ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಂತ್ ಕುಮಾರ್ ಸಾವಿನಲ್ಲೂ ವಿಕೃತಿ ಮೆರೆದ ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್

|
Google Oneindia Kannada News

Recommended Video

Ananth Kumar Demise : ಅನಂತ್ ಕುಮಾರ್ ಸಾವಿನಲ್ಲೂ ಕೆಟ್ಟದಾಗಿ ಮಾತನಾಡಿದ ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್

ಮಂಗಳೂರು, ನವೆಂಬರ್.12: ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್ ಅನಂತ್ ಕುಮಾರ್ ಸಾವಿನಲ್ಲೂ ವಿಕೃತಿ ಮೆರೆದಿದೆ. ಅನಂತ್ ಕುಮಾರ್ ಸಾವಿಗೆ ಸಂಭ್ರಮಿಸಿರುವ ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್ ಅನಂತ್ ಕುಮಾರ್ ನಿಧನದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದೆ.

ಫೇಸ್ ಬುಕ್‌ ಪೇಜ್‌ನಲ್ಲಿ ಅನಂತ್ ಕುಮಾರ್ ಬಗ್ಗೆ ಅವಹೇಳನಕಾರಿ ಬರಹ ಪ್ರಕಟಿಸಿದ ಮಂಗಳೂರು ಫೇಸ್ ಬುಕ್ ಪೇಜ್ "ಜಾತಿ ರಾಜಕಾರಣ, ಕುತಂತ್ರಿ ಬ್ರಾಹ್ಮಣ ಅನಂತಕುಮಾರ್ ಮೇಲೆ ಹೋಗಿಯೂ ಜಾತಿ ವಿಷ ಬಿತ್ತ ಬೇಡ" ಎಂದು ಬರೆಯುವ ಮೂಲಕ ತನ್ನ ವಿಕೃತಿ ಮೆರೆದಿದೆ.

ಸ್ನೇಹಜೀವಿ ಅನಂತ್ ಕುಮಾರ್ ವ್ಯಕ್ತಿಚಿತ್ರ: ಸಚಿತ್ರ ವಿವರಸ್ನೇಹಜೀವಿ ಅನಂತ್ ಕುಮಾರ್ ವ್ಯಕ್ತಿಚಿತ್ರ: ಸಚಿತ್ರ ವಿವರ

"ಜಾತಿ, ರಾಮ ರಾಮ ಅನ್ನುತ್ತಲೇ ಹೊಗೆ ಹಾಕಿಕೊಂಡ ಕೋಮುವಾದಿ ಅನಂತ ಕುಮಾರ್. ದೇಶ ಹಾಳು ಮಾಡಲು ಇನ್ನೊಮ್ಮೆ ಹುಟ್ಟಿ ಬರಬೇಡ ಎಂದು ಅವಹೇಳಕಾರಿ ಪೋಸ್ಟ್ ಪ್ರಕಟಿಸಿದೆ.

ಫೇಸ್ ಬುಕ್ ನಲ್ಲಿ ಚರ್ಚೆ

ಫೇಸ್ ಬುಕ್ ನಲ್ಲಿ ಚರ್ಚೆ

ಇದೀಗ ಮುಸ್ಲಿಂ ಫೇಸ್ ಬುಕ್ ಪೇಜ್ ಪ್ರಕಟಿಸಿದ ಅವಹೇಳಕಾರಿ ಪೋಸ್ಟ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು, ಇಂತಹ ಪೋಸ್ಟ್ ಪ್ರಕಟಿಸಿರುವವರ ವಿರುದ್ಧ ಸರಿಯಾಗಿ ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ. ಇಂತಹ ಹೇಳಿಕೆಗಳನ್ನು ಪೋಸ್ಟ್ ಮಾಡುವ "ನೀವು ಎಂಥವರು"? ಎಂದು ಪ್ರಶ್ನಿಸಲಾಗುತ್ತಿದೆ.

"ಜಾತಿ, ಜಾತಿ ಎಂದು ಹೇಳುತ್ತಿರುವೆ. ನೀನು ಮೊದಲು ಈ ಜಾತಿ ಧರ್ಮ ಬಿಡು, ದೊಡ್ಡ ಧರ್ಮಾಂಧ ನೀನು" ಎಂದು ಮುಸ್ಲಿಂ ಫೇಸ್ ಬುಕ್ ಪೇಜ್ ವಿರುದ್ಧ ಕಮೆಂಟ್ ಬರತೊಡಗಿವೆ.

