ಎಂ.ಚಂದ್ರಶೇಖರ್ ಮಂಗಳೂರು ನೂತನ ಪೊಲೀಸ್ ಆಯುಕ್ತ
ಮಂಗಳೂರು, ಜನವರಿ 04 : ಮಂಗಳೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ಎಂ.ಚಂದ್ರಶೇಖರ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಮಂಗಳೂರು ಪೊಲೀಸ್ ಆಯುಕ್ತರಾಗಿದ್ದ ಎಸ್.ಮುರುಗನ್ ಅವರನ್ನು ಸರ್ಕಾರ ಜನವರಿ 1ರಂದು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು.
ಭಾನುವಾರ
ಎಸ್.ಮುರುಗನ್
ಅವರು
ನೂತನ
ಆಯುಕ್ತ
ಎಂ.ಚಂದ್ರಶೇಖರ್
ಅವರಿಗೆ
ಅಧಿಕಾರ
ಹಸ್ತಾಂತರ
ಮಾಡಿದರು.
ಅಧಿಕಾರ
ಸ್ವೀಕರಿಸಿದ
ಬಳಿಕ
ಮಾತನಾಡಿದ
ಎಂ.ಚಂದ್ರಶೇಖರ್
ಅವರು,
'ಮಂಗಳೂರು
ನಗರದಲ್ಲಿ
ಕಾನೂನು
ಸುವ್ಯವಸ್ಥೆ
ಕಾಪಾಡುವುದು,
ಪೊಲೀಸ್
ವ್ಯವಸ್ಥೆಯನ್ನು
ಜನಸ್ನೇಹಿಯಾಗಿ
ಮಾಡಲು
ಆದ್ಯತೆ
ನೀಡಲಾಗುತ್ತದೆ'
ಎಂದರು.
[ಕರಾವಳಿ
ಭಾಗದಲ್ಲಿ
ಒಂದು
ವರ್ಷದಲ್ಲಿ
217
ಕೊಲೆ]
ಎಂ.ಚಂದ್ರಶೇಖರ್ ಅವರು ಬೆಂಗಳೂರು ನಗರ ಅಪರಾಧ ವಿಭಾಗದ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಸರ್ಕಾರ ಜನವರಿ 1ರಂದು ಐಜಿಪಿ ಶ್ರೇಣಿಗೆ ಅವರಿಗೆ ಬಡ್ತಿ ನೀಡಿ, ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ನೇಮಕಮಾಡಿ ಆದೇಶ ಹೊರಡಿಸಿತ್ತು. [ಪೊಲೀಸ್ ಇಲಾಖೆಯಲ್ಲಿ ಬಡ್ತಿ, ವರ್ಗಾವಣೆ : ಇಲ್ಲಿದೆ ಪಟ್ಟಿ]
ಮಂಗಳೂರು ಪೊಲೀಸ್ ಆಯುಕ್ತರಾಗಿದ್ದ ಎಸ್.ಮುರುಗನ್ ಅವರನ್ನು ಪೂರ್ವವಲಯದ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. 2015ರ ಜನವರಿಯಲ್ಲಿ ಎಸ್.ಮುರಗನ್ ಅವರು ಮಂಗಳೂರು ಪೊಲೀಸ್ ಆಯುಕ್ತರಾಗಿ ಅಧಿಕಾರವಹಿಸಿಕೊಂಡಿದ್ದರು. [ಕರ್ನಾಟಕ ಲೋಕಾಯುಕ್ತದಲ್ಲಿ ಹಲವು ಅಧಿಕಾರಿಗಳ ವರ್ಗಾವಣೆ]
2016ರ ಜನವರಿ 1 ರಂದು ಕರ್ನಾಟಕ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಭಾರೀ ಬದಲಾವಣೆ ಮಾಡಿತ್ತು. 15 ಅಧಿಕಾರಿಗಳ ಬಡ್ತಿ, ವರ್ಗಾವಣೆ ಸಹಿತ ಒಟ್ಟು 42 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು.