ಧಾರ್ಮಿಕ ಕೇಂದ್ರಗಳ ಸ್ವಚ್ಛತೆಗೆ ಗಡುವು ನಿಗದಿ : ವೀರೇಂದ್ರ ಹೆಗ್ಗಡೆ
ದೇವಸ್ಥಾನ, ಚರ್ಚ್, ಮಸೀದಿ 2017ರ ಜ.13ರೊಳಗೆ ಒಳಗಿನ ಹಾಗೂ ಹೊರಗಿನ ಪರಿಸರವನ್ನು ಶುಚಿಗೊಳಿಸಿ ಪಾವಿತ್ರ್ಯ ಕಾಪಾಡಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಕರೆ ನೀಡಿದ್ದಾರೆ.
ಮಂಗಳೂರು, ಡಿಸೆಂಬರ್ 24: ಶ್ರೀಕ್ಷೇತ್ರ ಧರ್ಮಸ್ಥಳದ ಆಡಳಿತ ಮಂಡಳಿ ಆರಂಭಿಸಿರುವ ಸ್ವಚ್ಛತಾ ಅಭಿಯಾನಕ್ಕೆ ಹೊಸ ಡೆಡ್ ಲೈನ್ ನಿಗದಿಪಡಿಸಲಾಗಿದೆ. ದೇವಸ್ಥಾನ, ಚರ್ಚ್, ಮಸೀದಿ 2017ರ ಜ.13ರೊಳಗೆ ಒಳಗಿನ ಹಾಗೂ ಹೊರಗಿನ ಪರಿಸರವನ್ನು ಶುಚಿಗೊಳಿಸಿ ಪಾವಿತ್ರ್ಯ ಕಾಪಾಡಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಕರೆ ನೀಡಿದ್ದಾರೆ.
ಶ್ರದ್ಧಾ
ಕೇಂದ್ರಗಳಲ್ಲಿ
ಸ್ವಚ್ಛತೆ
ಪಾಲನೆಯೊಂದಿಗೆ
ಪಾವಿತ್ರ್ಯ
ರಕ್ಷಣೆ
ಬಗ್ಯೆ
ಭಕ್ತರಲ್ಲಿ
ಜಾಗೃತಿ
ಮೂಡಿಸಬೇಕು.
ಅವರು
ಶ್ರದ್ಧಾಕೇಂದ್ರಗಳಿಗೆ
ಬರುವಾಗ
ಮಾನಸಿಕವಾಗಿ
ಶುಚಿತ್ವ
ಕಾಪಾಡಲು
ಸಿದ್ಧರಾಗಬೇಕು,
ಬದ್ಧರಾಗಬೇಕು.
ಎಲ್ಲಾ
ಕೇಂದ್ರಗಳಲ್ಲಿ
ಶುಚಿತ್ವ
ಕಾಪಾಡವ
ಬಗ್ಯೆ
ಅಲ್ಲಲ್ಲಿ
ಫಲಕಗಳನ್ನು
ಹಾಕಬೇಕು.
ಸಾಕಷ್ಟು
ಶೌಚಾಲಯಗಳನ್ನು
ನಿರ್ಮಿಸಬೇಕು.
ಕಸಕಡ್ಡಿ
ಹಾಗೂ
ತ್ಯಾಜ್ಯ
ಬಿಸಾಡಲು
ಸೂಕ್ತ
ವ್ಯವಸ್ಥೆ
ಮಾಡಬೇಕು.
ವಾಹನಗಳ
ಪಾರ್ಕಿಂಗ್
ವ್ಯವಸ್ಥೆ
ಮಾಡಬೇಕು
ಎಂದು
ಅವರು
ಸಲಹೆ
ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿರುವ 18000 ಒಕ್ಕೂಟಗಳ ಮೂಲಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನ ಆಯೋಜಿಸಲಾಗಿದೆ. 2017ರ ಜನವರಿ 13ರೊಳಗೆ ಸ್ವಚ್ಛತಾ ಕಾರ್ಯ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಕಳೆದ 5 ದಿನಗಳಲ್ಲಿ ತಾನು ಕಾರ್ಕಳ, ಉಡುಪಿ, ಕುಂದಾಪುರ ಹಾಗೂ ಧಾರವಾಡದಲ್ಲಿ ಕೆಲವು ಶ್ರದ್ಧಾ ಕೇಂದ್ರಗಳಿಗೆ ಭೇಟಿ ನೀಡಿ ಮಾರ್ಗದರ್ಶನ ನೀಡಿರುವುದಾಗಿ ಹೆಗ್ಗಡೆಯವರು ತಿಳಿಸಿದರು.
ಕರಾವಳಿಯಲ್ಲಿ ಹಾಗೂ ಮಲೆನಾಡಿನಲ್ಲಿ ನೀರಿನ ಅಭಾವ ತೀವ್ರವಾಗುತ್ತಿದ್ದು ನೀರನ ಸದುಪಯೋಗಕ್ಕೆ ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಎಲ್ಲಾ ಕಡೆ ಉತ್ತಮ ಸ್ಪಂದನೆ ದೊರಕಿದೆ. ಕೊಂಚ ಜನ ಜಾಗೃತಿಯೂ ಮೂಡಿ ಬಂದಿದೆ ಎಂದರು. ಚರ್ಚ್ ಹಾಗೂ ಮಸೀದಿಗಳವರೂ ಈ ಬಗ್ಯೆ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.