LIVE: ಮಂಗಳೂರು ಮಹಾಮಳೆಗೆ ಚಿತ್ರ ನಿರ್ದೇಶಕ ಸಾವು
ಮಂಗಳೂರು, ಮೇ 30: ಕರಾವಳಿಯ ಸುಂದರ ನಗರಿ ಮಂಗಳೂರಿನಲ್ಲಿ ಕಳೆದ ಒಂದು ದಿನದಿಂದ ಎಡಬಿಡದೆ ಮಳೆ ಸುರಿಯುತ್ತಲೇ ಇದೆ.
ರಾಜ್ಯಕ್ಕೆ ಮುಂಗಾರು ಆಗಮಿಸುವ ಸೂಚನೆ ಸಿಕ್ಕುತ್ತಿದ್ದಂತೆಯೇ ಆರಂಭವಾದ ಈ ಮಳೆ, 'ಮುಂಗಾರು ಮಳೆಯಷ್ಟೇ, ಸೈಕ್ಲೋನ್ ಪರಿಣಾಮವಲ್ಲ' ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಹೇಳಿದ್ದಾರೆ.
ಮಂಗಳೂರನ್ನು ನಡುಗಿಸಿದ ಮಹಾಮಳೆ, ಕರಾವಳಿಯಲ್ಲಿ ಆತಂಕ
ಆದರೆ ಅರಬ್ಬಿ ಸಮುದ್ರದಲ್ಲಿ ಉಂಟಾದ ಸೈಕ್ಲೋನ್ ಚಂಡಮಾರುತದಿಂದಲೇ ಮಂಗಳೂರಿನಲ್ಲಿ ಈ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ ಎಂದು ಕೆಲವು ಮೂಲಗಳು ತಿಳಿಸಿವೆ.
ಚಿತ್ರಗಳು : ಮಳೆಯ ರುದ್ರನರ್ತನಕ್ಕೆ ನಲುಗಿದ ದಕ್ಷಿಣ ಕನ್ನಡ, ಉಡುಪಿ
ಕರಾವಳಿ ಜನರ ನಿದ್ದೆ ಕೆಡಿಸಿರುವ ಈ ಮಳೆಗೆ ಈಗಾಗಲೇ ಮೂವರು ಬಲಿಯಾಗಿದ್ದಾರೆ, ಸಾಕಷ್ಟು ಆಸ್ತಿಪಾಸ್ತಿ ಹಾನಿಯಾಗಿದೆ. ಇಂದೂ ಸಹ ಮಳೆ ಸುರಿಯುತ್ತಲೇ ಇದ್ದು, ಮಂಗಳೂರು ಮಹಾಮಳೆಯ ಕ್ಷಣ ಕ್ಷಣದ ಅಪ್ದೇಟ್ಸ್ ಇಲ್ಲಿದೆ.
Aftermath of heavy rain that had hit the low-lying areas in the coastal districts of Dakshina Kannada and Udupi. Visuals from #Mangalore pic.twitter.com/wfMlmXadH0
— ANI (@ANI) May 30, 2018