ಧರ್ಮಸ್ಥಳದ ಮಂಜುನಾಥನಿಗೆ ನಮೋ ನಮಃ ಎಂದ ರೆಡ್ಡಿ
ಮಂಗಳೂರು, ಜೂ. 19 : ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಗುರುವಾರ ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದರು.
ಗುರುವಾರ
ಬೆಳಗ್ಗೆ
ಬೆಂಗಳೂರಿನಿಂದ
ವಿಮಾನ
ಮೂಲಕ
ಮಂಗಳೂರಿಗೆ
ಆಗಮಿಸಿದ
ಜನಾರ್ದನ
ರೆಡ್ಡಿ
ಅವರು,
ಅಲ್ಲಿಂದ
ಧರ್ಮಸ್ಥಳಕ್ಕೆ
ಬಂದು
ವಿಶೇಷ
ಪೂಜೆ
ಸಲ್ಲಿಸಿದರು.
ಮುಂದಿನ
ರಾಜಕೀಯ
ನಡೆ
ಬಗ್ಗೆ
ತೀರ್ಮಾನ
ಕೈಗೊಳ್ಳಲು
ಆಗಮಿಸಿದ್ದರು
ಎಂದು
ರೆಡ್ಡಿ
ಅವರ
ಆಪ್ತ
ಮೂಲಗಳು
ತಿಳಿಸಿವೆ.
[ತಿರುಪತಿಗೆ
ಭೇಟಿ
ನೀಡಿದ
ರೆಡ್ಡಿ]
ಜನಾರ್ದನ ರೆಡ್ಡಿ ಅವರ ಜೊತೆಗೆ ಪತ್ನಿ ಅರುಣ ಲಕ್ಷ್ಮಿ, ಪುತ್ರ ಕಿರೀಟಿ, ಪುತ್ರಿ ಭ್ರಮಿಣಿ, ಆಪ್ತರಾದ ಸಂಜಯ ಬೆಟಗೇರಿ ಮತ್ತು ತಾರನಾಥ ಕಾಪಿಕಾಡ್ ಧರ್ಮಸ್ಥಳಕ್ಕೆ ಆಗಮಿಸಿದ್ದರು. ದೇವರ ದರ್ಶನ ಪಡೆದ ಬಳಿಕ ರೆಡ್ಡಿ ಅವರು, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದರು. [ಜೈಲಿನಿಂದ ಹೊರ ಬಂದ ಗಾಲಿ ರೆಡ್ಡಿ ಬೆಂಜ್ ನಲ್ಲಿ ಹೊರಟ್ರು]
ಶ್ರೀರಾಮುಲು ಬಂದಿದ್ದರು : ಕಳೆದ ಕೆಲವು ದಿನಗಳ ಹಿಂದೆ ಜನಾರ್ದನ ರೆಡ್ಡಿ ಅವರ ಆಪ್ತ ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. 15 ದಿನಗಳಿಂದ ಹಲವಾರು ರಾಜಕೀಯ ನಾಯಕರು ರೆಡ್ಡಿ ಅವರನ್ನು ಭೇಟಿ ಮಾಡುತ್ತಿದ್ದಾರೆ.
ಆದ್ದರಿಂದ ಮುಂದಿನ ರಾಜಕೀಯ ನಿರ್ಧಾರವನ್ನು ತೆಗೆದುಕೊಳ್ಳಲು ಜನಾರ್ದನ ರೆಡ್ಡಿ ಅವರು ಆಗಮಿಸಿದ್ದರು ಎಂದು ತಿಳಿದುಬಂದಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ಜನಾರ್ದನ ರೆಡ್ಡಿ ಅವರು ಸುಮಾರು ಮೂರುವರೆ ವರ್ಷಗಳ ನಂತರ 2015ರ ಜನವರಿಯಲ್ಲಿ ಬಿಡುಗಡೆಗೊಂಡಿದ್ದರು.
ಅಂದಹಾಗೆ 2015ರ ಏಪ್ರಿಲ್ನಲ್ಲಿ ಜನಾರ್ದನ ರೆಡ್ಡಿ ಅವರು, ಶ್ರೀರಾಮುಲು, ಕಂಪ್ಲಿ ಶಾಸಕ ಸುರೇಶ್ ಬಾಬು ಮುಂತಾದವರೊಂದಿಗೆ ಶಬರಿಮಲೆ ಯಾತ್ರೆ ಕೈಗೊಂಡಿದ್ದರು.