ಕ್ರಿಸ್ಮಸ್, ಹೊಸವರ್ಷಕ್ಕೆ ವಿಶೇಷ ಹಾಲಿಡೇ ರೈಲುಗಳು
ಮಂಗಳೂರು, ಡಿ.22: ಪ್ರತಿ ವರ್ಷದಂತೆ ಭಾರತೀಯ ರೈಲ್ವೆ ಈ ಬಾರಿ ಕ್ರಿಸ್ಮಸ್ ಹಾಗೂ ಹೊಸ ವರ್ಷ ರಜಾ ಸಂದರ್ಭದಲ್ಲಿ ಕೊಂಕಣ ರೈಲು ಮಾರ್ಗದಲ್ಲಿ ವಿಶೇಷ ರೈಲುಗಳನ್ನು ಓಡಿಸಲು ಮುಂದಾಗಿದೆ. ನಾಲ್ಕು ಹೊಸ ರೈಲುಗಳು ಈ ಸೀಸನ್ ನಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಸಿಗಲಿದೆ.
ಇಂದೋರ್- ಕೊಚ್ಚುವೇಲಿ, ಅಹ್ಮದಾಬಾದ್- ಮಂಗಳೂರು ಜಂಕ್ಷನ್, ಮುಂಬೈ ಸೆಂಟ್ರಲ್-ಮಂಗಳೂರು ಜಂಕ್ಷನ್ ಹಾಗೂ ಬಾಂದ್ರಾ ಟರ್ಮಿನಸ್- ಕರ್ಮಾಲಿ-ನಡುವೆ ಹೊಸ ರೈಲು ಗಳು ಓಡಾಡಲಿವೆ.[ರೈಲ್ವೆ ಬೆಡ್ಶೀಟ್ ಖರೀದಿಸಿ, ಸುಖ ನಿದ್ರೆ ಮಾಡಿ]
ಇಂದೋರ್-
ಕೊಚ್ಚುವೇಲ್
ಸೂಪರ್ಫಾಸ್ಟ್
ಸುವಿಧಾ
ಎಕ್ಸ್ಪ್ರೆಸ್
ರೈಲು
ಡಿ.22
ಮತ್ತು
29ರಂದು
ಇಂದೋರ್
ನಿಂದ
ರಾತ್ರಿ
9:05ಕ್ಕೆ
ಹೊರಟು
ಮೂರನೆ
ದಿನ
ಸಂಜೆ
7:10ಕ್ಕೆ
ಕೊಚ್ಚುವೇಲ್
ತಲುಪಲಿದೆ.
ಅದೇ
ರೀತಿ
ಕೊಚ್ಚುವೇಲ್ನಿಂದ
ಡಿ.25
ಮತ್ತು
ಜ.1ರಂದು
ಪೂರ್ವಾಹ್ನ
11ಕ್ಕೆ
ಹೊರಟು
ಮೂರನೆ
ದಿನ
ಮುಂಜಾನೆ
5:15ಕ್ಕೆ
ಇಂದೋರ್
ತಲುಪಲಿದೆ.
ಈ ರೈಲಿಗೆ ಉಜ್ಜೈನಿ, ನಗ್ಡಾ, ವಡೋದರಾ, ಸೂರತ್, ವಾಪಿ, ವಾಸೈ ರೋಡ್, ಪನ್ವೇಲ್, ರೋಹಾ, ಚಿಪ್ಳುಣ್, ರತ್ನಗಿರಿ, ಮಡಂಗಾವ್, ಕಾರವಾರ, ಉಡುಪಿ, ತೋಕೂರು, ಮಂಗಳೂರು ಜಂಕ್ಷನ್, ಕಾಸರಗೋಡು, ಕಣ್ಣೂರು, ಶೊರ್ನೂರು, ತ್ರಿಶ್ಶೂರ್, ಎರ್ನಾಕುಲಂ, ಅಲೆಪ್ಪಿ, ಕನ್ಯಾಕುಲಂ ಹಾಗೂ ಕೊಲ್ಲಂಗಳಲ್ಲಿ ನಿಲುಗಡೆಯಿದೆ.[ರೈಲು ಹೊರಡುವ ಅರ್ಧ ತಾಸು ಮುನ್ನ ಬುಕ್ಕಿಂಗ್]
ಅಹ್ಮದಾಬಾದ್-ಮಂಗಳೂರು ಜಂಕ್ಷನ್ ಸೂಪರ್ಫಾಸ್ಟ್ ಸ್ಪೆಷಲ್ ಎಕ್ಸ್ಪ್ರೆಸ್ ರೈಲು ಡಿ.24 ಮತ್ತು 31ರಂದು ಸಂಜೆ 4:50ಕ್ಕೆ ಅಹ್ಮದಾಬಾದ್ ನಿಂದ ಹೊರಟು ಮೂರನೆ ದಿನ ಸಂಜೆ 6:15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಅದೇ ರೀತಿ ಡಿ.25 ಮತ್ತು ಜ.1ರಂದು ರಾತ್ರಿ 9:30ಕ್ಕೆ ಮಂಗಳೂರು ಜಂಕ್ಷನ್ನಿಂದ ಹೊರಟು ಮೂರನೆ ದಿನ ಮುಂಜಾನೆ 12:20ಕ್ಕೆ ಅಹ್ಮದಾಬಾದ್ ತಲುಪಲಿದೆ.
