ದಕ್ಷಿಣ ಕನ್ನಡ : ವೋಟು ಹಾಕುವವರಿಗಾಗಿ ಉಚಿತ ಸರ್ಕಾರಿ ಬಸ್ ಸೇವೆ
ಮಂಗಳೂರು, ಮೇ 10 : ಮತದಾನದ ದಿನ ಜನರಿಗೆ ಅನುಕೂಲವಾಗಲು ಕೆಎಸ್ಆರ್ಟಿಸಿ ದಕ್ಷಿಣ ಕನ್ನಡದಲ್ಲಿ ಹೆಚ್ಚುವರಿ ಬಸ್ಗಳನ್ನು ಓಡಿಸಲಿದೆ. ಸುಳ್ಯ, ಬೆಳ್ತಂಗಡಿ ಮತ್ತು ಪುತ್ತೂರು ತಾಲೂಕುಗಳಲ್ಲಿ ಬಸ್ಸುಗಳು ಸಂಚಾರ ನಡೆಸಲಿವೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂಥ್ ಸೆಂಥಿಲ್ ಈ ಕುರಿತು ಮಾಹಿತಿ ನೀಡಿದ್ದಾರೆ. 160 ಕೆಎಸ್ಆರ್ಟಿಸಿಯ ಬಸ್ಸುಗಳು ಬಸ್ಸುಗಳ ಸಂಚಾರ ಕಡಿಮೆ ಇರುವ ಪ್ರದೇಶದಲ್ಲಿ ಸಂಚಾರ ನಡೆಸಲಿವೆ. ಮತದಾನ ಮಾಡಲು ಆಗಮಿಸುವ ಜನರು ಉಚಿತವಾಗಿ ಇವುಗಳಲ್ಲಿ ಪ್ರಯಾಣಿಸಬಹುದಾಗಿದೆ.
ಕೆಂಪು ಬಸ್ ಚುನಾವಣಾ ಕೆಲಸಕ್ಕೆ: ಪ್ರಯಾಣಿಕರಿಗೆ ತೊಂದರೆ ಸಾಧ್ಯತೆ
'ಎಲೆಕ್ಷನ್ ಸ್ಪೆಷಲ್' ಎಂಬ ಹೆಸರಿನ ನಾಮಫಲಕವನ್ನು ಈ ಬಸ್ಸುಗಳು ಹೊಂದಿರುತ್ತವೆ. ಮೇ 12ರ ಮತದಾನದ ದಿನ ಬೆಳಗ್ಗೆಯಿಂದ ಸಂಜೆ ತನಕ ಈ ಬಸ್ಸುಗಳು ಮೂರು ಟ್ರಿಪ್ಗಳಲ್ಲಿ ಸಂಚಾರವನ್ನು ನಡೆಸಲಿವೆ.
ದಕ್ಷಿಣದಲ್ಲಿ ಕನ್ನಡದಲ್ಲಿ 517 ಬೂತ್ಗಳಯ ಅತಿ ಸೂಕ್ಷ್ಮವಾಗಿವೆ. ಇವುಗಳಲ್ಲಿ 97ರಲ್ಲಿ ವೆಬ್ ಕ್ಯಾಮರಾಗಳನ್ನು ಆಳವಡಿಸಲಾಗಿದೆ. 221 ಬೂತ್ಗಳಿಗೆ ವೀಕ್ಷಕರನ್ನು ನೇಮಕ ಮಾಡಲಾಗಿದೆ.
ವೋಟರ್ ಸ್ಲಿಪ್ : ಜಿಲ್ಲಾಡಳಿತ ಮತದಾನ ಕೇಂದ್ರದ ಹೊರಗೆ ವೋಟರ್ ಸ್ಲಿಪ್ಗಳನ್ನು ನೀಡುವ ವ್ಯವಸ್ಥೆ ಮಾಡಿದೆ. ಅಗತ್ಯವಿರುವವರು ವೋಟರ್ ಸ್ಲಿಪ್ ಪಡೆಯಬಹುದಾಗಿದೆ. ಆದರೆ, ಮತದಾನ ಮಾಡಲು ವೋಟರ್ ಸ್ಲಿಪ್ ಕಡ್ಡಾಯವಲ್ಲ. ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ ಅವರು ವೋಟರ್ ಐಡಿ ತೋರಿಸಿ ಮತದಾನ ಮಾಡಬಹುದಾಗಿದೆ.