ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡ : ವೋಟು ಹಾಕುವವರಿಗಾಗಿ ಉಚಿತ ಸರ್ಕಾರಿ ಬಸ್ ಸೇವೆ

|
Google Oneindia Kannada News

ಮಂಗಳೂರು, ಮೇ 10 : ಮತದಾನದ ದಿನ ಜನರಿಗೆ ಅನುಕೂಲವಾಗಲು ಕೆಎಸ್ಆರ್‌ಟಿಸಿ ದಕ್ಷಿಣ ಕನ್ನಡದಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸಲಿದೆ. ಸುಳ್ಯ, ಬೆಳ್ತಂಗಡಿ ಮತ್ತು ಪುತ್ತೂರು ತಾಲೂಕುಗಳಲ್ಲಿ ಬಸ್ಸುಗಳು ಸಂಚಾರ ನಡೆಸಲಿವೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂಥ್ ಸೆಂಥಿಲ್ ಈ ಕುರಿತು ಮಾಹಿತಿ ನೀಡಿದ್ದಾರೆ. 160 ಕೆಎಸ್ಆರ್‌ಟಿಸಿಯ ಬಸ್ಸುಗಳು ಬಸ್ಸುಗಳ ಸಂಚಾರ ಕಡಿಮೆ ಇರುವ ಪ್ರದೇಶದಲ್ಲಿ ಸಂಚಾರ ನಡೆಸಲಿವೆ. ಮತದಾನ ಮಾಡಲು ಆಗಮಿಸುವ ಜನರು ಉಚಿತವಾಗಿ ಇವುಗಳಲ್ಲಿ ಪ್ರಯಾಣಿಸಬಹುದಾಗಿದೆ.

ಕೆಂಪು ಬಸ್ ಚುನಾವಣಾ ಕೆಲಸಕ್ಕೆ: ಪ್ರಯಾಣಿಕರಿಗೆ ತೊಂದರೆ ಸಾಧ್ಯತೆಕೆಂಪು ಬಸ್ ಚುನಾವಣಾ ಕೆಲಸಕ್ಕೆ: ಪ್ರಯಾಣಿಕರಿಗೆ ತೊಂದರೆ ಸಾಧ್ಯತೆ

'ಎಲೆಕ್ಷನ್ ಸ್ಪೆಷಲ್' ಎಂಬ ಹೆಸರಿನ ನಾಮಫಲಕವನ್ನು ಈ ಬಸ್ಸುಗಳು ಹೊಂದಿರುತ್ತವೆ. ಮೇ 12ರ ಮತದಾನದ ದಿನ ಬೆಳಗ್ಗೆಯಿಂದ ಸಂಜೆ ತನಕ ಈ ಬಸ್ಸುಗಳು ಮೂರು ಟ್ರಿಪ್‌ಗಳಲ್ಲಿ ಸಂಚಾರವನ್ನು ನಡೆಸಲಿವೆ.

 Karnataka elections : KSRTC to operate 160 additional buses for rural voters

ದಕ್ಷಿಣದಲ್ಲಿ ಕನ್ನಡದಲ್ಲಿ 517 ಬೂತ್‌ಗಳಯ ಅತಿ ಸೂಕ್ಷ್ಮವಾಗಿವೆ. ಇವುಗಳಲ್ಲಿ 97ರಲ್ಲಿ ವೆಬ್ ಕ್ಯಾಮರಾಗಳನ್ನು ಆಳವಡಿಸಲಾಗಿದೆ. 221 ಬೂತ್‌ಗಳಿಗೆ ವೀಕ್ಷಕರನ್ನು ನೇಮಕ ಮಾಡಲಾಗಿದೆ.

ವೋಟರ್ ಸ್ಲಿಪ್ : ಜಿಲ್ಲಾಡಳಿತ ಮತದಾನ ಕೇಂದ್ರದ ಹೊರಗೆ ವೋಟರ್ ಸ್ಲಿಪ್‌ಗಳನ್ನು ನೀಡುವ ವ್ಯವಸ್ಥೆ ಮಾಡಿದೆ. ಅಗತ್ಯವಿರುವವರು ವೋಟರ್ ಸ್ಲಿಪ್ ಪಡೆಯಬಹುದಾಗಿದೆ. ಆದರೆ, ಮತದಾನ ಮಾಡಲು ವೋಟರ್ ಸ್ಲಿಪ್ ಕಡ್ಡಾಯವಲ್ಲ. ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ ಅವರು ವೋಟರ್ ಐಡಿ ತೋರಿಸಿ ಮತದಾನ ಮಾಡಬಹುದಾಗಿದೆ.

English summary
Dakshina Kannada Deputy Commissioner Sasikanth Senthil said that, KSRTC will ply additional buses in Sullia, Belthangady and Puttur taluks on Saturday to enable people to travel for free to cast their vote.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X