ಕಟೀಲು ದುರ್ಗಾಪರಮೇಶ್ವರಿ ದೇವಿ ಬಗ್ಗೆ ಅವಹೇಳನಕಾರಿ ಸಂದೇಶ
ಮಂಗಳೂರು, ಆಗಸ್ಟ್ 31 : ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಧರ್ಮದ ಬಗ್ಗೆ ಹಾಗೂ ಕಟೀಲು ದುರ್ಗಾಪರಮೇಶ್ವರಿ ಬಗ್ಗೆ ಅವಹೇಳನ ಮಾಡಿದ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ. ಯುವಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆ ಸದಸ್ಯರು ಪೋಲಿಸ್ ಆಯುಕ್ತರಿಗೆ ಮನವಿ ಮಾಡಿದ್ದರು.
ಬಿ.ಮೂಡ
ನಿವಾಸಿ
ಎನ್ನಲಾದ
ಜಬ್ಬಾರ್
ಬಿ.ಸಿ.ರೋಡು
ಎಂಬಾತನ
ಮೇಲೆ
ಕಲಂ
295(ಎ)ರನ್ವಯ
ಪ್ರಕರಣ
ದಾಖಲಾಗಿದೆ.
ಕಳೆದ
ಕೆಲವು
ದಿನಗಳಿಂದ
ಫೇಸ್ಬುಕ್ನಲ್ಲಿ
ಧಾರ್ಮಿಕ
ವಿಚಾರವಾಗಿ
ಅವಹೇಳನಕಾರಿಯಾದ
ಬರಹಗಳು
ಹರಿದಾಡುತ್ತಿತ್ತು.[ಈ
ಮುಸ್ಲಿಂ
ಕುಟುಂಬದಲ್ಲಿ
30ನೇ
ಕೃಷ್ಣ
ಜನ್ಮಾಷ್ಟಮಿ
ಸಂಭ್ರಮ]
ಇದರಿಂದ ಸ್ಥಳೀಯವಾಗಿ ಶಾಂತಿಭಂಗ ಉಂಟಾಗುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ನಿರ್ದೇಶನದ ಮೇರೆಗೆ ಎಸ್ಐ ನಂದಕುಮಾರ್ ಸ್ವಯಂ ಪ್ರೇರಿತವಾಗಿ ಜಬ್ಬಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.[ಸಿಡ್ಲು ಮಲ್ಲಿಕಾರ್ಜುನನಿಗೆ ಟಿಬೆಟಿಯನ್ನರೇ ಭಕ್ತರು!]
ಆಗಸ್ಟ್
29ರಂದು
ಜಬ್ಬಾರ್
ಕಟೀಲು
ದುರ್ಗಾಪರಮೇಶ್ವರಿ
ದೇವಿ
ಹಾಗೂ
ಹಿಂದೂ
ಧರ್ಮದ
ಕುರಿತು
ಅವಹೇಳನಕಾರಿಯಾಗಿ
ಬರೆದಿದ್ದರು
ಎನ್ನಲಾಗಿದೆ.
ಹಿಂದೂ
ಜಾಗರಣ
ವೇದಿಕೆ
ಸದಸ್ಯರು
ಈ
ಕುರಿತು
ನಗರ
ಪೊಲೀಸ್
ಆಯುಕ್ತರು,
ಜಿಲ್ಲಾಧಿಕಾರಿಗಳಿಗೆ
ಮನವಿ
ಸಲ್ಲಿಸಿದ್ದರು,
ಕ್ರಮಕ್ಕೆ
ಒತ್ತಾಯಿಸಿದ್ದರು.
ಹಿಂದು ಜಾಗರಣ ವೇದಿಕೆ, ಕರಾವಳಿ ಸಾಂಸ್ಕೃತಿಕ ಪರಿಷತ್ ಉಳ್ಳಾಲ ಸದಸ್ಯರು ಕೂಡ ಪೋಲಿಸ್ ಆಯುಕ್ತರಿಗೆ ಈ ವಿಷಯದ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಪೋಲಿಸರು ಯುವಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.