ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

LIVE: ಮಂಗಳೂರು ಮಹಾಮಳೆಗೆ ಚಿತ್ರ ನಿರ್ದೇಶಕ ಸಾವು

|
Google Oneindia Kannada News

ಮಂಗಳೂರು, ಮೇ 30: ಕರಾವಳಿಯ ಸುಂದರ ನಗರಿ ಮಂಗಳೂರಿನಲ್ಲಿ ಕಳೆದ ಒಂದು ದಿನದಿಂದ ಎಡಬಿಡದೆ ಮಳೆ ಸುರಿಯುತ್ತಲೇ ಇದೆ.

ರಾಜ್ಯಕ್ಕೆ ಮುಂಗಾರು ಆಗಮಿಸುವ ಸೂಚನೆ ಸಿಕ್ಕುತ್ತಿದ್ದಂತೆಯೇ ಆರಂಭವಾದ ಈ ಮಳೆ, 'ಮುಂಗಾರು ಮಳೆಯಷ್ಟೇ, ಸೈಕ್ಲೋನ್ ಪರಿಣಾಮವಲ್ಲ' ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಹೇಳಿದ್ದಾರೆ.

ಮಂಗಳೂರನ್ನು ನಡುಗಿಸಿದ ಮಹಾಮಳೆ, ಕರಾವಳಿಯಲ್ಲಿ ಆತಂಕ ಮಂಗಳೂರನ್ನು ನಡುಗಿಸಿದ ಮಹಾಮಳೆ, ಕರಾವಳಿಯಲ್ಲಿ ಆತಂಕ

ಆದರೆ ಅರಬ್ಬಿ ಸಮುದ್ರದಲ್ಲಿ ಉಂಟಾದ ಸೈಕ್ಲೋನ್ ಚಂಡಮಾರುತದಿಂದಲೇ ಮಂಗಳೂರಿನಲ್ಲಿ ಈ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ ಎಂದು ಕೆಲವು ಮೂಲಗಳು ತಿಳಿಸಿವೆ.

ಚಿತ್ರಗಳು : ಮಳೆಯ ರುದ್ರನರ್ತನಕ್ಕೆ ನಲುಗಿದ ದಕ್ಷಿಣ ಕನ್ನಡ, ಉಡುಪಿ

Mangaluru rains and Mekunu cyclone Live updates

ಕರಾವಳಿ ಜನರ ನಿದ್ದೆ ಕೆಡಿಸಿರುವ ಈ ಮಳೆಗೆ ಈಗಾಗಲೇ ಮೂವರು ಬಲಿಯಾಗಿದ್ದಾರೆ, ಸಾಕಷ್ಟು ಆಸ್ತಿಪಾಸ್ತಿ ಹಾನಿಯಾಗಿದೆ. ಇಂದೂ ಸಹ ಮಳೆ ಸುರಿಯುತ್ತಲೇ ಇದ್ದು, ಮಂಗಳೂರು ಮಹಾಮಳೆಯ ಕ್ಷಣ ಕ್ಷಣದ ಅಪ್ದೇಟ್ಸ್ ಇಲ್ಲಿದೆ.

Newest FirstOldest First
2:09 PM, 30 May

ಮಹಾಮಳೆಗೆ ನಿನ್ನೆ ಬಲಿಯಾದ ಮುಕ್ತಾಬಾಯಿ ಮತ್ತು ಮೋಹಿನಿ ಎಂಬುವವರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿಗಳ ಪರಿಹಾರವನ್ನು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ನೀಡಿದ್ದಾರೆ.
2:07 PM, 30 May

ನೆರೆಪೀಡಿತ ಪ್ರದೇಶಗಳಿಗೆ ಸಂಸದ ನಳೀನ್ ಕುಮಾರ್ ಕಟಿಲ್ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದಾರೆ. ಪರಿಸ್ಥಿತಿ ಅವಲೋಕಿಸಿ, ಪರಿಹಾರದ ಭರವಸೆ ನೀಡಿದ್ದಾರೆ.
2:02 PM, 30 May

ಮಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಆಗಿರುವ ಹಾನಿಯನ್ನು ಕಂಡು ನನಗೆ ಆಘಾತವಾಗಿದೆ. ನಗರ ಪ್ರದೇಶಗಳ್ಲಿ ಉಂಟಾಗಿರುವವ ಪ್ರವಾಹಗಳನ್ನು ಅತ್ಯಂತ ತುರ್ತಾಗಿ ನಿಭಾಯಿಸಬೇಕಿದೆ. ನರೇಂದ್ರ ಮೋದಿಯವರು ಹೇಳಿದಂತೆ, ನಾನು ಸಹ ಅಧಿಕಾರಿಗಳು ಸಾಧ್ಯವಿರುವ ಎಲ್ಲಾ ಪರಿಹಾರೋಪಾಯಗಳನ್ನೂ ಈ ಪ್ರದೇಶದಲ್ಲಿ ಕೈಗೊಳ್ಳಬೇಕೆಂದು ಕೋರುತ್ತೇನೆ- ಪಿ ಸಿ ಮೋಹನ್, ಬಿಜೆಪಿ ಸಂಸದ
2:00 PM, 30 May

ತಗ್ಗುಪ್ರದೇಶಗಳುಗೆ ನುಗ್ಗಿದ ನೀರಿನಿಂದಾಗಿ ಜುಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಲವು ಮನೆಗಳೂ ಜಲಾವೃತವಾಗಿದೆ.
1:26 PM, 30 May

ಚಿತ್ರ ನಿರ್ದೇಶಕ ಸಂತೋಷ್ ಶೆಟ್ಟಿ ಮೃತದೇಹ ಪತ್ತೆ
1:23 PM, 30 May

ಮಂಗಳೂರು ಮಹಾಮಳೆಗೆ ಚಿತ್ರ ನಿರ್ದೇಶಕರೊಬ್ಬರು ಬಲಿಯಾದ ಘಟನೆ ನಡೆದಿದೆ. ಫೋಟೋಶೂಟ್ ಸಮಯದಲ್ಲಿ ಎರ್ಮಾಯ್ ಫಾಲ್ಸ್ ಗೆ ಬಿದ್ದು ಸಂತೋಷ್ ಶೆಟ್ಟಿ ಎಂಬುವವರು ಸಾವನ್ನಪ್ಪಿದ್ದಾರೆ.
1:21 PM, 30 May

ಕನಸು ಚಿತ್ರದ ನಿರ್ದೇಶಕ ಸಂತೋಷ್ ಶೆಟ್ಟಿ ಅವರು ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಎರ್ಮಾಯಿ ಫಾಲ್ಸ್ ನಲ್ಲಿ ಬಿದ್ದು ಮೃತರಾಗಿದ್ದು, ಅವರ ಮೃತದೇಹದ ಶೋಧ ಕಾರ್ಯ ನಡೆಯುತ್ತಿದೆ.
Advertisement
1:10 PM, 30 May

ಮಳೆಗೆ ಸಿಲುಕಿ ಪರಿತಪಿಸುತ್ತಿರುವ ಯಾರೇ ಆದರೂ 1077 ಸಂಖ್ಯೆಯ ಸಹಾಯವಾಣಿಗೆ ಕರೆಮಾಡುವಂತೆ ಈಗಾಗಲೇ ಕೋರಲಾಗಿದೆ. ಹಲವು ಸಂಘಸಂಸ್ಥೆಗಳು ಸ್ವಇಚ್ಛೆಯಿಂದ ರಕ್ಷಣಾ ಕಾರ್ಯಕ್ಕೆ ಧಾವಿಸಿವೆ.
1:10 PM, 30 May

ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಮುನ್ನೆಚ್ಚರಿಕೆಯ ಸಲುವಾಗಿ ಶಾಲೆ-ಕಾಲೇಜುಗಳಿಗೆ ಎರಡು ದಿನಗಳ ಕಾಲ ರಜೆ ಘೋಷಿಸಲಾಗಿದೆ.

English summary
Mangaluru rains and Mekunu Cyclone. Rain creats havoc in Karnataka's coastal city Mangaluru. 3 people died so far. here are Live updates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X