ದೀಪಕ್ ರಾವ್ ಹತ್ಯೆ ಹಿಂದೆ ಬಿಜೆಪಿ ಕೈವಾಡ: ಶಾಸಕ ಮೊಯ್ದಿನ್ ಬಾವಾ ಆರೋಪ
ಮಂಗಳೂರು, ಜನವರಿ 4: ಕಾಟಿಪಳ್ಳದಲ್ಲಿ ನಡೆದ ದೀಪಕ್ ರಾವ್ ಹತ್ಯೆಯ ಹಿಂದೆ ಬಿಜೆಪಿಯ ರಾಜಕೀಯ ಉದ್ದೇಶವಿದೆ ಎಂದು ಮಂಗಳೂರು ಉತ್ತರ ಶಾಸಕ ಮೊಯ್ದಿನ್ ಬಾವಾ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕುರಿತು ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಯನ್ನು ಕೋರಲಾಗಿದೆ ಎಂದು ಹೇಳಿದರು.
ದೀಪಕ್ ರಾವ್ ಹತ್ಯೆ ಆರೋಪಿಗಳಾದ ಪಿಂಕಿ ನವಾಜ್ನ ಸಹೋದರ ಲಾದನ್ ಇಸ್ಮಾಯಿಲ್ ಹಾಗೂ ಆತನ ಅಕ್ಕನ ಗಂಡ (ಬಾವ) ಕಾಪುವಿನಲ್ಲಿ ಬಿಜೆಪಿ ಕಾರ್ಯಕರ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹತ್ಯೆಯ ಹಿಂದೆ ಇರಬಹುದಾದ ಬಿಜೆಪಿಯ ರಾಜಕೀಯ ಕೈವಾಡದ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕಾಗಿದೆ ಎಂದು ಅವರು ಹೇಳಿದರು.
ನಾನು
ಶಾಸಕನಾದ
ಮೇಲೆ
4
ವರ್ಷ
8
ತಿಂಗಳ
ಕಾಲ
ಈ
ಕ್ಷೇತ್ರದಲ್ಲಿ
ಯಾವುದೇ
ಅಹಿತಕರ
ಘಟನೆ
ನಡೆದಿಲ್ಲ.
ಚುನಾವಣೆ
ಸಮೀಪಿಸುತ್ತಿರುವಾಗ
ಏಕಾಏಕಿ
ಹತ್ಯೆ
ಘಟನೆ
ನಡೆದಿರುವುದು
ಆತಂಕ
ಮೂಡಿಸಿದೆ
ಎಂದು
ಅವರು
ವಿಷಾದ
ವ್ಯಕ್ತಪಡಿಸಿದರು
.
ನನ್ನ ಕ್ಷೇತ್ರದ ನಾಗರಿಕರಿಗೆ ರಕ್ಷಣೆ ನೀಡಬೇಕು. ಅದಕ್ಕಾಗಿ ಇನ್ನಷ್ಟು ಭದ್ರತೆಗೆ ಪೊಲೀಸರನ್ನು ನಿಯೋಜಿಸುವಂತೆ ಗೃಹ ಇಲಾಖೆಯನ್ನು ಕೋರಿದ್ದೇನೆ ಎಂದು ಬಾವಾ ಹೇಳಿದರು.
ದುಷ್ಕರ್ಮಿಗಳಿಂದ ಹತ್ಯೆಯಾದ ದೀಪಕ್ ರಾವ್ ಕುಟುಂಬಕ್ಕೆ ನಾನು ವೈಯಕ್ತಿಕವಾಗಿ 5 ಲಕ್ಷ ಮೊತ್ತ ಪರಿಹಾರ ನೀಡುತ್ತೇನೆ. ಅದೇ ರೀತಿ ನಿನ್ನೆ ರಾತ್ರಿ ಚೂರಿ ಇರಿತದಿಂದ ಗಾಯಗೊಂಡ ಬಷೀರ್ ಅವರಿಗೆ 2 ಲಕ್ಷ ಹಾಗೂ ಮುಬಷಿರ್ ಅವರಿಗೆ 50 ಸಾವಿರವನ್ನು ವೈಯಕ್ತಿಕವಾಗಿ ನೀಡುತ್ತೇನೆ. ಅಲ್ಲದೆ ಗಾಯಾಳುಗಳ ಎಲ್ಲಾ ಆಸ್ಪತ್ರೆ ವೆಚ್ಚಗಳನ್ನು ಭರಿಸುವಂತೆ ಜಿಲ್ಲಾಡಳಿತವನ್ನು ಕೋರುತ್ತೇನೆ ಎಂದು ಅವರು ಹೇಳಿದರು.