ದ. ಕನ್ನಡ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ ಬಿಡುಗಡೆಯಾದ ಅನುದಾನವೆಷ್ಟು?
ಮಂಗಳೂರು, ಏಪ್ರಿಲ್ 10: ವಿಧಾನಸಭೆ ಚುನಾವಣೆ ಮತ್ತೆ ಸಮೀಪಿಸಿದೆ. ಮೇ 12ರಂದು ಪ್ರತಿಯೊಬ್ಬ ಪ್ರಜೆಯೂ ತಮ್ಮ ಮತದಾನದ ಹಕ್ಕು ಚಲಾಯಿಸುವ, ಆ ಮೂಲಕ ತಮ್ಮನಾಳುವವರನ್ನು ಆಯ್ಕೆ ಮಾಡುವ ಕಾಲ ಕೂಡಿ ಬಂದಿದೆ.
ಈ ಸಂದರ್ಭದಲ್ಲಿ ಕಳೆದ 5 ವರ್ಷಗಳಲ್ಲಿ ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಹಾಲಿ ಶಾಸಕರು ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಸಮಯವಿದು. ಈ ಹಿನ್ನಲೆಯಲ್ಲಿ 'ಒನ್ಇಂಡಿಯಾ ಕನ್ನಡ' ಆರ್.ಟಿ.ಐ ಮೂಲಕ ಅರ್ಜಿ ಸಲ್ಲಿಸಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕಳೆದ 5 ವರ್ಷಗಳಲ್ಲಿ ಬಿಡುಗಡೆಯಾದ ಹಣದ ಮಾಹಿತಿ ಪಡೆದುಕೊಂಡಿದೆ.
ಕುಡಿಯುವ ನೀರಿಗಾಗಿ ಮಂಡ್ಯಕ್ಕೆ ಸಿಕ್ಕ ಅನುದಾನ ಎಷ್ಟು?
2013-14ರಲ್ಲಿ ಪ್ರತೀ ಕ್ಷೇತ್ರಗಳಿಗೆ ತಲಾ 196.4 ಕೋಟಿ ಹಣ ಬಿಡುಗಡೆಯಾಗಿದ್ದರೆ, 2014-15, 15-16, 16-17 ಮತ್ತು 17-18ರಲ್ಲಿ ತಲಾ 200 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಇದರಲ್ಲಿ ವಿಶೇಷವಾಗಿ 2014-15ರಲ್ಲಿ ಬೆಳ್ತಂಗಡಿ ಶಾಸಕರು ಕೇವಲ 200 ರಲ್ಲಿ 175.08 ಕೋಟಿ ರೂಪಾಯಿ ಹಣ ಬಳಸಿದ್ದಾರೆ. ಇನ್ನು ಜೆ.ಆರ್.ಲೋಬೋ 2015-16ರಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ 177.86 ಕೋಟಿ ಹಣವನ್ನು ಮಾತ್ರ ಖರ್ಚು ಮಾಡಿದ್ದಾರೆ.
ಅಂದಹಾಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಬಿಜೆಪಿಯ ಎಸ್. ಅಂಗಾರ ಶಾಸಕರಾಗಿದ್ದಾರೆ. ಉಳಿದ ಎಲ್ಲಾ ಕಡೆಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಬೆಳ್ತಂಗಡಿ ಕ್ಷೇತ್ರವನ್ನು ವಸಂತ ಬಂಗೇರ ಪ್ರತಿನಿಧಿಸುತ್ತಿದ್ದರೆ, ಪುತ್ತೂರನ್ನು ಶಕುಂತಳಾ ಶೆಟ್ಟಿ, ಮೂಡಬಿದಿರೆಯನ್ನು ಅಭಯಚಂದ್ರ ಜೈನ್, ಮಂಗಳೂರು ದಕ್ಷಿಣವನ್ನು ಜೆ.ಆರ್.ಲೋಬೋ, ಮಂಗಳೂರು ಉತ್ತರವನ್ನು ಮೊಯ್ದಿನ್ ಬಾವಾ, ಬಂಟ್ವಾಳವನ್ನು ರಮಾನಾಥ ರೈ ಮತ್ತು ಮಂಗಳೂರು ಕ್ಷೇತ್ರವನ್ನು ಯುಟಿ ಖಾದರ್ ಪ್ರತಿನಿಧಿಸುತ್ತಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಶಾಸಕರ ನಿಧಿ ಬಳಕೆ: ಸುರೇಶ್ ಗೌಡ ನಂಬರ್ ಒನ್
ಆರ್.ಟಿ.ಐ ಮೂಲಕ ಪಡೆದುಕೊಂಡ ಮಾಹಿತಿಯ ಇನ್ನಿತರ ಸಂಪೂರ್ಣ ವಿವರಗಳು ಈ ಚಿತ್ರದಲ್ಲಿದೆ.