ಮಂಗಳೂರು : ಬಿಲ್ಡರ್ ಮನೆಯಲ್ಲಿ 18 ಲಕ್ಷ ದೋಚಿದ ಕೆಲಸದವರು
ಮಂಗಳೂರು, ಜುಲೈ 04 : ಕೆಲಸಕ್ಕೆ ಬಂದ ಕೆಲಸದಾಳುಗಳು ಮನೆಗೆ ಕನ್ನ ಹಾಕಿ 18 ಲಕ್ಷ ರೂ. ದೋಚಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಮಂಗಳೂರಿನ
ದೀರೆಬೈಲ್
ಸಮೀಪದ
ಕೊಂಚಡಿಯಲ್ಲಿ
ಶನಿವಾರ
ಸಂಜೆ
ಈ
ಘಟನೆ
ನಡೆದಿದೆ.
ನಗರದ
ಬಿಲ್ಡರ್
ನರಸಿಂಹ
ರಾವ್
ಅವರ
ಮನೆಯಲ್ಲಿ
ಕಳ್ಳತನ
ನಡೆದಿದೆ.
ಒಬ್ಬ
ಪುರುಷ
ಮತ್ತು
ಇಬ್ಬರು
ಮಹಿಳೆಯರು
ಮನೆಗೆ
ನುಗ್ಗುತ್ತಿರುವ
ದೃಶ್ಯ
ಸಿಸಿಟಿವಿಯಲ್ಲಿ
ಸೆರೆಯಾಗಿದೆ.
[1
ಲಕ್ಷ
ದೋಚಿದವರು
ಎರಡು
ದಿನದಲ್ಲೇ
ಸಿಕ್ಕಿಬಿದ್ದರು]
ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆಗಮಿಸಿದ ಕಳ್ಳರು, ಬಾಗಿಲಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಒಳ ನುಗ್ಗಿದ್ದಾರೆ. ಮನೆಯಲ್ಲಿದ್ದ 18 ಲಕ್ಷ ರೂ. ನಗದು ಹಾಗೂ 3 ಮೊಬೈಲ್ ಫೋನ್ಗಳನ್ನು ಕದ್ದು ಪರಾರಿಯಾಗಿದ್ದಾರೆ. [ಕಿಲಾಡಿ ಮಂಗ, ಆಭರಣ ಮಳಿಗೆಯಿಂದ ಹಣ ದೋಚಿತು!]
ಆರೋಪಿಗಳನ್ನು ಉತ್ತರ ಕರ್ನಾಟಕ ಮೂಲದ ಶಿವು ಅಲಿಯಾಸ್ ಶಿವಕುಮಾರ್, ಜ್ಯೋತಿ ಎಂದು ಮನೆಯವರು ಗುರುತಿಸಿದ್ದಾರೆ. ಇವರು ನರಸಿಂಹ ರಾವ್ ಅವರ ಮನೆಗೆ ಕೆಲಸಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ. [ನೈಸ್ ರಸ್ತೆಯಲ್ಲಿ ಸುಲಿಗೆ ಮಾಡುತ್ತಿದ್ದ ನಕಲಿ ಪೊಲೀಸರು!]
ಕಾವೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದಾರೆ.