ಮೂಡಬಿದಿರೆ : ಪ್ರಶಾಂತ್ ಕೊಲೆಯ ಪ್ರತ್ಯಕ್ಷದರ್ಶಿ ಸಾವು
ಮೂಡಬಿದಿರೆ, ಅಕ್ಟೋಬರ್ 16 : ಮೂಡಬಿದಿರೆಯ ಭಜರಂಗದಳದ ಕಾರ್ಯಕರ್ತ ಪ್ರಶಾಂತ್ ಹ್ಯತ್ಯೆಯ ಪ್ರತ್ಯಕ್ಷ ಸಾಕ್ಷಿ ಸಾವನ್ನಪ್ಪಿದ್ದಾರೆ. ಗುರುವಾರ ಸಂಜೆ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಭಜರಂಗದಳದಲ್ಲಿ
ಗುರುತಿಸಿಕೊಂಡಿದ್ದ
ಹೂವಿನ
ವ್ಯಾಪಾರಿ
ಪ್ರಶಾಂತ್ನನ್ನು
ಅಕ್ಟೋಬರ್
9ರ
ಶುಕ್ರವಾರ
ಮುಂಜಾನೆ
ದುಷ್ಕರ್ಮಿಗಳು
ಅವರ
ಅಂಗಡಿ
ಸಮೀಪ
ಕೊಲೆ
ಮಾಡಿದ್ದರು.
ಈ
ಕೊಲೆಯನ್ನು
ಪ್ರತ್ಯಕ್ಷವಾಗಿ
ನೋಡಿದ್ದ
ವಾಮನ
ಪೂಜಾರಿ
ಗುರುವಾರ
ಮೃತಪಟ್ಟಿದ್ದಾರೆ.
[ಮೂಡಬಿದಿರೆಯಲ್ಲಿ
ಹಿಂದೂ
ಮುಖಂಡನ
ಕೊಲೆ]
ವಾಮನ ಪೂಜಾರಿ (60) ಪ್ರಶಾಂತ್ ಅವರ ಹೂವಿನ ಅಂಗಡಿ ಸಮೀಪ ಎಳನೀರು ಮಾರಾಟ ಮಾಡುತ್ತಿದ್ದರು. ಬುಧವಾರ ವ್ಯಾಪಾರ ಮುಗಿಸಿ ತೆರಳಿದ್ದ ಅವರು, ಗುರುವಾರ ಬೆಳಗ್ಗೆ ಮನೆಯಿಂದ ನಾಪತ್ತೆಯಾಗಿದ್ದರು. ಸಂಜೆ ಅವರ ಮೃತದೇಹ ಪತ್ತೆಯಾಗಿದೆ. [ಪ್ರಶಾಂತ್ ಹತ್ಯೆ ಭಜರಂಗದಳ ಖಂಡನೆ]
ನೇಣು ಬಿಗಿದ ಸ್ಥಿತಿಯಲ್ಲಿ ವಾಮನ ಪೂಜಾರಿ ಮೃತದೇಹ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮೂಡಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಶಾಂತ್ ಹತ್ಯೆ ಬಳಿಕ ಮೂಡಬಿದಿರೆಯಲ್ಲಿ ಸ್ವಯಂ ಘೋಷಿತ ಬಂದ್ ಆಚರಣೆ ಮಾಡಲಾಗಿತ್ತು. ಭಜರಂಗದಳ ಆರೋಪಿಗಳನ್ನು ಬಂಧಿಸದಿದ್ದರೆ ದಕ್ಷಿಣ ಕನ್ನಡ ಬಂದ್ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಇದರ ನಡುವೆಯೇ ವಾಮನ ಪೂಜಾರಿ ಸಾವು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಪ್ರಶಾಂತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಮನ ಪೂಜಾರಿ ಅವರನ್ನು ಹಲವು ಬಾರಿ ಪೊಲೀಸರು ವಿಚಾರಣೆ ಮಾಡಿದ್ದರು. ವಾಮನ ಪೂಜಾರಿ ಆತ್ಮಹತ್ಯೆ ಮಾಡಿಕೊಂಡರೆ ಅಥವ ಅವರಿಗೆ ಬೆದರಿಕೆ ಇತ್ತೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.