಥಿಗಳ
ಮನದಲ್ಲಿ
ಸೇವಾ
ಮನೋಭಾವವನ್ನು
ಬೆಳೆಸುವ
ನಿಟ್ಟಿನಲ್ಲಿ
ಎನ್.ಎಸ್.ಎಸ್
ವಿಶೇಷ
ಪಾತ್ರ
ವಹಿಸಲಿದ್ದು
ಪ್ರಾದೇಶಿಕ
ಸಾಂಸ್ಕೃತಿಕ
ಐಕ್ಯತೆ
ಜೊತೆಗೆ
ಪ್ರಾಯೋಗಿಕ
ಅನುಭವವನ್ನು
ನೀಡಲಿದೆ.
ಇದಕ್ಕಾಗಿ
ಸರ್ಕಾರ
ವಿಶೇಷ
ಕಾಳಜಿ
ವಹಿಸಿರುವುದು
ಶ್ಲಾಘನೀಯ.
ಸಮಾಜಕ್ಕಾಗಿ
ಬದುಕುವ
ಮನೋಭಾವವನ್ನು
ಬೆಳೆಸುವುದರ
ಜೊತೆಗೆ
ರಾಷ್ಟ್ರೀಯ
ಭಾವೈಕ್ಯತೆ
ಬೆಳೆಸಲಿದೆ
ಎಂದರು.
ಎಸ್.ಡಿ.ಎಂ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೋತ್ಸವ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಬೆಂಗಳೂರಿನ ರಾ.ಸೇ.ಯೋ.ಪ್ರಾದೇಶಿಕ ನಿರ್ದೇಶನಾಲಯದ ನಿರ್ದೇಶಕ ಎ.ಎನ್.ಪೂಜಾರ್, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮ, ಬೆಂಗಳೂರಿನ ರಾ.ಸೇ.ಯೋ.ಕೋಶದ ರಾಜ್ಯ ಸಂಪರ್ಕಾಧಿಕಾರಿ ಡಾ.ಗಣನಾಥ ಶೆಟ್ಟಿ ಎಕ್ಕಾರು, ಬೆಂಗಳೂರು ವಿಶ್ವವಿದ್ಯಾನಿಲಯದ ಶ್ರೀನಿವಾಸ, ಮಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ವಿನೀತಾ ರೈ ಮುಖ್ಯ ಶುಭ ಹಾರೈಸಿದರು.[ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿದರೆ ಸಾಧನೆ ಸಾಧ್ಯ: ಎಸ್ಡಿಎಂ ಪ್ರಿನ್ಸಿಪಾಲ್]
ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಎಸ್.ಮೋಹನ ನಾರಾಯಣ ಸ್ವಾಗತಿಸಿದರು. ಕಾಲೇಜಿನ ಎನ್.ಎಸ್.ಎಸ್ ಯೋಜನಾಧಿಕಾರಿ ಭಾನುಪ್ರಕಾಶ್ ವಂದಿಸಿದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಿ.ಎ. ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.