ಸೆಪ್ಟೆಂಬರ್ 23 ರಂದು ಕೊಂಕಣ ರೈಲ್ವೆ ಸಂಚಾರದಲ್ಲಿ ವ್ಯತ್ಯಯ
ಮಂಗಳೂರು, ಸೆಪ್ಟೆಂಬರ್. 21: ಕರಾವಳಿಯ ರೈಲು ಪ್ರಯಾಣಿಕರಿಗೆ ಸೆಪ್ಟೆಂಬರ್ 23 ರಂದು ಭಾನುವಾರ ಸಮಸ್ಯೆ ಎದುರಾಗಲಿದೆ. ಯಾಕೆಂದರೆ ಅಂದು ಕೊಂಕಣ ರೈಲ್ವೆ ಮಾರ್ಗದಲ್ಲಿ ಕಾರವಾರ ಹಾಗೂ ತೋಕೂರು ನಡುವೆ ಕೆಲ ಇಂಜಿನಿಯರಿಂಗ್ ಹಾಗೂ ವಿದ್ಯುದ್ದೀಕರಣದ ಕಾಮಗಾರಿಗಳು ನಡೆಯಲಿವೆ.
ಈ ಹಿನ್ನೆಲೆಯಲ್ಲಿ ಅಂದು ಈ ಮಾರ್ಗದಲ್ಲಿ ಸಂಚರಿಸುವ ಒಂದು ರೈಲಿನ ಸಂಚಾರವನ್ನು ರದ್ದುಗೊಳಿಸಲಾಗಿದ್ದು ಇನ್ನಿತರ ಪ್ರಮುಖ ರೈಲುಗಳ ಸಂಚಾರ ಸಮಯದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ.
ಸೆ.20ರ ತನಕ ಬೆಂಗಳೂರು-ಮಂಗಳೂರು ರೈಲು ಸಂಚಾರವಿಲ್ಲ
ಕರಾವಳಿಯ ಪ್ರಯಾಣಿಕರು ಸಹಕರಿಸುವಂತೆ ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ಮಂಗಳೂರು ಸೆಂಟ್ರಲ್-ಮಡಗಾಂವ್- ಮಂಗಳೂರು ಸೆಂಟ್ರಲ್ ನಡುವೆ ಸಂಚರಿಸುವ ರೈಲು ನಂ.22636-22635 ಇಂಟರ್ ಸಿಟಿ ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು ಸೆ.23ರಂದು ರದ್ದುಪಡಿಸಲಾಗಿದೆ.
ರೈಲು ನಂ. 12620 ಮಂಗಳೂರು ಸೆಂಟ್ರಲ್-ಕುರ್ಲಾ ಟರ್ಮಿನಸ್ ಮತ್ಸಗಂಧ ಎಕ್ಸ್ಪ್ರೆಸ್ ರೈಲು ಮಂಗಳೂರು ಸೆಂಟ್ರಲ್ನಿಂದ 2ಗಂಟೆ 45 ನಿಮಿಷ ತಡವಾಗಿ ಅಂದರೆ ಅಪರಾಹ್ನ 3:15ಕ್ಕೆ ಹೊರಡಲಿದೆ. ಅದಲ್ಲದೇ ರೈಲು ನಂ.56641 ಮಡಗಾಂವ್- ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲು ಅಂಕೋಲ ರೈಲ್ವೆ ನಿಲ್ದಾಣದಲ್ಲಿ 1 ಗಂಟೆ ನಿಲ್ಲಲಿದೆ.
ರೈಲು ನಂ. 12617 ಎರ್ನಾಕುಲಂ-ನಿಜಾಮುದ್ದೀನ್ 'ಮಂಗಳಾ ಲಕ್ಷದ್ವೀಪ' ಎಕ್ಸ್ಪ್ರೆಸ್ ತೊಕೂರಿನಲ್ಲಿ 20 ನಿಮಿಷ ನಿಲ್ಲಲಿದೆ. ರೈಲು ನಂ.22634 ನಿಜಾಮುದ್ದೀನ್- ತ್ರಿವೆಂಡ್ರಂ ಎಕ್ಸ್ಪ್ರೆಸ್ ಕುಂದಾಪುರ ರೈಲು ನಿಲ್ದಾಣದಲ್ಲಿ 45 ನಿಮಿಷ ನಿಲ್ಲಲಿದೆ.
21 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ನೈಋತ್ಯ ರೈಲ್ವೆ
ರೈಲು ನಂ.02198 ಜಬಲ್ ಪುರ-ಕೊಯಮತ್ತೂರು ವಿಶೇಷ ರೈಲು ಅಂಕೋಲ ರೈಲು ನಿಲ್ದಾಣದಲ್ಲಿ 1 ಗಂಟೆ 10 ನಿಮಿಷ ನಿಲ್ಲಲಿದೆ ಎಂದು ಕೊಂಕಣ್ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.