ಮಂಗಳೂರಿನಲ್ಲಿ ಮಾನ್ಸೂನ್ ಸರ್ಫ್ ಚಾಲೆಂಜ್
ಮಂಗಳೂರು, ಮೇ 29: ಮಂತ್ರ ಸರ್ಫ್ ಕ್ಲಬ್ ಜಲಕ್ರೀಡೆ ಸ್ಪರ್ಧೆ ಮಾನ್ಸೂನ್ ಸರ್ಫ್ ಚಾಲೆಂಜ್ 2018 ನ್ನು ಮಂಗಳೂರು ಪಣಂಬೂರು ಬೀಚ್ನಲ್ಲಿ ಜೂನ್ 2-7ರವರೆಗೆ ಆಯೋಜಿಸಿದೆ. ದೇಶದ ಸರ್ಫಿಂಗ್ ಶಾಲೆಗಳಿಂದ 30 ಪ್ರತಿಭಾವಂತ ಸರ್ಫ್ಗಳು ಭಾಗವಹಿಸಲಿದ್ದಾರೆ.
ಮಾಯದಂಥ ಮಳೆಗೆ ಮಂಗಳೂರಿನ ರಸ್ತೆಗಳಲ್ಲಿ ನೀರೋ ನೀರು
ಮೊದಲ ಬಹುಮಾನವಾಗಿ 75 ಸಾವಿರ ರೂ. ಹಾಗೂ ದ್ವಿತೀಯ ಬಹುಮಾನವಾಗಿ 50 ಸಾವಿರ ರೂ. ಪಡೆಯಲಿದ್ದಾರೆ.ಭಾರತೀಯ ಸಫಿಂಗ್ ಫೆಡರೇಷನ್ ಈ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಟಿಟಿ ಗ್ರೂಪ್, ಫೈರ್ಫಾಕ್ಸ್ ಸೈಕಲ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಮಂಗಳೂರು ಕೆಮಿಕಲ್ ಫರ್ಟಿಲೈಸರ್ಸ್ ಅಂಡ್ ಮಂಗಳೂರು ಫೋರ್ಟ್ ಟ್ರಸ್ಸ್ ಲಿಮಿಟೆಡ್ ಸೇರಿದಂತೆ ಜಲಕ್ರೀಡೆಗೆ ಪ್ರಾಯೋಜಕತ್ವವಹಿಸಿಕೊಂಡಿವೆ.
ಜಲದೇಶದ ಪ್ರಮುಖ ಸರ್ಫರ್ಗಳು ಮಂಗಳೂರಿನಲ್ಲಿ ನಡೆಯುತ್ತಿರುವ ಈ ಜಲಕ್ರೀಡೆಯಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ದೇಶದ ಪ್ರಮುಖ ಸರ್ಫರ್ ಗಳಿಗೆ ಉತ್ತಮ ವೇದಿಕೆ ಇಲಾಗಲಿದೆ ಎಂದು ಕರ್ನಾಟಕ ಸಫೀಂಗ್ ಹಾಗೂ ವಾಟರ ಪ್ರಮೋಷನ್ ಕೌನ್ಸಿಲ್ನ ಕಾರ್ಯದರ್ಶಿ ಗೌರವ್ ಹೆಗ್ಡೆ ತಿಳಿಸಿದ್ದಾರೆ.