ಕರಾವಳಿಯಲ್ಲಿ ಜೂ. 7, 8 ರಂದು ಬಿರುಗಾಳಿ, ಗುಡುಗು ಸಹಿತ ಭಾರೀ ಮಳೆ
ಮಂಗಳೂರು, ಜೂನ್ 6: ಕರಾವಳಿಯಲ್ಲಿ ಮತ್ತೆ ಮಹಾಮಳೆಯ ಅತಂಕ ಅರಂಭವಾಗಿದೆ. ಕರಾವಳಿಯಲ್ಲಿ ಜೂನ್ 7 ಮತ್ತು 8 ರಂದು ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದ್ದು ಹೈ ಅಲರ್ಟ್ ಘೋಷಿಸಿದೆ.
ಹವಾಮಾನ
ಇಲಾಖೆಯ
ಎಚ್ಚರಿಕೆಯ
ಪ್ರಕಾರ
ಮುಂದಿನ
5
ದಿನಗಳ
ಕಾಲ
ಕರ್ನಾಟಕದ
ಕರಾವಳಿ
ಪ್ರದೇಶ,
ಕೇರಳ,
ಗೋವಾ
,
ಮಹಾರಾಷ್ಟ್ರ
ಕರಾವಳಿ
ಭಾಗದಲ್ಲಿ
ಭಾರೀ
ಮಳೆಯಾಗುವ
ಮುನ್ಸೂಚನೆ
ನೀಡಿದೆ.
ಈ
ಸಂಬಂಧ
ವಿಶೇಷವಾಗಿ
ಕೇಂದ್ರ
ಹವಾಮಾನ
ಇಲಾಖೆ
ಕರ್ನಾಟಕದ
ಮುಖ್ಯ
ಕಾರ್ಯದರ್ಶಿ
ಅವರಿಗೆ
ಪತ್ರ
ಬರೆದು,
ಕರ್ನಾಟಕದ
ಕರಾವಳಿಯಲ್ಲಿ
ಎಚ್ಚರ
ವಹಿಸುವಂತೆ
ತಿಳಿಸಿದೆ.
ಹವಾಮಾನ ಇಲಾಖೆಯ ಸೂಚನೆಯಂತೆ, ಜೂನ್ 8 ರಂದು ದಕ್ಷಿಣ ಕನ್ನಡ , ಉಡುಪಿ ಹಾಗು ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದ್ದು, 60 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಒಂದು ಅಂದಾಜಿನ ಪ್ರಕಾರ ಜೂನ್ 8 ರಂದು ಈ ಮೂರು ಜಿಲ್ಲೆಗಳಲ್ಲಿ 65 ಮಿ.ಮೀ ನಿಂದ 115 ಮಿ.ಮೀ ವರೆಗೆ ಭಾರೀ ಮಳೆ ಸುರಿಯಲಿದೆ. ಸಮುದ್ರದ ಮಟ್ಟದಲ್ಲಿ ಏರಿಕೆ ಯಾಗುವ ಆತಂಕವಿರುವ ಹಿನ್ನೆಲೆಯಲ್ಲಿ ಮೀನುಗಾರರು ಕಡಲಿಗೆ ಇಳಿಯದಂತೆ ಆದೇಶ ಹೊರಡಿಸಲಾಗಿದೆ.
ಕರಾವಳಿಗೆ ಈಗಾಗಲೇ ಮುಂಗಾರು ಮಾರುತಗಳ ಪ್ರವೇಶವಾಗಿದೆ ಈ ಹಿನ್ನೆಲೆಯಲ್ಲಿ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಜೂನ್ 6 ರ ಬಳಕೆ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ ಈಗ ಹವಾಮಾನ ಇಲಾಖೆ ಜೂನ್ 7 ಮತ್ತು 8 ರಂದು ಮಹಾಮಳೆ ಸುರಿಯುವ ಎಚ್ಚರಿಕೆ ನೀಡಿದೆ.