ಕಿಡಿಕಾರಿದ ಮುಸ್ಲಿಂ ಬಂಧುಗಳು

ಕಿಡಿಕಾರಿದ ಮುಸ್ಲಿಂ ಬಂಧುಗಳು

ಮಂಗಳೂರು ಮುಸ್ಲಿಂ ಪೇಜ್ ಈ ರೀತಿಯ ಕೀಳುಮಟ್ಟದ ಪೋಸ್ಟ್ ಹಾಕುತ್ತಿದ್ದಂತೆ ಸ್ವತಃ ಮುಸ್ಲಿಮರೇ ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನಿನ್ನ ಮನೆಯಲ್ಲಿ ಯಾರಾದ್ರೂ ಸತ್ತರೆ ಇದೇ ರೀತಿ ಖುಷಿಪಡ್ತೀಯಾ" ಅಂತ ಪೇಜ್ ಅಡ್ಮಿನ್ ವಿರುದ್ಧ ಮುಸ್ಲಿಂ ಬಂಧುಗಳೇ ಕಿಡಿಕಾರಿದ್ದಾರೆ.

'ತಾನು ನಿರ್ಮಿಸಿದ ರಾಕೆಟ್ ಎಲ್ಲಿಗೆ ತಲುಪಬೇಕು ಅಂತ ದೇವರೇ ನಿರ್ಧರಿಸುತ್ತಾನೆ''ತಾನು ನಿರ್ಮಿಸಿದ ರಾಕೆಟ್ ಎಲ್ಲಿಗೆ ತಲುಪಬೇಕು ಅಂತ ದೇವರೇ ನಿರ್ಧರಿಸುತ್ತಾನೆ'

ಕಮೆಂಟ್ ಗಳಲ್ಲಿ ತೀವ್ರ ವಿರೋಧ

ಕಮೆಂಟ್ ಗಳಲ್ಲಿ ತೀವ್ರ ವಿರೋಧ

ವ್ಯಕ್ತಿ ಸತ್ತರೆ ಆ ಮನೆಯವರಿಗೆ ಸಂತಾಪ ಹೇಳುವುದು ಮುಸ್ಲಿಂ ಧರ್ಮ ಎಂದು ಬಹುತೇಕ ಎಲ್ಲಾ ಕಮೆಂಟ್ ಗಳಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಲಾಗಿದ್ದು, ಮಂಗಳೂರು ಮುಸ್ಲಿಂ ಪೇಜ್ ಈ ಪೋಸ್ಟ್ ಹಾಕಿದ ಅರ್ಧ ಗಂಟೆಯಲ್ಲಿ 140ಕ್ಕೂ ಹೆಚ್ಚು ಕಮೆಂಟ್ ಬಂದಿದ್ದು, 22 ಮಂದಿ ಪೋಸ್ಟ್ ಶೇರ್ ಮಾಡಿದ್ದಾರೆ.

ಕಾನೂನು ಕ್ರಮ ಕೈಗೊಳ್ಳಿ

ಕಾನೂನು ಕ್ರಮ ಕೈಗೊಳ್ಳಿ

ಸಾವಿನಲ್ಲೂ ವಿಕೃತಿ ಮೆರೆದ ಪೇಜ್ ಅಡ್ಮಿನ್ ವಿರುದ್ಧ ಇದೀಗ ವಿರೋಧ ವ್ಯಕ್ತವಾಗುತ್ತಿದ್ದು, ಸ್ವತಃ ಮುಸ್ಲಿಮರೇ ಈ ಪೇಜ್ ಡಿಲೀಟ್ ಮಾಡುವಂತೆ ಆಗ್ರಹಿಸುತ್ತಿದ್ದಾರೆ. "ನಿಮ್ಮ ವಿಕೃತ ಮನಸ್ಸಿನ ಬರಹದ ಕಾರಣ ಸಹೋದರ ಧರ್ಮದವರು ಇಸ್ಲಾಂ ಧರ್ಮವನ್ನು ತಪ್ಪು ಗ್ರಹಿಸುವಂತಾಗಿದೆ. ಜಾತಿ ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ನಿಲ್ಲಿಸಿ. ಇದು ಫೇಕ್ ಐಡಿ ಆಗಿರಬಹುದು. ಇಲ್ಲವೆಂದರೆ ಈ ಪೇಜ್ ನ ವಿರುದ್ಧ ಕಾನೂನು ಕ್ರಮಕೈಗೊಳ್ಳಿ" ಎಂದು ಒತ್ತಾಯಿಸಿದ್ದಾರೆ.

'ನೀಲಿಕಣ್ಣಿನ ಹುಡುಗ'ನ ಒಡನಾಟದ ಬಗ್ಗೆ ದಿನೇಶ್ ಅಮಿನ್ ಮಟ್ಟು ಭಾವುಕ ಮಾತುಗಳು...'ನೀಲಿಕಣ್ಣಿನ ಹುಡುಗ'ನ ಒಡನಾಟದ ಬಗ್ಗೆ ದಿನೇಶ್ ಅಮಿನ್ ಮಟ್ಟು ಭಾವುಕ ಮಾತುಗಳು...

English summary
Mangalore Muslim Facebook Page has posted a nonsense post about Ananth Kumar's death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X