ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಗ್ರ ರೂಪಿ ಹನುಮ ಸೃಷ್ಠಿಕರ್ತನ ಹಾಡಿ ಹೊಗಳಿದ ಮೋದಿ

By Manjunatha
|
Google Oneindia Kannada News

ಮಂಗಳೂರು, ಮೇ 06: ಕಾರ್ ವಿಂಡ್ ಶೀಲ್ಡ್‌ ಮೇಲೆ, ಬೈಕುಗಳ ಹಿಂದೆ-ಮುಂದೆ, ಮೊಬೈಲ್ ವಾಲ್‌ಪೇಪರ್ ಆಗಿ, ಟಿ ಶರ್ಟ್‌ ಮೇಲೆ, ವಾಟ್ಸಾಪ್ ಡಿಪಿಯಾಗಿ ಕಾಣುವ ಕಡು ಕೆಂಪು ಕಣ್ಣಿನ ಉಗ್ರ ರೂಪಿ ಹನುಮನ ಚಿತ್ರವನ್ನು ರಚಿಸಿದ್ದ ಕರಣ್ ಆಚಾರ್ಯ ಅವರನ್ನು ಮೋದಿ ನಿನ್ನೆ ಹಾಡಿ ಹೊಗಳಿದರು.

ನಿನ್ನೆ ಮಂಗಳೂರಿನ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ನರೇಂದ್ರ ಮೋದಿ ಅವರು, 'ಕರಣ್ ಆಚಾರ್ಯ ಅವರು ತಮ್ಮ ಕಲಾಕೃತಿಯಿಂದ ದೇಶದ ಮೆಚ್ಚುಗೆ ಗಳಿಸಿದ್ದಾರೆ. ಅವರ ಪ್ರತಿಭೆ ಮತ್ತು ಕ್ರಿಯಾಶೀಲತೆಗೆ ನನ್ನ ವಂದನೆಗಳು' ಎಂದು ಮೋದಿ ಹೊಗಳಿದರು.

ಐಕಾನಿಕ್ ಕಿತ್ತಳೆ ಭಜರಂಗಿಯ ಸೃಷ್ಟಿಕರ್ತ ಕರಣ್ ಆಚಾರ್ಯಐಕಾನಿಕ್ ಕಿತ್ತಳೆ ಭಜರಂಗಿಯ ಸೃಷ್ಟಿಕರ್ತ ಕರಣ್ ಆಚಾರ್ಯ

ಸಂದರ್ಶನ ಪಡೆಯಲು ರಾಷ್ಟ್ರೀಯ ವಾಹಿನಿಗಳು ಅವರ ಮನೆ ಮುಂದೆ ಸಾಲುಗಟ್ಟಿದ್ದವು. ಅವರ ಪ್ರತಿಭೆಯನ್ನು ಇಡೀ ದೇಶವೇ ಕೊಂಡಾಡಿತು ಆದರೆ ಅದನ್ನು ಕಾಂಗ್ರೆಸ್‌ ಸಹಿಸಲಿಲ್ಲ, ಅವರಿಗೆ ಕಿರುಕುಳ ನೀಡಿತು. ಕಾಂಗ್ರೆಸ್‌ಗೆ ಕರಣ್ ಆಚಾರ್ಯ ಅವರ ಕಲೆಯನ್ನು ಅದಕ್ಕೆ ಸಿಕ್ಕ ಪ್ರಸಿದ್ಧಿಯನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಮೋದಿ ದೂರಿದರು.

Narendra Modi hails artist Karan Acharya

ಕರಣ್ ಆಚಾರ್ಯ ಅವರ ಕಲಾಕೃತಿ ಉಗ್ರ ಹಿಂದುತ್ವದ ಸಂಕೇತ ಎಂಬ ಚರ್ಚೆಗಳು ಹುಟ್ಟಿಕೊಂಡಿದ್ದವು. ಕೇರಳದ ಲೇಖಕಿಯೊಬ್ಬರು ಉಗ್ರ ಹನುಮನ ಚಿತ್ರ ಇರುವ ಆಟೋ, ಟ್ಯಾಕ್ಸಿಗಳನ್ನು ಹತ್ತುವುದಿಲ್ಲವೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಇದರ ಬಗ್ಗೆ ಸಾಕಷ್ಟು ಪರ ವಿರೋಧ ಚರ್ಚೆ ನಡೆಯಿತು.

ಮೇ 15ರ ಬಳಿಕ ಕಾಂಗ್ರೆಸ್ ತೆರೆದಿದ್ದ ಮಾಫಿಯಾ ಅಂಗಡಿಗಳು ಬಂದ್: ಮೋದಿಮೇ 15ರ ಬಳಿಕ ಕಾಂಗ್ರೆಸ್ ತೆರೆದಿದ್ದ ಮಾಫಿಯಾ ಅಂಗಡಿಗಳು ಬಂದ್: ಮೋದಿ

English summary
Prime minister Narendra Modi hails artist Karan Acharya who created famous Angry Hanuman. Modi said 'the Congress’ ecosystem doesn’t even tolerate the magnificent art of Karan Acharya whose Hanuman captured the imagination of the entire country'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X