ಟ್ಯಾಂಕರ್ ಪಲ್ಟಿ : ಬೆಂಗಳೂರು-ಮಂಗಳೂರು ಹೆದ್ದಾರಿ ಬಂದ್
ಮಂಗಳೂರು, ಏಪ್ರಿಲ್ 02 : ಉಪ್ಪಿನಂಗಡಿ ಸಮೀಪದ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದೆ. ಟ್ಯಾಂಕರ್ನಿಂದ ಗ್ಯಾಸ್ ಸೋರಿಕೆಯಾಗುತ್ತಿದ್ದು, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ಶನಿವಾರ
ಬೆಳಗ್ಗೆ
ಉಪ್ಪಿನಂಗಡಿ
ಸಮೀಪದ
ಪೆರ್ನೆ
ಎಂಬಲ್ಲಿ
ಚಾಲಕ
ನಿಯಂತ್ರಣ
ತಪ್ಪಿದ
ಟ್ಯಾಂಕರ್
ಪಲ್ಟಿಯಾಗಿದೆ.
ಟ್ಯಾಂಕರ್ನಿಂದ
ಗ್ಯಾಸ್
ಸೋರಿಕೆಯಾಗುತ್ತಿದೆ.
ಎಂಆರ್ಪಿಎಲ್
ಮತ್ತು
ಅಗ್ನಿ
ಶಾಮಕ
ದಳದವರು
ಸ್ಥಳಕ್ಕೆ
ಆಗಮಿಸಿದ್ದಾರೆ.
[ಏ.4ರಿಂದ
ಶಿರಾಡಿ
ಘಾಟ್
ರಸ್ತೆ
ಕಾಮಗಾರಿ
ಮತ್ತೆ
ಆರಂಭ]
ಟ್ಯಾಂಕರ್ ಪಲ್ಟಿಯಾದ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರವನ್ನು ಬಂದ್ ಮಾಡಲಾಗಿದೆ. ವಾಹನಗಳು ಪರ್ಯಾಯ ಮಾರ್ಗವಾದ ಶಾಂತಿನಗರ-ಕರ್ವೇಲು, ದೋರ್ಮೆ-ಮಠಂತಬೆಟ್ಟು- ವಿನಾಯಕನಗರ, ಪೆರ್ನೆ-ಸೇಡಿಯಾಪು ರಸ್ತೆಯಲ್ಲಿ ಸಂಚಾರ ನಡೆಸುತ್ತಿವೆ. [ಅಡುಗೆ ಅನಿಲ ಸಿಲಿಂಡರ್ ದರ ಇಳಿಕೆ, ಜೆಟ್ ಇಂಧನ ಏರಿಕೆ]
ಹೊನ್ನಾವರದಲ್ಲಿ ಟ್ಯಾಂಕರ್ ಪಲ್ಟಿ : ಶನಿವಾರ ಬೆಳಗ್ಗೆ ಹೊನ್ನಾವರ ಪಟ್ಟಣದಲ್ಲಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಲಾರಿಗೆ ಡಿಕ್ಕಿ ಹೊಡೆದು ಗ್ಯಾಸ್ ಟ್ಯಾಂಕರ್ ಪಲ್ಟಿ ಹೊಡೆದಿದೆ. ಈ ಅಪಘಾತದಲ್ಲಿ ಟ್ಯಾಂಕರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಟ್ಯಾಂಕರ್ನಿಂದ ಗ್ಯಾಸ್ ಸೋರಿಕೆಯಾಗುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಟ್ಯಾಂಕರ್ ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ.