ದಕ್ಷಿಣ ಭಾರತದ ರಾಜ್ಯಗಳಿಗೆ ಎಲ್ಪಿಜಿ ಪೂರೈಕೆ ಸ್ಥಗಿತ?
ಮಂಗಳೂರು, ಜನವರಿ 02 : ಗ್ಯಾಸ್ ಟ್ಯಾಂಕರ್ ಚಾಲಕರ ಮುಷ್ಕರದಿಂದಾಗಿ ದಕ್ಷಿಣ ಭಾರತದ ರಾಜ್ಯಗಳಿಗೆ ಅಡುಗೆ ಅನಿಲ ಪೂರೈಕೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಎಂಆರ್ಪಿಎಲ್, ಹೆಚ್ಪಿಸಿಎಲ್ ಅಡುಗೆ ಅನಿಲ ಸಾಗಾಟದ ಟ್ಯಾಂಕರ್ ಚಾಲಕರ ಮುಷ್ಕರ 4ನೇ ದಿನಕ್ಕೆ ಕಾಲಿಟ್ಟಿದೆ.
ಆಂಧ್ರಪ್ರದೇಶದ
ಹೆದ್ದಾರಿಯಲ್ಲಿ
ಕರ್ತವ್ಯ
ನಿರತರಾಗಿರುವಾಗಲೇ
ದುಷ್ಕರ್ಮಿಗಳಿಂದ
ಕೊಲೆಯಾದ
ಶರವಣ್
ಹತ್ಯೆಯ
ಆರೋಪಿಗಳನ್ನು
ಬಂಧಿಸಬೇಕು,
ಟ್ಯಾಂಕರ್
ಚಾಲಕರಿಗೆ
ಭದ್ರತೆ
ಒದಗಿಸಬೇಕೆಂದು
ಒತ್ತಾಯಿಸಿ
ಚಾಲಕರು
ಪ್ರತಿಭಟನೆ
ನಡೆಸುತ್ತಿದ್ದಾರೆ.
[ಸಬ್ಸಿಡಿ
ರಹಿತ
ಸಿಲಿಂಡರ್
ಬೆಲೆ
50
ರೂ.
ಹೆಚ್ಚಳ]
ಈಗಾಗಲೇ ಚಾಲಕರ ಮುಷ್ಕರ 4ನೇ ದಿನಕ್ಕೆ ಕಾಲಿಟ್ಟಿದ್ದು, ಮುಷ್ಕರ ಇನ್ನೂ ಒಂದೆರಡು ದಿನ ಮುಂದುವರೆದರೆ ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಅಡುಗೆ ಅನಿಲ ಪೂರೈಕೆ ಸ್ಥಗಿತಗೊಳ್ಳಲಿದೆ. [10 ಲಕ್ಷ ರು ವಾರ್ಷಿಕ ಆದಾಯವಿದ್ದರೆ, ಎಲ್ ಪಿಜಿ ಸಬ್ಸಿಡಿ ಖೋತಾ]
ಮಂಗಳೂರಿನ ಎಂಆರ್ಪಿಎಲ್ ಬಳಿ ಚಾಲಕರು 4 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸುಮಾರು ನಾಲ್ಕು ಸಾವಿರ ಟ್ಯಾಂಕರ್ಗಳು ಎಂಆರ್ಪಿಎಲ್ ಉತ್ಪಾದಿಸುವ ಅನಿಲವನ್ನು ದಕ್ಷಿಣ ಭಾರತದ ಮೂಲೆ ಮೂಲೆಗೆ ಸಾಗಿಸುತ್ತದೆ. ಆದರೆ, ಮುಷ್ಕರದಿಂದಾಗಿ ಟ್ಯಾಂಕರ್ಗಳ ಸಂಚಾರ ಬಂದ್ ಆಗಿದೆ. [ಜನರ ಮೂಗಿಗೆ ತುಪ್ಪ ಸವರಿದ ತೈಲ ಕಂಪನಿಗಳು]
ಶರವಣನ್ ಯಾರು? : ಮಂಗಳೂರಿನ ಎಂಆರ್ಪಿಎಲ್ ಘಟಕದಿಂದ ಆಂಧ್ರಪ್ರದೇಶಕ್ಕೆ ಗ್ಯಾಸ್ ಸಾಗಿಸುತ್ತಿದ್ದ ಟ್ಯಾಂಕರ್ ಚಾಲಕ ತಮಿಳುನಾಡು ಮೂಲದ ಶರವಣನ್ ಅವರ ಮೇಲೆ ಡಿ. 12ರಂದು ಆಂಧ್ರದ ಚೆರ್ಲಪಲ್ಲಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಅಪರಿಚಿತರು ಹಲ್ಲೆ ನಡೆಸಿದ್ದರು.
ಹಲ್ಲೆಯಿಂದ ಗಾಯಗೊಂಡಿದ್ದ ಶರವಣನ್ ಚಿಕಿತ್ಸೆ ಫಲಕಾರಿಯಾಗದೆ ಡಿ. 28ರಂದು ಮೃತಪಟ್ಟಿದ್ದರು. ಶರವಣನ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಬೇಕು, ಗ್ಯಾಸ್ ಟ್ಯಾಂಕರ್ ಚಾಲಕರಿಗೆ ಸೂಕ್ತ ಭದ್ರತೆ ಒದಗಿಸಬೇಕು, ಶರವಣನ್ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿ ಟ್ಯಾಂಕರ್ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ.