ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಶಬರಿಮಲೆ ವಿಷಯದಲ್ಲಿ ಮಹಿಳಾ ಸಮಾನತೆ ವಿಚಾರ ಬರುವುದಿಲ್ಲ'

|
Google Oneindia Kannada News

ಮಂಗಳೂರು, ಜನವರಿ 09: ಶಬರಿಮಲೆ ವಿಚಾರದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸುವುದು ಸರಿಯಲ್ಲ. ಧಾರ್ಮಿಕ ವಿಚಾರದಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ಮಾರಕ ಎಂದು ಕಾಂಗ್ರೆಸ್ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಶಬರಿಮಲೆ ಪ್ರವೇಶ ವಿರೋಧಿಸಿ ಮಸೀದಿ ಪ್ರವೇಶಕ್ಕೆ ಯತ್ನ:6 ಮಹಿಳೆಯರ ಬಂಧನಶಬರಿಮಲೆ ಪ್ರವೇಶ ವಿರೋಧಿಸಿ ಮಸೀದಿ ಪ್ರವೇಶಕ್ಕೆ ಯತ್ನ:6 ಮಹಿಳೆಯರ ಬಂಧನ

ಪುತ್ತೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂಡಿದೆ ಮಾತನಾಡಿದ ಅವರು, ಕೇರಳದ ಶಬರಿಮಲೆಯಲ್ಲಿ ಅದರದೇ ಆದ ಸಂಪ್ರದಾಯ , ಕಟ್ಟುಪಾಡುಗಳಿವೆ . ಅದರಲ್ಲಿ ಮಹಿಳಾ ಸಮಾನತೆಯ ವಿಚಾರವೇ ಬರುವುದಿಲ್ಲ ಎಂದು ತಿಳಿಸಿದ್ದಾರೆ.

ಶಬರಿಮಲೆ ಪ್ರತಿಭಟನೆ: 39,979 ಜನರ ಮೇಲೆ ಕೇಸು, 3917 ಮಂದಿ ಬಂಧನಶಬರಿಮಲೆ ಪ್ರತಿಭಟನೆ: 39,979 ಜನರ ಮೇಲೆ ಕೇಸು, 3917 ಮಂದಿ ಬಂಧನ

ಶಬರಿಮಲೆಗೆ ಅದರದೇ ಆದ ವಿಶೇಷತೆಯಿದ್ದು, ಕೋಟ್ಯಾಂತರ ಜನರ ನಂಬಿಕೆ ಇದೆ. ಹಿಂದಿನಿಂದಲೂ ಕ್ಷೇತ್ರಕ್ಕೆ ನಿರ್ದಿಷ್ಟ ವಯೋಮಾನದ ಮಹಿಳೆಯರಿಗೆ ನಿಷೇಧವಿದೆ. ಶಬರಿಮಲೆ ಕ್ಷೇತ್ರಕ್ಕೆ 48 ಕಿಲೋ ಮೀಟರ್ ನಡೆದು ಹೋಗಬೇಕಾದ ಪರಿಸ್ಥಿತಿಯಿದ್ದು, ಅತ್ಯಂತ ಕ್ಲಿಷ್ಟಕರವಾದ ಹಾದಿಯಲ್ಲಿ ಮಹಿಳೆಯರಿಗೆ ತೊಂದರೆಯಾಗಬಹುದು ಎನ್ನುವ ಕಾರಣಕ್ಕಾಗಿಯೂ ಈ ರೀತಿಯ ನಿಷೇಧವಿರುವ ಸಾಧ್ಯತೆಯಿದೆ.

Former MLA Shakunthala Shetty reacted on Sabarimala issue

ಅಲ್ಲದೆ ದೇಹ ಸಂಬಂಧಿ ಸಮಸ್ಯೆಯಿಂದಲೂ ಮಹಿಳೆಯರಿಗೆ ಶಬರಿಮಲೆಗೆ ನಿಷೇಧವಿದೆ. ಕ್ಷೇತ್ರದಲ್ಲಿ ಯಾವುದಕ್ಕೆ ಅವಕಾಶ ನೀಡಬೇಕು , ನೀಡಬಾರದು ಎನ್ನುವ ವಿಚಾರ ದೇವಸ್ಥಾನದ ಅರ್ಚಕರು ಹಾಗೂ ಅದಕ್ಕೆ ಸಂಬಂಧಪಟ್ಟವರ ವಿವೇಚನೆಗೆ ಬೀಡಬೇಕಾಗಿದೆ ಎಂದು ಶಕುಂತಲಾ ಶೆಟ್ಟಿ ತಮ್ಮ ಅನಿಸಿಕೆ ಹೊರಹಾಕಿದ್ದಾರೆ.

English summary
Puttur Former MLA Shakunthala Shetty reacted on Sabarimala issue. She said that court should not interfere in Sabarimala issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X