ಈ ರೈಲಿಗೆ ನಡಿಯಾಡ್, ಆನಂದ್, ವಡೋದರಾ, ಸೂರತ್, ವಲ್ಸಾಡ್, ವಾಪಿ, ಧನುರೋಡ್, ವಸೈ ರೋಡ್, ಪನ್ವೇಲ್, ರೋಹಾ, ಖೇಡ್, ಚಿಪ್ಳುಣ್, ಸಂಗಮೇಶ್ವರ, ರತ್ನಗಿರಿ, ಕನಕವಲ್ಲಿ, ಕುಡಾಲ್, ಸಾವಂತವಾಡಿ, ಮಡಂಗಾವ್, ಕಾರವಾರ, ಕುಮಟಾ, ಭಟ್ಕಳ, ಬೈಂದೂರು, ಉಡುಪಿ, ತೋಕೂರುಗಳಲ್ಲಿ ನಿಲುಗಡೆ ಇದೆ.
ಮುಂಬೈ ಸೆಂಟ್ರಲ್- ಮಂಗಳೂರು ಜಂಕ್ಷನ್ ಸೂಪರ್ಫಾಸ್ಟ್ ಸ್ಪೆಷಲ್ ರೈಲು ಡಿ.23 ಮತ್ತು 30ರಂದು ರಾತ್ರಿ 11:15ಕ್ಕೆ ಮುಂಬೈ ಸೆಂಟ್ರಲ್ ಬಿಟ್ಟು ಮರುದಿನ ಸಂಜೆ 7:15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.[ಕೊಂಕಣ ರೈಲ್ವೆ ಮಾಹಿತಿ ಪಡೆಯಲು ಹೊಸ ಸಹಾಯವಾಣಿ]
ಡಿ.24 ಮತ್ತು 31ರಂದು ರಾತ್ರಿ 10:30ಕ್ಕೆ ಮಂಗಳೂರು ಜಂಕ್ಷನ್ನಿಂದ ಹೊರಟು ಮರುದಿನ ಸಂಜೆ 7:25ಕ್ಕೆ ಮುಂಬೈ ತಲುಪಲಿದೆ.
ಈ ರೈಲಿಗೆ ಬೋರಿವಿಲಿ, ವಸೈ ರೋಡ್, ಪನ್ವೇಲ್, ರೋಹಾ, ಖೇಡ್, ಚಿಫ್ಪುಣ್, ಸಂಗಮೇಶ್ವರ, ರತ್ನಗಿರಿ, ಕನಕವಲ್ಲಿ, ಕುಡಾಲ್, ಸಾವಂತವಾಡಿ, ಕರ್ಮಾಲಿ, ಮಡಂಗಾವ್, ಕಾರವಾರ, ಕುಮಟ, ಭಟ್ಕಳ, ಬೈಂದೂರು, ಉಡುಪಿ ಮತ್ತು ತೋಕೂರು ನಿಲ್ದಾಣಗಳಲ್ಲಿ ನಿಲುಗಡೆ ಇದೆ ಎಂದು ಭಾರತೀಯ ರೈಲ್ವೆ ಪ್ರಕಟಿಸಿದೆ.